ಉಡುಪಿ: ಸರ್ವಂ ಯೋಗಮಯಂ… ರಾಮ್ದೇವ್ ನೇತೃತ್ವದ ಯೋಗ ಶಿಬಿರಕ್ಕೆ ಸಿದ್ಧತೆ
Team Udayavani, Nov 15, 2019, 8:03 PM IST
ರಾಮ್ದೇವ್ ಅವರು ನಡೆಸಿಕೊಡುವ ಯೋಗ ಶಿಬಿರ ವೇದಿಕೆಯ ಅಂತಿಮ ಸಿದ್ಧತೆ.
ಉಡುಪಿ: ಶನಿವಾರದಿಂದ ಐದು ದಿನಗಳ ಕಾಲ ಉಡುಪಿ ಶ್ರೀಕೃಷ್ಣಮಠದ ಪಾರ್ಕಿಂಗ್ ಪ್ರದೇಶದಲ್ಲಿ ಯೋಗಗುರು ಬಾಬಾ ರಾಮ್ದೇವ್ ನೇತೃತ್ವದಲ್ಲಿ ನಡೆಯುವ ಬೃಹತ್ ಯೋಗ ಶಿಬಿರಕ್ಕೆ ಉಡುಪಿ ಅಣಿಗೊಂಡಿದೆ.
ಶುಕ್ರವಾರ ರಾಮ್ದೇವ್ ಅವರನ್ನು ಬರಮಾಡಿಕೊಂಡ ಕರಾವಳಿ ಬೈಪಾಸ್ನಿಂದ ಕಲ್ಸಂಕ ಮಾರ್ಗ, ಪಾರ್ಕಿಂಗ್ ಪ್ರದೇಶಗಳನ್ನು ಕೇಸರಿ ಧ್ವಜಗಳಿಂದ ಅಲಂಕರಿಸಲಾಗಿದೆ. ವಿವಿಧ ಕಡೆಗಳಲ್ಲಿ ರಾಮ್ದೇವ್ ಮತ್ತು ಪರ್ಯಾಯ ಶ್ರೀಪಲಿಮಾರು ಸ್ವಾಮೀಜಿಯವರ ಭಾವಚಿತ್ರವಿರುವ ಬ್ಯಾನರ್ಗಳನ್ನು ಪ್ರದರ್ಶಿಸಲಾಗಿದೆ.
ಎರಡು ದಶಕಗಳಿಂದ ಜನರ ಬಾಯಲ್ಲಿ ಯೋಗವನ್ನು ಬ್ರಾಂಡ್ ಆಗಿ ಪರಿವರ್ತಿಸಿದ ರಾಮ್ದೇವ್ 2011ರಲ್ಲಿ ಉಡುಪಿಗೆ ಆಗಮಿಸಿ ಬೃಹತ್ ಯೋಗ ಶಿಬಿರವನ್ನು ನಡೆಸಿದ್ದರು. ಆಗ ಇರುವಂತ ಯೋಗ ವಾತಾವರಣ ಮಗದೊಮ್ಮೆ ಉಡುಪಿಯಲ್ಲಿ ಸೃಷ್ಟಿಯಾಗಿದೆ. ವಿಶೇಷವಾಗಿ ಆರೋಗ್ಯ ಕಾಳಜಿಯವರು ರಾಮ್ದೇವ್ ಅವರ ಸಂದೇಶವನ್ನು ನೇರವಾಗಿ ಆಲಿಸಲು ಕುತೂಹಲಿಗಳಾಗಿದ್ದಾರೆ. ಯೋಗಾಸನಗಳನ್ನು ಪ್ರದರ್ಶಿಸುತ್ತ ನಿರ್ದಿಷ್ಟ ಯೋಗಾಸನಗಳ ಪ್ರಯೋಜನಗಳನ್ನು ತಿಳಿಸುವ ಜತೆಗೆ ಇತರ ಸಂದೇಶಗಳನ್ನು ನೀಡುವುದು ರಾಮ್ದೇವ್ ವೈಶಿಷ್ಟ್ಯ. 2011ರಲ್ಲಿ ಹೀಗೆಯೇ ಅವರು ಮಾಡಿದ್ದರು. ಆಗ ಎಂಜಿಎಂ ಕಾಲೇಜಿನ ಮೈದಾನದಲ್ಲಿ ನಡೆದಿತ್ತು.
ಪಾರ್ಕಿಂಗ್ ಪ್ರದೇಶದಲ್ಲಿ ಸಾವಿರಾರು ಜನರು ಕುಳಿತುಕೊಂಡು ಯೋಗಾಸನಗಳನ್ನು ಮಾಡುವಂತಾಗಲು ಮಧ್ಯಭಾಗದಲ್ಲಿ ವ್ಯವಸ್ಥೆಗೊಳಿಸಲಾಗಿದೆ. ಹೊರಗಿನಿಂದ ಬರುವ ವಾಹನಗಳ ನಿಲುಗಡೆಗೆ ಪಾರ್ಕಿಂಗ್ ಪ್ರದೇಶದ ಬಳಿಯ ಗದ್ದೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಶಿಬಿರದ ಸಮಯ ಹೊರತುಪಡಿಸಿ ಶಿಬಿರ ಡೇರೆಯ ಸುತ್ತ ವಾಹನ ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ.
ಗುಜರಾತ್ನಿಂದ ಆರು ಲಾರಿಗಳಲ್ಲಿ ಬಂದ ಪರಿಕರಗಳಿಂದ ವೇದಿಕೆ ಸಿದ್ಧತೆ ಕೆಲಸ ಶುಕ್ರವಾರ ರಾತ್ರಿವರೆಗೂ ನಡೆಯುತ್ತಿತ್ತು. ಇದೆಲ್ಲ ಕೆಲಸಗಳನ್ನೂ ಪತಂಜಲಿ ಸಮಿತಿಯವರು ನೇರವಾಗಿ ನಿರ್ವಹಿಸುತ್ತಿದ್ದಾರೆ. ಹರಿದ್ವಾರ ಮತ್ತು ರಾಜ್ಯದ ವಿವಿಧ ಕಡೆಗಳಿಂದ ಬಂದ ಪತಂಜಲಿ ಸಮಿತಿಯ ಕಾರ್ಯಕರ್ತರು ಶಿಬಿರ ಸ್ಥಾನದ ಪಕ್ಕದಲ್ಲಿರುವ ಪಲಿಮಾರು ಮಠದ ರಾಮಧಾಮ ಅತಿಥಿಗೃಹದಲ್ಲಿದ್ದು ನಡೆಯುತ್ತಿರುವ ಕೆಲಸಗಳ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು
Udupi; ಎ. 24ರ ಬಳಿಕ ಹೊರಗಿನವರು ಕ್ಷೇತ್ರದಲ್ಲಿರುವಂತಿಲ್ಲ: ಜಿಲ್ಲಾಧಿಕಾರಿ
Kota Srinivas Poojary; ಮೀನುಗಾರರ ಸಮಸ್ಯೆ, ಬೇಡಿಕೆಗಳಿಗೆ ಧ್ವನಿಯಾಗುವೆ
Veerappa Moily; ದೇಶಕ್ಕೆ ಕ್ರಿಕೆಟ್ ಕಾಮೆಂಟ್ರಿಯನ್ ಬೇಕಿಲ್ಲ
Manipal; ಟ್ಯಾಪ್ಮಿ 38ನೇ ಘಟಿಕೋತ್ಸವ: 510 ಎಂಬಿಎ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
MUST WATCH
ಹೊಸ ಸೇರ್ಪಡೆ
Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ