ಬೈಕ್ – ಲಾರಿ ಢಿಕ್ಕಿ: ಸಿಂಗಾಪುರದ ಉದ್ಯಮಿ ಸಾವು
Team Udayavani, Feb 9, 2019, 12:04 AM IST
ಕುಂದಾಪುರ: ಪುತ್ರಿಯ ನಾಮಕರಣದ ಸಲುವಾಗಿ ಊರಿಗೆ ಬಂದಿದ್ದ ಸಿಂಗಾಪುರದಲ್ಲಿ ಉದ್ಯಮಿಯಾಗಿದ್ದ ವ್ಯಕ್ತಿ ಗುರುವಾರ ರಾತ್ರಿ ಹಂಗಳೂರು ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಮಾರ್ಕೋಡು ನಿವಾಸಿ ಶಂಕರನಾರಾಯಣ ಅವರ ಪುತ್ರ ವಿವೇಕಾನಂದ ಎಸ್.ಕೆ. (42) ಮೃತಪಟ್ಟವರು.
ಫೆ.7ರ ರಾತ್ರಿ ಹಂಗಳೂರು ಗ್ರಾಮದ ಭಾಷಾ ಟ್ರಾನ್ಸ್ಪೋರ್ಟ್ ಬಳಿ ಸರ್ವಿಸ್ ರಸ್ತೆಯಲ್ಲಿ ಮೋಹನ್ ನಾಯ್ಕ ಚಲಾಯಿಸುತ್ತಿದ್ದ ಇನ್ಸುಲೇಟರ್ ಲಾರಿ ಕುಂದಾಪುರ ಕಡೆಯಿಂದ ಕೋಟೇಶ್ವರ ಕಡೆಗೆ ಹೋಗುತ್ತಿದ್ದಾಗ ವಿವೇಕಾನಂದ ಅವರು ಚಲಾಯಿಸುತ್ತಿದ್ದ ಹೋಂಡಾ ಆ್ಯಕ್ಟಿವಾಕ್ಕೆ ಹಿಂದಿನಿಂದ ಢಿಕ್ಕಿ ಹೊಡೆದಿದೆ. ಪರಿಣಾಮ ಹೋಂಡಾ ಆ್ಯಕ್ಟಿವಾ ಸರ್ವಿಸ್ ರಸ್ತೆಯ ಎಡಬದಿಯ ಸಿಮೆಂಟ್ ಕಟ್ಟೆಗೆ ಹೊಡೆಯಿತು. ರಸ್ತೆಗೆ ಬಿದ್ದ ಸವಾರನ ತಲೆಯ ಮೇಲೆ ಲಾರಿಯ ಹಿಂಬದಿಯ ಚಕ್ರ ಹಾದು ಹೋಗಿದ್ದು, ಪರಿಣಾಮ ಹೆಲ್ಮೆಟ್ ಸಹಿತ ತಲೆ ಜಜ್ಜಿ ಹೋಗಿದೆ. ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಮಗಾರಿ ಕಾರಣ?
ಹೆದ್ದಾರಿ ಕಾಮಗಾರಿ ಸಲುವಾಗಿ ಎಲ್ಲ ವಾಹನ ಗಳನ್ನೂ ಸರ್ವಿಸ್ ರಸ್ತೆಯಲ್ಲಿ ಬಿಡಲಾಗುತ್ತಿದ್ದು, ಪರಿಣಾಮ ಅಲ್ಲಿ ವಾಹನಗಳ ಒತ್ತಡ ಹೆಚ್ಚಾಗಿ ಅಪಘಾತಗಳು ಸಂಭವಿಸುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ