ಬಂಟ್ವಾಡಿ ಕಿಂಡಿ ಅಣೆಕಟ್ಟು : ಹಲಗೆ ಹಾಕಿದ್ದರೂ, ನದಿಪಾತ್ರದ ಊರುಗಳ ಬಾವಿ ನೀರೆಲ್ಲ ಉಪ್ಪು


Team Udayavani, May 31, 2023, 3:35 PM IST

ಬಂಟ್ವಾಡಿ ಕಿಂಡಿ ಅಣೆಕಟ್ಟು : ಹಲಗೆ ಹಾಕಿದ್ದರೂ, ನದಿಪಾತ್ರದ ಊರುಗಳ ಬಾವಿ ನೀರೆಲ್ಲ ಉಪ್ಪು

ಕುಂದಾಪುರ: ಉಪ್ಪು ನೀರಿನ ಸಮಸ್ಯೆ ಪರಿಹಾರಕ್ಕೆ ಸೌಪರ್ಣಿಕ ನದಿಗೆ ಬಂಟ್ವಾಡಿ ಬಳಿ ಕಿಂಡಿ ಅಣೆಕಟ್ಟು ನಿರ್ಮಿಸಿದ್ದರೂ, ನದಿ ಪಾತ್ರದ ಹತ್ತಾರು ಗ್ರಾಮಗಳಿಗೆ ಇದೇ ಶಾಪವಾಗಿ ಪರಿಣಮಿಸಿದೆ. ಡ್ಯಾಂಗೆ ಹಲಗೆ ಹಾಕಿರುವುದರಿಂದಲೇ ಇಲ್ಲಿನ ಅನೇಕ ಊರುಗಳ ಬಾವಿ ನೀರು ಉಪ್ಪಾಗಿದೆ. ಕೂಡಲೇ ಹಲಗೆ ತೆಗೆಯಬೇಕು ಎನ್ನುವುದಾಗಿ ಈ ಭಾಗದ ಜನರು ಆಗ್ರಹಿಸಿದ್ದಾರೆ.

ಬಂಟ್ವಾಡಿ ಕಿಂಡಿ ಅಣೆಕಟ್ಟಿಗೆ ಹಲಗೆ ಹಾಕಿರುವುದರಿಂದ ಬಂಟ್ವಾಡಿ ಆಸುಪಾಸಿನ ಊರುಗಳ ಬಾವಿಗಳ ನೀರು ಕಳೆದ ಡಿಸೆಂಬರ್‌ನಿಂದಲೇ ಉಪ್ಪಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ಹೇಳಿದರೂ ಪ್ರಯೋಜನವಾಗಿಲ್ಲ ಎನ್ನುವ ಜನ, ಈಗಲಾದರೂ ಹಲಗೆ ತೆಗೆದರೆ, ನೀರಿನ ಹರಿವಿನಿಂದಾಗಿಯಾದರೂ ಒಂದಷ್ಟು ಅನುಕೂಲವಾಗಬಹುದು ಎನ್ನುತ್ತಾರೆ.

ಯಾವೆಲ್ಲ ಊರಿಗೆ ಸಮಸ್ಯೆ?
ಬಂಟ್ವಾಡಿ ಸುತ್ತಮುತ್ತಲಿನ ಪರಿಸರ ಸೇರಿದಂತೆ, ನಾವುಂದ, ಹಡವು, ಪಡುಕೋಣೆ, ಮರವಂತೆ, ಬಡಾಕೆರೆ, ಹೇರೂರು, ಕೋಣಿR, ಹುಂತನಗೋಳಿ ಆಸುಪಾಸಿನ ಊರುಗಳಿಗೆ ಈ ಬಂಟ್ವಾಡಿ ಡ್ಯಾಂನಿಂದಾಗಿ ಸಮಸ್ಯೆಯಾಗಿದೆ. ಹಲಗೆಗಳನ್ನು ಸರಿಯಾದ ಕ್ರಮದಲ್ಲ ಅಳವಡಿಸದೇ ಇರುವುದು, ಸರಿಯಾದ ಸಮಯಕ್ಕೆ ಅಳವಡಿಸದೇ ಇರುವುದರಿಂದ ಉಪ್ಪು ನೀರೆಲ್ಲ ಅದಾಗಲೇ ಮೇಲೆ ಬಂದಿದ್ದರಿಂದ ಈ ಸಮಸ್ಯೆ ಬಂದಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯ.

ಮತ್ತೆ ನೆರೆ ಭೀತಿ
ಪ್ರತೀ ಮಳೆಗಾಲದಲ್ಲೂ ಬಂಟ್ವಾಡಿ ಕಿಂಡಿ ಅಣೆಕಟ್ಟಿನ ಹಲಗೆ ತೆಗೆಯುವ ಪ್ರಕ್ರಿಯೆ ವಿಳಂಬ ಆಗುತ್ತಿರು ವುದರಿಂದ ನಾವುಂದ, ಅರೆಹೊಳೆ, ಮರವಂತೆ, ಕೋಣಿR ಸುತ್ತಮುತ್ತಲಿನ ಪರಿಸರದಲ್ಲಿ ಕೃತಕ ನೆರೆ ಉಂಟಾಗುತ್ತದೆ. ಮಳೆಗಾಲಕ್ಕೂ ಮೊದಲೇ ತೆಗೆಯದೇ, ಕೊನೆಗೆ ಮಳೆ ಶುರುವಾದ ನಂತರ ತೆಗೆಯಲೂ ಆಗದೇ, ಅಲ್ಲೇ ಕೆಲ ಹಲಗೆ ಬಿಡುವ ಪ್ರಮೇಯವೂ ಇರುತ್ತದೆ. ಈ ಬಾರಿಯಾದರೂ ಕಿಂಡಿ ಅಣೆಕಟ್ಟಿನ ಹಲಗೆ ಬೇಗ ತೆಗೆದರೆ, ಆರಂಭದ ಮಳೆಗೆ ಡ್ಯಾಂನ ಕಿಂಡಿಗಳಲ್ಲಿ ನಿಲ್ಲುವ ಮರ, ಮಟ್ಟುಗಳು, ಕಸ, ಕಡ್ಡಿಗಳು ಕೊಚ್ಚಿ ಹೋಗಿ, ನೆರೆ ಭೀತಿ ಕಡಿಮೆಯಾಗಬಹುದು ಎನ್ನುವುದು ಈ ಭಾಗದ ಜನರ ಅಭಿಪ್ರಾಯ.

ಏನು ಪ್ರಯೋಜನ?
ಬಂಟ್ವಾಡಿ, ನಾವುಂದ, ಬಡಾಕೆರೆ, ಹುಂತನಗೋಳಿ ಆಸುಪಾಸಿನ ಭಾಗದಲ್ಲಿ ಸಾಮಾನ್ಯವಾಗಿ ಬಡಾಕೆರೆ ಹಬ್ಬದ ಸಮಯದಲ್ಲಿ ಅಂದರೆ ಜ.27ರ ಹುಣ್ಣಿಮೆ ನೀರು ಮೇಲೆ ಬರುವ ಸಮಯದಲ್ಲಿ ಉಪ್ಪು ನೀರಾಗುವುದು ವಾಡಿಕೆ. ಆದರೆ ಈ ಬಾರಿ ಗುಡ್ಡಮ್ಮಾಡಿ ಷಷ್ಠಿ ಸಂದರ್ಭ ಅಂದರೆ ಡಿಸೆಂಬರ್‌ನಲ್ಲಿಯೇ ಇಲ್ಲಿನ ಬಾವಿಗಳ ನೀರು ಉಪ್ಪಾಗಿದೆ. ಹಾಗಾದರೆ ಹಲಗೆ ಹಾಕಿ ಏನು ಪ್ರಯೋಜನ ಅನ್ನುವುದು ನಾವುಂದ ಗ್ರಾಮ ಪಂಚಾಯತ್‌ ಸದಸ್ಯ ರಾಜೇಶ್‌ ಸಾಲುºಡ ಅವರ ಪ್ರಶ್ನೆ.

ಕೂಡಲೇ ತೆಗೆಸುವ ಕ್ರಮ
ಈಗಾಗಲೇ ಹಲಗೆ ತೆಗೆಯಲು ಮುಂದಾಗಿದ್ದು, ಕೂಡಲೇ ಎಲ್ಲ ಹಲಗೆಯನ್ನು ತೆಗೆಸಲು ಕ್ರಮ ಕೈಗೊಳ್ಳಲಾಗುವುದು. ಮಳೆಗಾಲಕ್ಕೂ ಮೊದಲೇ ತೆಗೆಸಲಾಗುವುದು.
– ನಾಗಲಿಂಗ ಎಚ್‌., ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌,
ಸಣ್ಣ ನೀರಾವರಿ ಇಲಾಖೆ

– ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

Ashwin Vaishnav

Bullet train ಮೊದಲ ಬಾರಿಗೆ ಬ್ಯಾಲೆಸ್ಟ್‌ಲೆಸ್‌ ಟ್ರ್ಯಾಕ್‌: ರೈಲ್ವೇ ಸಚಿವ ವೈಷ್ಣವ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

ಕನ್ನಡಕುದ್ರು: ತೆಂಗಿನ ಮರಗಳಿಗೆ ಕೀಟ ಬಾಧೆ: ಕೃಷಿ ವಿಜ್ಞಾನಿಗಳ ತಂಡ ಭೇಟಿ; ಪರಿಶೀಲನೆ

ಕನ್ನಡಕುದ್ರು: ತೆಂಗಿನ ಮರಗಳಿಗೆ ಕೀಟ ಬಾಧೆ: ಕೃಷಿ ವಿಜ್ಞಾನಿಗಳ ತಂಡ ಭೇಟಿ; ಪರಿಶೀಲನೆ

“ಆಟ’ಕ್ಕೆ ಅಂತಾರಾಷ್ಟ್ರೀಯ ದಿನ ನಿಗದಿಗೆ ಹಕ್ಕೊತ್ತಾಯ

“ಆಟ’ಕ್ಕೆ ಅಂತಾರಾಷ್ಟ್ರೀಯ ದಿನ ನಿಗದಿಗೆ ಹಕ್ಕೊತ್ತಾಯ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Ashwin Vaishnav

Bullet train ಮೊದಲ ಬಾರಿಗೆ ಬ್ಯಾಲೆಸ್ಟ್‌ಲೆಸ್‌ ಟ್ರ್ಯಾಕ್‌: ರೈಲ್ವೇ ಸಚಿವ ವೈಷ್ಣವ್‌

1-addasd

Mumbai Indians: ಸೂರ್ಯಕುಮಾರ್‌ ಶೀಘ್ರ ಚೇತರಿಕೆ ಸಾಧ್ಯತೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.