ಉಪ್ಪೂರು ಹೆದ್ದಾರಿಯಲ್ಲಿ ಟಿಪ್ಪರ್ ಪಲ್ಟಿ;ಇಬ್ಬರು ಸಾವು, ಓರ್ವ ಪಾರು
Team Udayavani, Jun 21, 2019, 11:31 AM IST
ಉಡುಪಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಉಪ್ಪೂರು ಹೆರಾಯಿಬೆಟ್ಟುವಿನ ಬಳಿ ಟಿಪ್ಪರೊಂದು ಶುಕ್ರವಾರ ಬೆಳಗ್ಗೆ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಇಬ್ಬರು ಸಾವನ್ನಪ್ಪಿದ್ದು, ಟಿಪ್ಪರ್ನಲ್ಲಿದ್ದ ಇನ್ನೋರ್ವರು ಪಾರಾಗಿದ್ದಾರೆ.
ಡಿವೈಡರ್ ಬಳಿ ಟಿಪ್ಪರ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು , ಒಳಗಿದ್ದ ನಾಗರಾಜ ಗಾಣಿಗ ಮತ್ತು ಕುಮಾರ್ ಎನ್ನುವವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ರಾಘವೇಂದ್ರ ಎನ್ನುವವರು ಪಾರಾಗಿದ್ದಾರೆ.
ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.