ಕತ್ತಲಾಗಲೀ, ಹಗಲಾಗಲೀ ಇಲ್ಲಿ ಬೀಳುವುದು ಸಹಜ ಆಗಿದೆ!

 ಕಿತ್ತು ಹೋಗಿರುವ ಚರಂಡಿ ಸ್ಲ್ಯಾಬ್

Team Udayavani, Feb 8, 2022, 7:30 PM IST

ಕತ್ತಲಾಗಲೀ, ಹಗಲಾಗಲೀ ಇಲ್ಲಿ ಬೀಳುವುದು ಸಹಜ ಆಗಿದೆ!

ಕುಂದಾಪುರ: ಕತ್ತಲಾಗಲೀ, ಹಗಲಾಗಲೀ ಇಲ್ಲಿ ಪಾದಚಾರಿ ಪಥದಲ್ಲಿ ನಡೆದರೆ ಚರಂಡಿಗೆ ಬೀಳುವುದು ಸಹಜ ಎಂಬಷ್ಟೇ ಆಗಿದೆ! ಸ್ಥಳೀಯವಾಗಿ ರಿಕ್ಷಾ ನಿಲ್ಲಿಸುವ ಚಾಲಕರಿಗಂತೂ ಪ್ರತಿನಿತ್ಯ ಇಲ್ಲಿ ಯಾರೂ ಬೀಳದಂತೆ ಕಾಯುವುದು, ಬಿದ್ದವರನ್ನು ಎತ್ತುವುದೇ ಹೆಚ್ಚುವರಿ ಕೆಲಸವಾಗಿದೆ.

ಚರಂಡಿ ಸ್ಲ್ಯಾಬ್
ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣ ಬಳಿ ಚರಂಡಿ ಸ್ಲ್ಯಾಬ್ ಕಿತ್ತು ಹೋಗಿದೆ. ಒಂದಲ್ಲ, ಎರಡಲ್ಲ ಕೆಲವು ಕಡೆ. ಸರ್ವಿಸ್‌ ರಸ್ತೆಯಲ್ಲಿ ಅತ್ಯಧಿಕ ವಾಹನಗಳು ಓಡಾಡುವ ಕಾರಣ ಪಾದಚಾರಿ ಪಥ ಅಂದರೆ ಚರಂಡಿ ಮೇಲೆ ಅಳವಡಿಸಿದ ಸ್ಲ್ಯಾಬ್ ಮೇಲೆ ನಡೆಯಬೇಕಾದ್ದು ಅನಿವಾರ್ಯ.

ರಸ್ತೆಯಲ್ಲಿ ನಡೆದರೆ ಯಾವ ವಾಹನ ಎದುರಿನಿಂದ ಬರುವುದೋ, ಹಿಂದಿನಿಂದ ಬಂದು ಢಿಕ್ಕಿಯಾಗುವುದೋ ಎಂಬ ಆತಂಕ. ಅಂತಹ ಕೆಲವು ಘಟನೆಗಳೂ ನಡೆದಿವೆ.

ರಿಕ್ಷಾದವರ ನೆರವು
ಕೆಎಸ್‌ಆರ್‌ಟಿಸಿ ಸ್ಟಾಂಡ್‌ನ‌ ರಿಕ್ಷಾ ನಿಲ್ದಾಣ ಬಳಿ, ಕೆಎಸ್‌ಆರ್‌ಟಿಸಿ ಬಸ್‌ ತಂಗುದಾಣ ಪ್ರವೇಶಿಸುವಲ್ಲಿ ಸೇರಿದಂತೆ ಅಲ್ಲಲ್ಲಿ ಸ್ಲ್ಯಾಬ್ ಬಿದ್ದಿದೆ. ಅವಸರದಲ್ಲಿ, ಮಬ್ಬು ಬೆಳಕಿನಲ್ಲಿ ಬಂದರೆ ಜನ ಹೊಂಡಕ್ಕೆ ಬೀಳುತ್ತಾರೆ. ಅದಕ್ಕಾಗಿ ರಿಕ್ಷಾ ಚಾಲಕರು ಪಾಳಿ ಪ್ರಕಾರ ಕಾವಲು ಕಾಯುತ್ತಾರೆ. ಎಚ್ಚರಿಕೆ ನೀಡುತ್ತಾರೆ. ಅರಿವಿಗೆ ಬರದೇ ಬಿದ್ದವರ ರಕ್ಷಣೆಗೆ ಧಾವಿಸುತ್ತಾರೆ. ದ್ವಿಚಕ್ರ ವಾಹನಗಳ ಪಾಲಿಗೂ ಇದು ಅಪಾಯದ ಮಾದರಿಯಲ್ಲಿದೆ. ಬಸ್‌ ನಿಲ್ದಾಣಕ್ಕೆ ತೆರಳುವ ಬಸ್‌ಗಳಿಗೂ ಸ್ವಲ್ಪ ಆಯ ತಪ್ಪಿದರೂ ಚಕ್ರ ಚರಂಡಿಯಲ್ಲಿ ಎಂಬ ಸ್ಥಿತಿ ಇದೆ.

ಪ್ರಯಾಣಿಕರು
ಕೆಎಸ್‌ಆರ್‌ಟಿಸಿ ಮೂಲಕ ಪ್ರಯಾಣ ಬೆಳೆಸುವ ಮಂದಿ ಖಾಸಗಿ ಬಸ್‌ನಿಂದ ಇಲ್ಲೇ ಇಳಿಯುತ್ತಾರೆ. ಅಂತಹವರು ಬಸ್‌ನಿಂದ ನೇರ ಹೊಂಡಕ್ಕೆ ಕಾಲಿಟ್ಟದ್ದೂ ಇದೆ. ಹೆದ್ದಾರಿಯಲ್ಲಿ ದೀಪ ಅಳವಡಿಸಬೇಕಾದ ಇಲಾಖೆ, ಗುತ್ತಿಗೆದಾರರು ಇನ್ನೂ ನಿದ್ದೆ ಮಂಪರಿನಲ್ಲಿ ಇರುವ ಕಾರಣ ಬೆಳಕಿನ ವ್ಯವಸ್ಥೆಯೂ ಕೆಲವೊಮ್ಮೆ ಇರುವುದಿಲ್ಲ. ಬಸ್‌ ನಿಲ್ದಾಣದ ಬೆಳಕೇ ಆಧಾರ. ಆದರೆ ಅದು ಎಲ್ಲ ಹೊಂಡಗಳಿಗೆ ಬೀಳುವುದಿಲ್ಲ. ಹಾಗಾಗಿ ಹೊಂಡಕ್ಕೆ ಬೀಳುವುದು ಅನಿವಾರ್ಯ ಎಂದಾಗಿದೆ.

ಸರಿಪಡಿಸಲಿ
ಈ ಚರಂಡಿಯನ್ನು ಹೆದ್ದಾರಿ ಗುತ್ತಿಗೆ ವಹಿಸಿಕೊಂಡ ಸಂಸ್ಥೆಯಾಗಲೀ, ಪುರಸಭೆಯಾಗಲೀ ಸರಿಪಡಿಸಲಿ ಎಂದು ಸಾರ್ವಜನಿಕರು ಅದೆಷ್ಟೋ ಸಮಯದಿಂದ ಕಾಯುತ್ತಿದ್ದಾರೆ. ಆದರೆ ಆಡಳಿತಶಾಹಿಗೆ ಕಾಣಿಸುತ್ತಲೇ ಇಲ್ಲ. ಜನರಿಗೂ ಮನವಿ ನೀಡಿ ನೀಡಿ ಸಾಕಾಗಿದೆ.

ತೊಂದರೆ ಆಗುತ್ತಿದೆ
ಸಾರ್ವಜನಿಕರಿಗೆ ಈ ಹೊಂಡಗಳಿಂದ ತೊಂದರೆ ಆಗುತ್ತಿದೆ. ತತ್‌ಕ್ಷಣ ಸಂಬಂಧಪಟ್ಟವರು ಇದನ್ನು ದುರಸ್ತಿ ಮಾಡಬೇಕಿದೆ.
-ರಾಜೇಶ್‌ ಕಡ್ಗಿಮನೆ, ಕುಂದಾಪುರ

 

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.