ಉಡುಪಿ ಪ್ರವಾಹದಿಂದ ಕಲಿಯುವುದೇನು


Team Udayavani, Sep 29, 2020, 4:22 AM IST

ಉಡುಪಿ ಪ್ರವಾಹದಿಂದ ಕಲಿಯುವುದೇನು

ಸರಿಸುಮಾರು 38 ವರ್ಷಗಳ ಬಳಿಕ ಉಡುಪಿಯಲ್ಲಿ ಸುರಿದ ಮಳೆಗೆ ಕೆಲಕಾಲ ಬಹುತೇಕ ಎಲ್ಲರೂ ಅಕ್ಷರಶಃ ದಿಗ್ಬಂಧನಕ್ಕೆ ಒಳಗಾಗ ಬೇಕಾಯಿತು. ಹೀಗಿದ್ದರೂ ಮುಂದಿನ ಮಳೆಗಾಲ ಹೇಗಿರಬಹುದು, ಏನೆಲ್ಲ ಅಪಾಯ ತಂದೊಡ್ಡಬಹುದು, ಅದಕ್ಕಾಗಿ ಯಾವ ರೀತಿ ಸಿದ್ಧತೆ ಮಾಡಿಕೊಳ್ಳಬಹುದು ಎನ್ನುವ ಚಿಂತೆ ಎಲ್ಲರನ್ನೂ ಕಾಡಿತ್ತು. ಈ ಬಾರಿಯ ಪ್ರವಾಹ ನಮಗೆ ಸಾಕಷ್ಟು ಕಲಿಸಿಕೊಟ್ಟಿದೆ. ಹೀಗಾಗಿ ಮುಂದಿನ ನಡೆ ಹೇಗಿರಬೇಕು ಎನ್ನುವ ಓದುಗರ ಅಭಿಪ್ರಾಯಗಳು ಇಲ್ಲಿವೆ.

ಕಠಿನ ನಿಯಮ ಜಾರಿಯಾಗಲಿ
ಹೊಳೆ ಬದಿ, ತಗ್ಗು ಮತ್ತು ಗುಡ್ಡ ಪ್ರದೇಶಗಳಲ್ಲಿ ಮನೆ, ವಸತಿ ಸಂಕೀರ್ಣಗಳಿಗೆ ಅನುಮತಿ ನೀಡುವ ಮೊದಲು ಸಂಬಂಧಪಟ್ಟ ಸರಕಾರಿ ಇಲಾಖೆಗಳು ವಸತಿ ಭೂಮಿಯ ನೈಸರ್ಗಿಕ ಗುಣಾವಗುಣಗಳಿಗೆ ಸರಿಯಾದ ಯೋಗ್ಯ ಕಠಿನ ಕಾನೂನು ಕಾಯ್ದೆಗಳನ್ನು ಜಾರಿಗೆ ತರಬೇಕು. ನೆರೆ ಹಾವಳಿಯಾಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡು ತಡೆಯೊಡ್ಡಬಹುದು. ಪರಿಹಾರದಿಂದ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಲು ಸಾಧ್ಯವಿಲ್ಲ.
– ಶೇಖರ್‌, ಅಲೆವೂರು

ತುರ್ತು ಕ್ರಮಕ್ಕೆ ಸಿದ್ಧತೆ ಇರಲಿ
ಭೌಗೋಳಿಕವಾಗಿ ಮುಳುಗಡೆಯಾ ಗುವ ಕರಾವಳಿ ಪ್ರದೇಶದ ವ್ಯಾಪ್ತಿಯಲ್ಲಿ ಮಂಗಳೂರು ಹಾಗೂ ಉಡುಪಿಯ ಭಾಗವು ಸೇರಿದೆ. ಇದಕ್ಕೆ ಪೂರಕ ಎಂಬಂತೆ ಇದೀಗ ಮೊನ್ನೆ ಉಡುಪಿ ಹಾಗೂ ಕಾರ್ಕಳ ತಾಲೂಕಿನಲ್ಲಿ ಇದ್ಧಕ್ಕಿದ್ಧಂತೆ 34 ಗಂಟೆಗಳ ಕಾಲ ನಿರಂತರ ಅತಿ ಹೆಚ್ಚು ಮಳೆಯಾಗಿದೆ. ಉಡುಪಿ ಜಿಲ್ಲೆಯ ಯಾವಯಾವ ತಗ್ಗು ಪ್ರದೇಶಗಳು ಮುಳುಗಡೆಯಾಗುತ್ತವೆ ಎಂಬುದು ಎಲ್ಲರ ಗಮನಕ್ಕೂ ಬಂದಿದೆ. ಇದು ಜಿಲ್ಲಾಡಳಿತ ಮತ್ತು ಸಾರ್ವಜನಿಕರಿಗೊಂದು ಪಾಠ. ಹೀಗಾಗಿ ಇದಕ್ಕೆ ಬೇಕಾದ ತುರ್ತು ಕ್ರಮಕ್ಕೆ ಸಿದ್ಧತೆ ಈಗಲೇ ಆರಂಭವಾಗಬೇಕಿದೆ.
– ಗಣೇಶ್‌ ರಾಜ್‌ ಸರಳೇಬೆಟ್ಟು , ಸಾಮಾಜಿಕ ಕಾರ್ಯಕರ್ತ

ಪರಿಹಾರ ದಳ ಸ್ಥಾಪನೆಯಾಗಲಿ
ಉಡುಪಿ ಜಿಲ್ಲೆಗೆ ಒಂದು ರಾಷ್ಟ್ರೀಯ ಪ್ರಾಕೃತಿಕ ವಿಕೋಪ ಪರಿಹಾರ ದಳ ಸ್ಥಾಪನೆಯಾಗಬೇಕು. ಹೊಸ ಮನೆ, ಕಟ್ಟಡಗಳಿಗೆ ಪರವಾನಿಗೆ ನೀಡುವಾಗ ಪ್ರವಾಹ ಪೀಡಿತ ಪ್ರದೇಶವೇ ಎಂದು ಗುರುತಿಸಿ ಮನೆಗಳ ಪಂಚಾಂಗ ಎತ್ತರಕ್ಕೆ ನಿರ್ದೇಶನ ನೀಡಬೇಕು. ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಲು ಸುಗಮ ಸಂಚಾರಕ್ಕಾಗಿ ರಸ್ತೆಗಳ ಅಗಲೀಕರಣ ಅಗತ್ಯ.
- ಲಕ್ಷ್ಮೀ ಪಿ. ಶೆಟ್ಟಿ , ಕಿನ್ನಿಮೂಲ್ಕಿ

ನೀರು ಸರಾಗವಾಗಿ ಹರಿಯುವ ವ್ಯವಸ್ಥೆಯಾಗಲಿ
ಉಡುಪಿಯಲ್ಲಿ ಈ ಬಾರಿಯ ಮಳೆಯಿಂದ ಹಲವಾರು ಜನಜೀವನ ಅಸ್ತವ್ಯಸ್ತ ಗೊಂಡಿದೆ. ವಾಹನಗಳು, ವಿದ್ಯುತ್‌ ಉಪಕರಣಗಳು ನೀರಲ್ಲಿ ಮುಳುಗಿ ನಷ್ಟ ಉಂಟಾಗಿದೆ. ಹಲವು ಮನೆಗಳು ಬಿದ್ದಿವೆ. 9 ವರ್ಷಗಳ ಹಿಂದೆ ನಾನು ನಗರಸಭೆ ಸದಸ್ಯನಾಗಿದ್ದಾಗ ಗುಂಡಿಬೈಲು ಮತ್ತಿತರ ಕಡೆ ಹೊಸ ಮನೆಗೆ ಮಂಜೂರಾತಿ ನೀಡುವಾಗ ಅಡಿಪಾಯ ಎತ್ತರಿಸುವಂತೆ ಹೇಳಿ ಅನುಮತಿ ನೀಡುವಂತೆ ಎಂಜಿನಿಯರ್‌ಗೆ ಹೇಳಿದ್ದೆ. ಇತ್ತೀಚಿನ ದಿನಗಳಲ್ಲಿ ಗುಂಡಿಬೈಲ್‌ನ ವಿಶಾಲ ಪ್ರದೇಶದಲ್ಲಿ ನೀರು ನಿಲ್ಲುತ್ತದೆ. ಈಗ ಅಲ್ಲಿಯೂ ಬಹುಮಹಡಿ ಕಟ್ಟಡ ಆರಂಭವಾಗಿದೆ. ಈಗ ಉಡುಪಿಯಲ್ಲಿ ನೀರು ಹರಿಯಲು, ವಾಹನಗಳು ನಿಲ್ಲಲು ಜಾಗ ಇಲ್ಲದಂತಾಗಿದೆ. ಅದ್ದರಿಂದ ನೀರು ಸರಾಗವಾಗಿ ಹರಿದುಹೋಗುವ ವ್ಯವಸ್ಥೆ ಮೊದಲು ನಡೆಯಬೇಕು.
– ದೇವೇಂದ್ರ ಪ್ರಭು, ಮಣಿಪಾಲ

ಮುನ್ನೆಚ್ಚರಿಕೆ ಅತ್ಯಗತ್ಯ
ಮುಂದಿನ ವರ್ಷಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ಅತ್ಯಗತ್ಯ ಎಂಬುದನ್ನು ಈ ಬಾರಿಯ ಮಳೆ ಕಲಿಸಿಕೊಟ್ಟಿದೆ. ಇದಕ್ಕಾಗಿ ಸಣ್ಣ ಗಾತ್ರದ ಎಲೆಕ್ಟ್ರಿಕಲ್‌ ಬೋಟ್‌, ಕೈಚಾಲಿತ ದೋಣಿಗಳನ್ನು ಹಾಗೂ ಖಾಸಗಿ ದೋಣಿ ಸಿದ್ಧವಾಗಿರಬೇಕು. ಕೆಲವರಿಗಾದರೂ ದೋಣಿ ಚಲಾಯಿಸುವ ತರಬೇತಿ ನೀಡಬೇಕು. ಸಮುದ್ರ, ನದಿ ದಂಡೆಗಳಿಂದ ದೋಣಿಗಳನ್ನು ವಿಪತ್ತಿನ ಸ್ಥಳಕ್ಕೆ ಸಾಗಿಸಲು ಸೂಕ್ತವಾದ ಟ್ರಕ್‌ ವ್ಯವಸ್ಥೆಯಿರಬೇಕು. ಜಿಲ್ಲೆಯ ಯುವಕರನ್ನು ಒಳಗೊಂಡಂತೆ ಆಸಕ್ತ ಸ್ವಯಂಸೇವಕ ಸಂಘಟನೆಗಳ ಸಂಪರ್ಕ ಸಂಖ್ಯೆ ತೆಗೆದಿಟ್ಟಿರಬೇಕು. ಇವರಿಗೆ ಸೂಕ್ತ ತರಬೇತಿ ಸಿಗುವಂತೆ ಮಾಡಬೇಕು. ಜಲಪ್ರಳಯದಿಂದ ರಕ್ಷಿಸಲ್ಪಟ್ಟವರನ್ನು ಉಳಿಸಲು ಸೂಕ್ತ ಸ್ಥಳಗಳನ್ನು ಕಾದಿರಿಸಬೇಕು. ನಿರಾಶ್ರಿತರಿಗೆ ಅನ್ನ-ನೀರು ಆಹಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವ ವ್ಯವಸ್ಥೆ ಮಾಡಬೇಕು. ಸ್ವಯಂಸೇವಕ ವೈದ್ಯರು ದಾದಿಯರು ಸಮಾಜದ ಸಂಘಟನೆಗಳು ಒಳಗೊಂಡಂತಹ ವಿಪತ್ತಿನ ಸಮಯದಲ್ಲಿ ಮಾಡಬೇಕಾದ ಕಾರ್ಯ ಸೂಚಿಯ ಬಗ್ಗೆ ಕಡತ ಮಾಡಿ ಅದಕ್ಕಾಗಿ ಒಂದಷ್ಟು ನಿಧಿಯನ್ನು ಎತ್ತಿಟ್ಟುಕೊಳ್ಳಬೇಕು. ವಿಪತ್ತು ನಿರ್ವಹಣೆಗಾಗಿ ಆಸಕ್ತ ಸ್ವಯಂಸೇವಕರ ಒಂದು ಸಮಿತಿಯನ್ನು ರಚಿಸಿ ವಿಪತ್ತು ನಿರ್ವಹಣೆಗೆ ಸದಾ ಸಿದ್ಧರಿರುವಂತೆ ನೋಡಿಕೊಳ್ಳಬೇಕು.
– ಪಾವನ ಜೈನ್‌, ಸಂತೆಕಟ್ಟೆ

ತಗ್ಗು ಪ್ರದೇಶಗಳನ್ನು ಪರಿಶೀಲಿಸಿ
ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರತಿ ವರ್ಷವೂ ಮಳೆಗಾಲದ ಆರಂಭಕ್ಕಿಂತ ಮೊದಲು ತೋಡು, ಚರಂಡಿಗಳನ್ನು ಸ್ವತ್ಛಗೊಳಿಸಬೇಕು. ವಸತಿ, ಕಟ್ಟಡಗಳಿಗೆ ಪರವಾನಿಗೆ ಕೊಡುವಾಗ ತಗ್ಗು ಪ್ರದೇಶಗಳಲ್ಲಿ ಪರಿಶೀಲಿಸಿ ನೆರೆ ನೀರು ಸರಾಗವಾಗಿ ಹರಿದುಹೋಗಲು ವ್ಯವಸ್ಥೆ ಮಾಡುವಂತೆ ಸೂಚಿಸಬೇಕು.
– ಭಾಸ್ಕರ್‌ ಬಿ. ಭಂಡಾರಿ, ಬೈಲಕೆರೆ

ಒತ್ತುವರಿಗೆ ತಡೆ ಬೀಳಲಿ
ನಗರ ಮಧ್ಯದಲ್ಲಿ ಹಾದುಹೋಗುವ ಅಗಲವಾದ ಮತ್ತು ಕಿರಿದಾದ ಎಲ್ಲ ತೋಡುಗಳನ್ನು ಮೂಲದಿಂದ ಅಂತ್ಯದವರೆಗೆ ವರ್ಷಕ್ಕೆ ಎರಡು ಬಾರಿ ಆಳಗೊಳಿಸಿ, ಸ್ವತ್ಛ ಗೊಳಿಸಿ ನೀರು ಸರಾಗವಾಗಿ ಹರಿಯುವ ವ್ಯವಸ್ಥೆಯಾಗಲಿ. ತಗ್ಗು ಪ್ರದೇಶಗಳಲ್ಲಿ ಹೊಸ ಕಟ್ಟಡಗಳಿಗೆ ತಳಮಹಡಿ ನಿರ್ಮಿಸಲು ಅನುಮತಿ ನೀಡಬಾರದು. ಕೃಷಿ ಗದ್ದೆಗಳಿಗೆ ಮಣ್ಣು ತುಂಬಿಸಿದಾಗ ನೀರು ಹರಿಯಲು ವ್ಯವಸ್ಥೆ ಇಲ್ಲದೆ ಅಡೆತಡೆಗಳಾಗುತ್ತವೆ. ಇದನ್ನು ತಡೆಯಬೇಕು. ತೋಡುಗಳ ಪಕ್ಕದ ಜಮೀನಿನವರು ಒತ್ತುವರಿ ಮಾಡದಂತೆ ತಡೆಯಬೇಕು. ಅಲ್ಲದೆ ನಿವೇಶನಕ್ಕೆ ಇಂತಿಷ್ಟೇ ಅಗಲದ ರಸ್ತೆ ಬೇಕೆಂಬ ನಿಯಮದಂತೆ, ತೋಡಿಗೂ ಇಂತಿಷ್ಟೇ ಅಗಲವಿರುವಂತೆ ಕಾನೂನು ತಿದ್ದುಪಡಿ ಮಾಡಬೇಕು.
– ನಾಜ ಶೆಟ್ಟಿ , ಉಡುಪಿ

ನದಿಗಳನ್ನು ಉಳಿಸೋಣ
ಉಡುಪಿಯಲ್ಲಿ ಸುರಿದ ಧಾರಾಕಾರ ಮಳೆ ಜನಜೀವನವನ್ನು ಸಂಪೂರ್ಣ ಅಸ್ತವ್ಯಸ್ತವಾಗಿಸಿತ್ತು. ಕಲ್ಸಂಕ, ಬೈಲಕೆರೆ ವ್ಯಾಪ್ತಿಯಲ್ಲಿ ಬೃಹತ್‌ ಚರಂಡಿ ವ್ಯವಸ್ಥೆಯ ಅಕ್ಕಪಕ್ಕದಲ್ಲೇ ಹಲವಾರು ಮನೆಗಳಿವೆ. ಹೀಗಾಗಿ ಸರ್ವೆ ಮಾಡಿ ನೆರೆಯಿಂದ ಬಾಧಿತವಾಗುವ ಪ್ರದೇಶಗಳನ್ನು ಸಾಧ್ಯವಾದರೆ ಬೇರೆಡೆ ಸ್ಥಳಾಂತರಗೊಳಿಸುವುದು ಉತ್ತಮ. ಚರಂಡಿ, ತೋಡಿನ ಹೂಳನ್ನು ವರ್ಷಕ್ಕೊಮ್ಮೆಯಾದರೂ ತೆಗೆದು ತ್ಯಾಜ್ಯ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಬೇಕು. ಹಳೆಯ ಕಟ್ಟಡಗಳನ್ನು ತೆರವುಗೊಳಿಸಿ ಮಳೆಯಿಂದ ಆಗಬಹುದಾದ ಅನಾಹುತಗಳನ್ನು ತಪ್ಪಿಸಬೇಕು. ಮರಳು ದಂಧೆಗೆ ಕಡಿವಾಣ ಹಾಕಿ ಅಮೂಲ್ಯವಾದ ನದಿಗಳನ್ನು ಉಳಿಸಬೇಕು.
– ನಾಗವೇಣಿ, ಉಡುಪಿ

ಮಾಹಿತಿ: ವ್ಯವಸ್ಥೆಯಾಗಬೇಕು
ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಸಾಂಪ್ರದಾಯಿಕವಾಗಿ ತಗ್ಗು ಪ್ರದೇಶದಲ್ಲಿ ವಾಸಿಸುವವರು ಮತ್ತು ಅತಿವೃಷ್ಟಿಯಾದಲ್ಲಿ ತತ್‌ಕ್ಷಣ ಅಪಾಯಕ್ಕೀಡಾಗುವ ಪರಿಸರದ ಜನರಿಗೆ ಏನು ಮಾಡಬೇಕು ಎಂಬ ಬಗ್ಗೆ ಮಳೆಗಾಲದ ಮುಂಚೆ ಒಂದು ಮಾಹಿತಿ ಕಾರ್ಯಾಗಾರವನ್ನು ಆಯಾ ಪ್ರದೇಶದಲ್ಲಿ ಪರಿಸರದ ಸ್ವಯಂ ಸೇವಾ ಸಂಸ್ಥೆಗಳು, ಸ್ಥಳೀಯರು ಮತ್ತು ಜಿÇÉಾಡಳಿತದ ತುರ್ತು ಸೇವಾ ಘಟಕಗಳ ಸಹಾಯದಿಂದ ಏರ್ಪಡಿಸಬೇಕು. ಈ ಪರಿಸರದ ತೋಡುಗಳಲ್ಲಿ ಸರಾಗವಾಗಿ ನೀರು ಹರಿದು ಹೋಗುವ ಹಾಗೇ ಕಸ ನಿರ್ವಹಣೆ, ವಿಪತ್ತಿನ ಸಮಯದಲ್ಲಿ ಎಚ್ಚರಿಸಲು ಸೈರನ್‌ ವ್ಯವಸ್ಥೆ, ಜನರನ್ನು ಸಾಗಿಸಲು ಬೋಟ್‌, ರûಣ ತೆಪ್ಪದ ವ್ಯವಸ್ಥೆ ಮಾಡಿಕೊಂಡಿರಬೇಕು.
– ಅರುಣ್‌ ಪಟವರ್ಧನ್‌ ವಳಕಾಡು, ಉಡುಪಿ

ನೀರು ಹರಿಯಲು ವ್ಯವಸ್ಥೆಯಾಗಲಿ
ಉಡುಪಿ ವ್ಯಾಪ್ತಿಯಲ್ಲಿರುವ ಎಲ್ಲ ತೋಡು, ಚರಂಡಿಗಳ ಹೂಳು ತೆಗೆದು ಸರಾಗವಾಗಿ ನೀರು ಹರಿಯುವ ವ್ಯವಸ್ಥೆಯಾಗಲಿ. ಇದಕ್ಕೆ ಜಿಲ್ಲಾಡಳಿತ ಮಾತ್ರವಲ್ಲ ಸಾರ್ವಜನಿಕರ ಸಹಕಾರವೂ ಮುಖ್ಯ. ತೋಡುಗಳನ್ನು ಆಕ್ರಮಿಸಿ ಕಟ್ಟಡ ಕಟ್ಟಲು ಪರವಾನಿಗೆ ಕೊಡಬಾರದು. ನೆರೆ ಬಂದಾಗ ಎಚ್ಚೆತ್ತುಕೊಳ್ಳುವುದಕ್ಕಿಂತ ಮೊದಲೇ ಜಾಗೃತರಾಗಿರುವುದು ಒಳ್ಳೆಯದು. ತ್ಯಾಜ್ಯ ವಸ್ತುಗಳನ್ನು ಸರಿಯಾಗಿ ವಿಲೇವಾರಿ ಮಾಡಬೇಕು. ಪ್ರತಿಯೊಂದು ರಸ್ತೆ ಬದಿಯಲ್ಲೂ ಚರಂಡಿಯನ್ನು ಅಗತ್ಯ ವಾಗಿ ನಿರ್ಮಿಸಬೇಕು. ಹೆಚ್ಚಿನ ಕಡೆ ಚರಂಡಿಯೇ ಇಲ್ಲದೆ ರಸ್ತೆ ನಿರ್ಮಾಣವಾಗುತ್ತಿರುವುದು ಇಂದಿನ ದೊಡ್ಡ ದುರಂತ. ಇದನ್ನೆಲ್ಲ ಸರಿಪಡಿಸಿದರೆ ಸ್ವಲ್ಪ ಮಟ್ಟಿನ ಅವಘಡ ತಪ್ಪಿಸಬಹುದು.
– ಭಾಗ್ಯಾ, ಉದ್ಯಾವರ

ಚರಂಡಿಗಳು ಸ್ವತ್ಛವಾಗಲಿ
38 ವರ್ಷಗಳ ಬಳಿಕ ಈ ಬಾರಿ ಉಡುಪಿಯಲ್ಲಿ ಜಲ ಪ್ರಳಯ ನೋಡಿದ್ದೇವೆ. ಜಿಲ್ಲಾಡಳಿತ ಮತ್ತಷ್ಟು ಸಮರ್ಥವಾಗಿ ಈ ಪ್ರವಾಹದ ಹಾವಳಿಯನ್ನು ತಪ್ಪಿಸಲು ಚರಂಡಿಯನ್ನು ಹೂಳು ಮುಕ್ತ ಗೊಳಿಸಬೇಕು, ಇಂದ್ರಾಳಿ ನದಿಯನ್ನು ಸ್ವತ್ಛಗೊಳಿಸಿ ಸಲೀಸಾಗಿ ಹರಿಯುವಂತೆ ಮಾಡಬೇಕು. ಗದ್ದೆ ಜಾಗದಲ್ಲಿ ದೊಡ್ಡ ದೊಡª ಕಟ್ಟಡ ಕಟ್ಟುವಾಗ ನೀರು ಹರಿಯಲು ಸೂಕ್ತ ವ್ಯವಸ್ಥೆ ಮಾಡಿಕೊಡಬೇಕು. ಪರ್ವತ ಪ್ರದೇಶ ಸೇರಿದಂತೆ ಮಣ್ಣು ಕೊಚ್ಚಿಹೋಗುವ ಪ್ರದೇಶದಲ್ಲಿ ಮಣ್ಣು ಹಿಡಿದಿಟ್ಟುಕೊಳ್ಳಲು ಸಸಿಗಳನ್ನು ನಾಟಿ ಮಾಡಬೇಕು. ಪ್ರತೀ ಗ್ರಾ.ಪಂ.ಗೆ ಒಂದಾದರೂ ದೋಣಿ ಒದಗಿಸಬೇಕು ಮತ್ತು ಸ್ವಯಂ ಸೇವಕ ಯುವಕರ ತಂಡ ರಚನೆಯಾಗಬೇಕು.
– ರಾಘವೇಂದ್ರ ಪ್ರಭು, ಕರ್ವಾಲು

ಟಾಪ್ ನ್ಯೂಸ್

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-shirva-1

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

20-shirva-1

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.