ಮ್ಯಾಜಿಕ್ ಮಾಂತ್ರಿಕ ಪುತ್ರ ಮತ್ತು ಹಾಸ್ಯನಟ ತಂದೆಯ ಪರಿಶ್ರಮ: ತಾರಸಿಯಲ್ಲರಳಿದ ತರಕಾರಿ ತೋಟ

ತಾರಸಿ -ಮನೆಯಂಗಳ ತುಂಬ ಹಚ್ಚ ಹಸುರಿನ ಸಾವಯವ ತರಕಾರಿ

Team Udayavani, Apr 10, 2021, 9:59 AM IST

1

ಕಟಪಾಡಿ: ಆರೋಗ್ಯಕರವಾದ ತರಕಾರಿಯನ್ನು ನಾವೇ ಬೆಳೆದುಕೊಂಡು ನೆಮ್ಮದಿಯಿಂದ ಊಟ ಮಾಡಬೇಕೆಂಬ ಕನಸು ನನಸು ಮಾಡಿಕೊಳ್ಳಲು ತಾರಸಿ ತೋಟವನ್ನು ಬೆಳೆದ ಪೋರ, ಮ್ಯಾಜಿಕ್ ಮಾಂತ್ರಿಕ ಪ್ರಥಮ್ ಕಾಮತ್ ಮತ್ತು ಈತನ ತಂದೆ ಹಾಸ್ಯನಟ ನಾಗೇಶ್ ಕಾಮತ್ ಕಟಪಾಡಿ ಇದೀಗ ಹೆಮ್ಮೆಯ ಮುಗುಳ್ನಗು ಬೀರುತ್ತಿದ್ದಾರೆ

ಕೋವಿಡ್ ಲಾಕ್‍ಡೌನ್ ಸಮಯದಲ್ಲಿ ಮನೆಯಲ್ಲೇ ಇದ್ದು ಬೇಸತ್ತ ಕಲಾವಿದ ತಂದೆ ಮತ್ತು ಶಾಲೆಯಿಲ್ಲದೆ  ಬೇಸತ್ತು ಏನಾದರೂ ಸಾಧನೆ ಮಾಡಬೇಕೆಂದು ಹಠಕ್ಕೆ ಬಿದ್ದಿದ್ದ ಚಿತ್ರಕಾರ ಪುತ್ರ ಕೂಡಿಕೊಂಡು  ತಮ್ಮಲ್ಲಿರುವ ತೋಟದಲ್ಲಿ ತರಕಾರಿ ಗಿಡಗಳನ್ನು ನೆಟ್ಟರು. ಆದರೆ ನೆರಳು ಜಾಸ್ತಿ ಇದ್ದ ಕಾರಣ ಯಾವುದೇ ಫಲ ಕೊಡಲಿಲ್ಲ . ಪ್ರಥಮ್‍ನ ಪ್ರಥಮ ಪ್ರಯತ್ನ ನಿರಾಶದಾಯಕವಾಗಿತ್ತು.

ಅನಂತರ ಛಲಬಿಡದೆ ಒಂದಷ್ಟು ಆಸಕ್ತಿ, ಇನ್ನೊಂಚೂರು ಶ್ರದ್ಧೆ ಮತ್ತು ಸ್ವಲ್ಪ ಸಮಯವನ್ನು ನೀಡಿ ಕಾಂಕ್ರಿಟ್ ಕಾಡಿನ ನಡುವೆಯೂ ತಮ್ಮ ಮನೆಯ ಸುಮಾರು 1000 ಚ.ಮೀ. ತಾರಸಿಯಲ್ಲಿ  ಹಳೆ ಪ್ಲಾಸ್ಟಿಕ್ ಚೀಲ, ಸಿಮೆಂಟ್ ಚೀಲಗಳಲ್ಲಿ ಕೆಂಪು ಮಣ್ಣು, ಸಾವಯವ ಗೊಬ್ಬರ ತುಂಬಿಸಿ , ಬೆಂಡೆ, ಗುಳ್ಳ, ಕುಂಬಳಕಾಯಿ, ಹರಿವೆ ಸೊಪ್ಪು, ಬಸಳೆ, ಟೊಮೆಟೊ, ಮೆಣಸಿನಕಾಯಿ, ಕಲ್ಲಂಗಡಿ, ಒಂದೆಲಗ, ಪುದಿನ,  ಮನೆಗೆ ಬೇಕಾಗುವ ಇನ್ನಿತರ ತರಕಾರಿಗಳನ್ನು ಅತಿ ಕಡಿಮೆ ಖರ್ಚಿನಲ್ಲಿ ಬೆಳೆಸುತ್ತಿದ್ದಾರೆ.

ಸ್ವತಃ ಪೈಪ್ ಕಾಂಪೋಸ್ಟ್ ಮೂಲಕ ಸಾವಯವ ಗೊಬ್ಬರ ಬಳಕೆಯೊಂದಿಗೆ ಪ್ರತಿದಿನ ಬೆಳಿಗ್ಗೆ ಒಂದು ಅರ್ಧ ಗಂಟೆ ಗಿಡದ ನಿರ್ವಹಣೆಯ ಕೆಲಸ ಹಾಗೆಯೇ ಸಂಜೆ ಗಿಡಕ್ಕೆ ಒಂದು ಗಂಟೆ ನೀರು ಉಣಿಸುವ ಕಾರ್ಯವನ್ನು ತಾಯಿ ಸುಜಾತಾ ಕಾಮತ್ ಮಾರ್ಗದರ್ಶನ ಪಡೆದುಕೊಂಡು ನಿರ್ವಹಿಸುತ್ತಿದ್ದಾರೆ.

ಮನೆಯ ತಾರಸಿಯು ಹಾಳಾಗದಂತೆ  ಹಂಚುಗಳನ್ನು ಅಡಿಪಾಯವಾಗಿಸಿ ಅದರ ಮೇಲೆ ಮಣ್ಣು, ಗೊಬ್ಬರ ತುಂಬಿದ ಗೋಣಿ ಚೀಲವನ್ನು ಇರಿಸಿ ಕಳೆದ  ಡಿಸೆಂಬರ್- ಜನವರಿಯಲ್ಲಿ ನೆಡಲಾದ ತರಕಾರಿ ಗಿಡಗಳು ಉತ್ತಮ ಇಳುವರಿಯನ್ನು ನೀಡುತ್ತಿದ್ದು,  ಮನೆಗೆ ಬೇಕಾದಷ್ಟು ತರಕಾರಿ ಬಳಸಿ ಹತ್ತಿರದವರೆಗೂ ಕೊಡುವಷ್ಟು ತರಕಾರಿ ಬೆಳೆಯುತ್ತಿದ್ದಾರೆ

ಮಾರ್ಗದರ್ಶನ, ಮಾಹಿತಿಗಾಗಿ  ನಾಗೇಶ್ ಕಾಮತ್‍ರನ್ನು ಸಂಪರ್ಕಿಸಿ: 9886432197

 

ಉದಯವಾಣಿಯ ಕೃಷಿ, ಪೈಪ್ ಕಾಂಪೋಸ್ಟ್ ಮಾಹಿತಿಗಳನ್ನು ನಿರಂತರವಾಗಿ ಫಾಲೋ ಅಪ್ ಮಾಡಿದ್ದರಿಂದ ತಾರಸಿ ಕೃಷಿಯಲ್ಲಿ ಯಶಸ್ಸು ಕಂಡಿದ್ದೇವೆ.  ಮನೆಯಲ್ಲೇ ಬೆಳೆದ ತಾಜಾ, ಸಾವಯವ ತರಕಾರಿ ಬಳಕೆಯಿಂದ ಆರೋಗ್ಯಕ್ಕೂ ಉತ್ತಮ. ಹೆಚ್ಚುವರಿ ಫಸಲನ್ನು ಮಾರಾಟ ಮಾಡದೇ ನೆರೆ ಹೊರೆಯವರೊಂದಿಗೆ ಹಂಚಿಕೊಂಡು ಬಳಸಲಾಗುತ್ತದೆ. ಎಳವೆಯಲ್ಲಿಯೇ ಪುತ್ರನ ಕೃಷಿ ಪ್ರೇಮ ಮನಸ್ಸಿಗೆ ತೃಪ್ತಿಯನ್ನು ತಂದಿದೆ.

 ನಾಗೇಶ್ ಕಾಮತ್, ಹಾಸ್ಯನಟ, ಕಟಪಾಡಿ

ತರಕಾರಿ ತೋಟ ಮಾಡಬೇಕೆಂಬ ಹಂಬಲ, ಉದಯವಾಣಿ ಕೃಷಿ ಮಾಹಿತಿಯ ಮಾರ್ಗದರ್ಶನ, ತಂದೆ, ತಾಯಿಯ ಬೆಂಬಲದಿಂದ ಮನೆಯ ತಾರಸಿಯಲ್ಲಿ ತರಕಾರಿ ತೋಟ ಸಿದ್ಧಗೊಳಿಸಿದ್ದು, ಉತ್ತಮ ಇಳುವರಿ ಕಾಣುತ್ತಿದ್ದೇನೆ. ಟ್ಯಾಂಕ್‍ನಿಂದ ಓವರ್ ಫೆÇ್ಲೀ ಆದ ನೀರು ಕೂಡಾ ವೇಸ್ಟ್ ಆಗಬಾರದೆಂಬ ಉದ್ದೇಶದಿಂದ ಅಲ್ಲೂ ಗಿಡಗಳನ್ನು ಬೆಳೆಸಲಾಗುತ್ತಿದೆ. ಮನೆಯಂಗಳದಲ್ಲೂ ತರಕಾರಿ ತೋಟವನ್ನು ಬೆಳೆಯುತ್ತಿದ್ದೇನೆ .

ಪ್ರಥಮ್ ಕಾಮತ್, ಜಾದೂಗಾರ, ಚಿತ್ರ ಕಲಾವಿದ, ಕಟಪಾಡಿ

 

ಚಿತ್ರ, ವರದಿ: ವಿಜಯ ಆಚಾರ್ಯ, ಉಚ್ಚಿಲ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.