ಉಡುಪಿ: ಮಾದರಿ ಸಂಗ್ರಹ ಮತ್ತೆ ಹೆಚ್ಚಳ ; 16 ಪಾಸಿಟಿವ್, 273 ನೆಗೆಟಿವ್ ಪ್ರಕರಣ
Team Udayavani, Jul 4, 2020, 7:44 AM IST
ಉಡುಪಿ: ಬಹಳ ದಿನಗಳ ಬಳಿಕ ಗಂಟಲ ದ್ರವ ಮಾದರಿ ಸಂಗ್ರಹದಲ್ಲಿ ಮತ್ತೆ ನೆಗೆತ ಕಂಡಿದೆ ಮತ್ತು ಕೈಸೇರಬೇಕಾದ ವರದಿಗಳ ಸಂಖ್ಯೆಯೂ ಒಮ್ಮೆಲೆ ಹೆಚ್ಚಳ ಕಂಡಿದೆ. ಶುಕ್ರವಾರ ಒಂದೇ ದಿನ ಜಿಲ್ಲೆಯ ವಿವಿಧೆಡೆ 868 ಜನರ ಮಾದರಿಗಳನ್ನು ಆರೋಗ್ಯ ಇಲಾಖೆ ಕಾರ್ಯಕರ್ತರು ಸಂಗ್ರಹಿಸಿದರು ಮತ್ತು ವರದಿ ಕೈಸೇರಬೇಕಾದ ಗಂಟಲ ದ್ರವ ಮಾದರಿ ಸಂಖ್ಯೆ 1,417ಕ್ಕೇರಿದೆ. ಗುರು ವಾರವೂ ಇದೇ ರೀತಿ ವ್ಯಾಪಕ ಮಾದರಿ ಸಂಗ್ರಹ (811) ನಡೆದಿದೆ.
ಶುಕ್ರವಾರ 273 ನೆಗೆಟಿವ್ ಪ್ರಕರಣ ಮತ್ತು 16 ಪಾಸಿಟಿವ್ ಪ್ರಕರಣ ವರದಿಯಾಗಿದೆ. 16 ಜನರಲ್ಲಿ ಉಡುಪಿ ತಾಲೂಕಿನ ಒಂಬತ್ತು ಮಂದಿ, ಕುಂದಾಪುರ ತಾಲೂಕಿನ ನಾಲ್ವರು, ಕಾರ್ಕಳ ತಾಲೂಕಿನ ಮೂವರು ಇದ್ದಾರೆ. ಇವರಲ್ಲಿ ಮಹಾರಾಷ್ಟ್ರದಿಂದ ಬಂದ ನಾಲ್ವರು, ದ.ಕ. ಜಿಲ್ಲೆಯಿಂದ ಬಂದ ಇಬ್ಬರು, ಬೆಂಗಳೂರಿನಿಂದ ಬಂದ ಒಬ್ಬರು ಇದ್ದಾರೆ. ಇನ್ನು ಒಂಬತ್ತು ಮಂದಿ ಕೋವಿಡ್ ಸೋಂಕಿತರ ಪ್ರಾಥಮಿಕ ಸಂಪರ್ಕಿತರಿದ್ದಾರೆ.
ಮಹಿಳೆ- ಮಗು ಬಿಡುಗಡೆ
ಇತ್ತೀಚೆಗೆ ಅತಿ ಕ್ಲಿಷ್ಟಕರ ಎನಿಸಿದ ಸೋಂಕಿತ ಮಹಿಳೆಗೆ ಹೆರಿಗೆ ಮಾಡಿಸಿದ ಸಾಧನೆಗೈದ ಉಡುಪಿ ಡಾ|ಟಿಎಂಎ ಪೈ ಆಸ್ಪತ್ರೆ ವೈದ್ಯರು ಮಗುವಿಗೂ ಪರೀಕ್ಷೆ ನಡೆಸಿ ನೆಗೆಟಿವ್ ವರದಿ ಬಂದ ಬಳಿಕ ತಾಯಿ ಮಗುವನ್ನು ಸೋಮವಾರ ಬಿಡುಗಡೆಗೊಳಿಸಿದ್ದಾರೆ.
ಮಗುವಿಗೆ ನೆಗೆಟಿವ್
ಜು. 1ರಂದು ಮೃತಪಟ್ಟ ಹತ್ತು ತಿಂಗಳ ಮಗುವಿಗೆ ಸೋಂಕು ಇದ್ದಿರಲಿಲ್ಲ ಎಂದು ವರದಿ ಬಂದಿದೆ. ವಿಜಯಪುರ ಮೂಲದ ದಂಪತಿ ಲಾಕ್ಡೌನ್ ಅವಧಿಯಲ್ಲಿ ಊರಿಗೆ ಹೋಗಿ ಕಳೆದ ವಾರ ಬಂದಿದ್ದರು. ಮಗುವಿಗೆ ಜ್ವರ, ಉಸಿರಾಟದ ಸಮಸ್ಯೆ ಇತ್ತು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದರು. ಜು. 1ರಂದು ಆರೋಗ್ಯ ಗಂಭೀರ ಸ್ಥಿತಿಗೆ ತಲುಪಿದ ಬಳಿಕ ಮಗು ಮೃತಪಟ್ಟಿತ್ತು. ಮಗು ವಿನ ಗಂಟಲ ದ್ರವವನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಈಗ ವರದಿ ನೆಗೆಟಿವ್ ಬಂದಿದೆ.
ಇಬ್ಬರು ಗಂಭೀರ
ಗಂಭೀರ ಸ್ಥಿತಿಯಲ್ಲಿದ್ದ ಸೋಂಕಿತರಿಬ್ಬರಲ್ಲಿ ಒಬ್ಬರು ವಾರ್ಡ್ಗೆ ಸ್ಥಳಾಂತರಗೊಂಡಿದ್ದು ಇನ್ನೊಬ್ಬರು ಗಂಭೀರ ಸ್ಥಿತಿಯಲ್ಲಿ ಇದ್ದಾರೆ. ಈಗ ಒಟ್ಟು ಇಬ್ಬರು ವೆಂಟಿಲೇಟರ್ ಸಹಾಯದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೀಲ್ಡೌನ್
ಕೋವಿಡ್ ಪಾಸಿಟಿವ್ ಪ್ರಕರಣ ವರದಿಯಾದ ಹಿನ್ನೆಲೆಯಲ್ಲಿ ಮಣಿಪಾಲದಲ್ಲಿ ಒಂದು ಫ್ಲ್ಯಾಟ್, ಬ್ರಹ್ಮಗಿರಿಯಲ್ಲಿ ಒಂದು ಫ್ಲ್ಯಾಟ್, ಕಿದಿಯೂರು ಗ್ರಾಮದಲ್ಲಿ ಒಂದು ಫ್ಲ್ಯಾಟ್ನ್ನು ಸೀಲ್ಡೌನ್ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
MUST WATCH
ಹೊಸ ಸೇರ್ಪಡೆ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Festivals: ಹಬ್ಬಗಳು ಮರೆಯಾಗುತ್ತಿವೆಯೇ?
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ