ಉಡುಪಿ – ಮಣಿಪಾಲ ಹೆದ್ದಾರಿ: ಅಪಘಾತ ತಡೆಬೇಲಿ ನಿರ್ಮಾಣ
Team Udayavani, Jul 6, 2020, 5:25 AM IST
ಉಡುಪಿ: ಉಡುಪಿ – ಮಣಿಪಾಲ (ಈಶ್ವರನಗರ) ನಡುವೆ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಪೂರ್ಣಗೊಂಡಿದೆ.
ಏಕಾಏಕಿ ಜನರು, ದನಗಳು ರಸ್ತೆ ದಾಟುವುದರಿಂದ ಸಂಭವಿಸಬಹುದಾದ ಅಪಘಾತಗಳನ್ನು ತಡೆಯಲು ರಸ್ತೆ ವಿಭಾಜಕದ ಉದ್ದಕ್ಕೂ ರೇಲಿಂಗ್ ಅಳವಡಿಸಲಾಗುತ್ತಿದೆ.
ಈ ಮಾರ್ಗದಲ್ಲಿ ಈಗಾಗಲೇ ಹಲವು ಅಪಘಾತಗಳು ಸಂಭವಿಸಿರುವ ಹಿನ್ನೆಲೆಯಲ್ಲಿ ರಸ್ತೆ ಸುರಕ್ಷಾ ಸಮಿತಿಯು ಈ ಕ್ರಮ ಕೈಗೊಂಡಿದೆ ಎಂದು ಹೆದ್ದಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.