ಶೀರೂರು ಮಠಕ್ಕೆ ನೂತನ ಪೀಠಾಧಿಪತಿಯಾಗಿ ವೇದವರ್ಧನ ತೀರ್ಥರು ನೇಮಕ
Team Udayavani, May 14, 2021, 2:24 PM IST
ಉಡುಪಿ : ಶ್ರೀ ಶೀರೂರು ಮಠಕ್ಕೆ ನೂತನ ಪೀಠಾಧಿಪತಿ ನೇಮಕ ಮಾಡಲಾಗಿದೆ. 31 ಪೀಠಾಧಿಪತಿಯಾಗಿ ಶ್ರೀ ಶ್ರೀ ವೇದವರ್ಧನ ತೀರ್ಥರನ್ನು ನೇಮಕ ಮಾಡಲಾಗಿದೆ
ಶುಕ್ರವಾರ ಮಧ್ಯಾಹ್ನ 12. 35ಕ್ಕೆ ಕೋವಿಡ್ ನಿಯಮಾನುಸಾರ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, ಕಾರ್ಯಕ್ರಮದಲ್ಲಿ 40 ಜನರು ಮಾತ್ರ ಭಾಗಿಯಾಗಿದ್ದರು.
ಶೀರೂರು ಮಠದ ಶ್ರೀಗಳು ಕಾಲವಾದ ನಂತರ ಮಠದ ಆಡಳಿತವನ್ನು ಸೋದೆ ಮಠವೇ ನೋಡಿಕೊಳ್ಳುತ್ತಿತ್ತು. ಇದೀಗ ಸೋದೆ ಮಠದ ಶ್ರೀ ವಿಶ್ವ ಮಲ್ಲಭ ತೀರ್ಥ ಸ್ವಾಮಿಗಳೇ ಶ್ರೀ ವೇದವರ್ಧನ ತೀರ್ಥರಿಗೆ ಪಟ್ಟಾಭಿಷೇಕ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಗಿರಿರಾಜ್ ಉಪಾದ್ಯ, ಪಾಡಿಗಾರ್ ಉಪಾದ್ಯ, ಉದಯ ಸರಳತ್ತಾಯರು ಸೇರದಂತೆ ಹಲವುರು ಭಾಗಿಯಾಗಿದ್ದರು.