ಗಂಗೊಳ್ಳಿಯಲ್ಲಿ ವಿರೋಧ: ಭಟ್ಕಳದ 8 ದೋಣಿಗಳು ವಾಪಸ್
Team Udayavani, May 8, 2020, 1:27 PM IST
ಗಂಗೊಳ್ಳಿ: ಅನುಮತಿಯಿಲ್ಲದೆ ಭಟ್ಕಳದ 8 ಪರ್ಸಿನ್ ಬೋಟುಗಳು ಗುರುವಾರ ಗಂಗೊಳ್ಳಿಯ ಮೀನುಗಾರಿಕಾ ಬಂದರಿಗೆ ಬಂದಿದ್ದು, ಸ್ಥಳೀಯ ಮೀನುಗಾರರ, ಜನರ ಭಾರೀ ವಿರೋಧದ ಬಳಿಕ ಅಧಿಕಾರಿಗಳ ಸಮ್ಮುಖದಲ್ಲಿ ಭಟ್ಕಳಕ್ಕೆ ವಾಪಸ್ ಕಳುಹಿಸಿದ ಪ್ರಸಂಗ ನಡೆಯಿತು.
ಬೋಟುಗಳಲ್ಲಿ 21 ಮೀನುಗಾರರಿದ್ದು, ಅವರಲ್ಲಿ ಭಟ್ಕಳ ಮಾತ್ರವಲ್ಲದೆ ಉಪ್ಪುಂದ, ಒಡಿಶಾ ಮೂಲದವರೂ ಇದ್ದರು. ಭಟ್ಕಳದಲ್ಲಿ ಹೆಚ್ಚಿನ ಸಂಖ್ಯೆಯ ಕೊರೊನಾ ಪ್ರಕರಣಗಳು ಕಂಡುಬಂದಿರುವ ಕಾರಣ ಸ್ಥಳೀಯರು ಅವರನ್ನು ಒಳಗೆ ಬಿಟ್ಟುಕೊಳ್ಳಲು ಒಪ್ಪಲಿಲ್ಲ.
ಮಾಹಿತಿ ತಿಳಿದ ತತ್ಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಗಂಗೊಳ್ಳಿ ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕಿ ಅಂಜನಾದೇವಿ, ಗಂಗೊಳ್ಳಿ ಕರಾವಳಿ ಕಾವಲು ಪಡೆಯ ಎಸ್ಐ ಸಂದೀಪ್ ವಿಚಾರಿಸಿದ್ದು, ಅವರಲ್ಲಿ ಯಾವುದೇ ಅನುಮತಿ ಪತ್ರ ಇರದ ಕಾರಣ, ಭಟ್ಕಳಕ್ಕೆ ಮರಳಿ ಕಳುಹಿಸಲಾಯಿತು.
ಭಟ್ಕಳದ ಬಂದರಿನಲ್ಲಿ ಜಾಗದ ಕೊರತೆಯಿಂದ ಪ್ರತಿ ವರ್ಷ ಮೀನುಗಾರಿಕಾ ಋತುವಿನ ಕೊನೆಯಲ್ಲಿ ಕೆಲವು ಬೋಟುಗಳು ಗಂಗೊಳ್ಳಿ ಬಂದರಿಗೆ ಬರುತ್ತವೆ. ಆದರೆ ಈಗ ಲಾಕ್ಡೌನ್ ಜಾರಿಯಲ್ಲಿರುವುದರಿಂದ ಜಿಲ್ಲಾಧಿಕಾರಿ ಅನುಮತಿ ಅಗತ್ಯ. ಹಾಗಾಗಿ ಜಿಲ್ಲಾಧಿಕಾರಿ ಗಳ ನಿರ್ದೇಶನದಂತೆ ವಾಪಸು ಕಳುಹಿಸಲಾಗಿದೆ ಎಂದು ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
MUST WATCH
ಹೊಸ ಸೇರ್ಪಡೆ
LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್
R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್