ಉಡುಪಿ: 2 ಸಾವು, 217 ಪಾಸಿಟಿವ್
Team Udayavani, Aug 26, 2020, 12:21 AM IST
ಸಾಂದರ್ಭಿಕ ಚಿತ್ರ
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮಂಗಳವಾರ 217 ಕೋವಿಡ್ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಉಡುಪಿ ತಾಲೂಕಿನ 87 ವರ್ಷದ ಪುರುಷ ಹಾಗೂ ಕುಂದಾಪುರದ 67 ವರ್ಷದ ಪುರುಷ ಸಾವನ್ನಪ್ಪಿದ್ದಾರೆ. ಮಂಗಳವಾರ ಪಾಸಿಟಿವ್ ಕಂಡುಬಂದವರಲ್ಲಿ ರೋಗಲಕ್ಷಣವುಳ್ಳ 50 ಪುರುಷರು, 31 ಮಹಿಳೆಯರು, ರೊಗಲಕ್ಷಣವಿಲ್ಲದ 59 ಪುರುಷರು, 77 ಮಹಿಳೆಯರು ಸೇರಿದ್ದಾರೆ.
ಉಡುಪಿಯ 122, ಕುಂದಾಪುರದ 40, ಕಾರ್ಕಳದ 51, ಅನ್ಯ ಜಿಲ್ಲೆಯ 4 ಮಂದಿಗೆ ಸೋಂಕು ದೃಢಪಟ್ಟಿದೆ. 59 ಮಂದಿ ಕೋವಿಡ್ ಕೇರ್ ಸೆಂಟರ್ ಹಾಗೂ ಇತರ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. 158 ಮಂದಿ ಹೋಂ ಐಸೊಲೇಶನ್ನಲ್ಲಿದ್ದಾರೆ.
ಸೋಂಕು ಲಕ್ಷಣವುಳ್ಳ 945, ಸೋಂಕಿತರ ಸಂಪರ್ಕವುಳ್ಳ 200, ಸುಸ್ತು ಸಹಿತ ಇತರ ಸಮಸ್ಯೆಯುಳ್ಳ 47, ಹಾಟ್ಸ್ಪಾಟ್ ಸಂಪರ್ಕದ 196 ಸಹಿತ ಒಟ್ಟು 1,388 ಮಂದಿಯ ಮಾದರಿಗಳನ್ನು ಸಂಗ್ರಹಿಸಲಾಗಿದೆ. 1,233 ವರದಿಗಳು ನೆಗೆಟಿವ್ ಬಂದಿವೆ. ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ 50, ಹೋಂ ಐಸೋಲೇಷನ್ನಲ್ಲಿದ್ದ 130 ಸಹಿತ ಒಟ್ಟು 180 ಮಂದಿ ಗುಣಮುಖರಾಗಿದ್ದಾರೆ.
ಬೈಂದೂರು, ಕುಂದಾಪುರ: 15 ಮಂದಿಗೆ ಪಾಸಿಟಿವ್
ಕುಂದಾಪುರ: ಬೈಂದೂರು ತಾಲೂಕಿನ ಗೋಳಿಹೊಳೆಯ ಮೂವರಿಗೆ, ಕುಂದಾಪುರ ತಾಲೂಕಿನ 12 ಮಂದಿಗೆ ಸೇರಿದಂತೆ ಒಟ್ಟು 15 ಮಂದಿಗೆ ಮಂಗಳವಾರ ಕೊರೊನಾ ದೃಢಪಟ್ಟಿದೆ. ಕುಂದಾಪುರ ತಾಲೂಕಿನ ಪುರಸಭೆ ವ್ಯಾಪ್ತಿ, ಹೆಮ್ಮಾಡಿ ಮೂವರು, ವಂಡ್ಸೆ, ಕುಂಭಾಶಿಯ ತಲಾ ಇಬ್ಬರು, ಗಂಗೊಳ್ಳಿ, ಚಿತ್ತೂರಿನ ತಲಾ ಒಬ್ಬರು ಬಾಧಿತರಾಗಿದ್ದಾರೆ.
ಮೃತಪಟ್ಟು ಐದು ದಿನದ ಅನಂತರ ಪಾಸಿಟಿವ್ !
ಕೋಟ: ಮಹಿಳೆಯೋರ್ವರು ಮೃತಪಟ್ಟು 5 ದಿನಗಳ ಬಳಿಕ ಆಕೆಗೆ ಕೊರೊನಾ ಪಾಸಿಟಿವ್ ಎನ್ನುವ ವರದಿ ಬಂದಿದ್ದು ಮನೆಯನ್ನು ಸೀಲ್ಡೌನ್ ಮಾಡಲು ಬಂದ ಅಧಿಕಾರಿಗಳ ವಿರುದ್ಧ ಕುಟುಂಬಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಸಾಲಿಗ್ರಾಮದ ಕಾರ್ಕಡದಲ್ಲಿ ಸೋಮವಾರ ನಡೆದಿದೆ.
ಮಹಿಳೆ ಅನಾರೋಗ್ಯದಿಂದ ಕುಂದಾಪುರ ಸರಕಾರಿ ಆಸ್ಪತ್ರೆಗೆ, ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಆ. 19ರಂದು ಮೃತಪಟ್ಟಿದ್ದರು. ಸಾವಿಗೆ ಬಹು ಅಂಗಾಗ ವೈಫಲ್ಯ ಕಾರಣ ಎನ್ನಲಾಗಿತ್ತು. ಉಡುಪಿ ಸರಕಾರಿ ಆಸ್ಪತ್ರೆಯ ಮೂಲಕ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿತ್ತು. ಕೊರೊನಾ ಸೋಂಕಿನ ಲಕ್ಷಣವಿಲ್ಲ ಎಂದು ತಿಳಿಸಲಾಗಿತ್ತು. 5 ದಿನಗಳ ಅನಂತರ ಕೊರೊನಾ ಪಾಸಿಟಿವ್ ವರದಿ ನೀಡಿರುವುದರಿಂದ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದವರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ
ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ
ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು
ಕಾರ್ಗಿಲ್ ಯೋಧ ಮೆಲ್ವಿನ್ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ
ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್