ಗ್ರಾಮೀಣಾಭಿವೃದ್ಧಿಯ ವಿಶಿಷ್ಟ ಚಿಂತಕ ಎ.ಜಿ. ಕೊಡ್ಗಿ


Team Udayavani, Jun 14, 2022, 7:50 AM IST

ಗ್ರಾಮೀಣಾಭಿವೃದ್ಧಿಯ ವಿಶಿಷ್ಟ ಚಿಂತಕ ಎ.ಜಿ. ಕೊಡ್ಗಿ

ಅಮಾಸೆಬೈಲು ಗೋಪಾಲಕೃಷ್ಣ ಕೊಡ್ಗಿ ಓರ್ವ ಬಹುಮುಖ ಪ್ರತಿಭೆಯ ಆಗರವಾಗಿದ್ದರು. ಅಂದರೆ ಯಾವುದೇ ವಿಷಯದ ಕುರಿತು ಕೇಳಿದರೂ ಅದರ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿ ಪರಿಪೂರ್ಣ ಮಾಹಿತಿ ಹೊಂದಿದ್ದರು. ಆದ್ದರಿಂದ ಕೊಡ್ಗಿ ಅಂದರೆ ಜ್ಞಾನ ಮತ್ತು ಅನುಭವದ ಕಣಜವೇ ಆಗಿದ್ದರು.

ಕೊಡ್ಗಿಯವರ ಆಸಕ್ತಿ ವೈದ್ಯರಾಗಿ ಜನಸೇವೆ ಮಾಡುವುದಾಗಿತ್ತು. ಆದರೆ ತಾಂತ್ರಿಕ ಸಮಸ್ಯೆಯಿಂದ ಅದು ಕೈಗೂಡಲಿಲ್ಲ. ಹಾಗಾಗಿ ಕಾನೂನು ಪದವೀಧರರಾದರು. ಬೆಂಗಳೂರಿನಲ್ಲಿ ಕೆಲ ಸಮಯ ನ್ಯಾಯವಾದಿಯಾಗಿ ಕೆಲಸ ನಿರ್ವಹಿಸಿ ಅನಂತರ ಊರಿಗೆ ಬಂದು ಕೃಷಿ ಮತ್ತು ಸಮಾಜಸೇವೆಯತ್ತ ಗಮನ ಹರಿಸಿದರು. ಜತೆಗೇ ರಾಜಕೀಯದ ಆಸಕ್ತಿಯೂ ಬೆಳೆಯಿತು.

ತಂದೆ ಪ್ರಗತಿಪರ ಕೃಷಿಕರಾಗಿದ್ದರೆ, ಎ.ಜಿ. ಕೊಡ್ಗಿಯವರು ಅದಕ್ಕೆ ಹೊಸತನದ ಸ್ಪರ್ಶ ನೀಡಿದರು. ಅನೇಕ ಪ್ರಯೋಗಗಳನ್ನು ನಡೆಸಿ ಪ್ರಯೋಗಶೀಲ ಕೃಷಿಕ ಎಂಬ ರಾಜ್ಯಮಟ್ಟದ ಪ್ರಶಸ್ತಿಯನ್ನೂ ಸಿಂಡಿಕೇಟ್‌ ಪ್ರತಿ ಷ್ಠಾನದಿಂದ ಪಡೆದರು. ಭತ್ತ, ಅಡಿಕೆ, ತೆಂಗು, ಕಬ್ಬು ಮೊದಲಾದ ಬಹುಮುಖೀ ಬೆಳೆಗಳನ್ನು ಬೆಳೆಸಿ ಕೃಷಿ ಕ್ಷೇತ್ರವನ್ನು ಲಾಭದಾಯಕ ವಾಗಿರಿಸಲು ಅನೇಕ ಕ್ರಮಗಳನ್ನು ತಮ್ಮ ಸಂಶೋಧನಾ ಪದ್ಧತಿಯಲ್ಲಿ ಅಳವಡಿಸಿ ಕೊಂಡರು.

ಕೃಷಿಯನ್ನು ಲಾಭದಾಯಕವಾಗಿರಿಸಲು ಯುವಕರಿಗೆ ತಾವೇ ಮಾದರಿಯಾಗಿ ನಿಂತರು. ಸ್ವತಃ ತಾವೇ ಗದ್ದೆಗಳಲ್ಲಿ ದುಡಿದು ಇತರ ಕೃಷಿಕರಿಗೆ ಮಾದರಿ ಯಾದರು. ಕೃಷಿಕನ ಕುರಿತ ಕೊಡ್ಗಿಯವರ ವ್ಯಾಖ್ಯಾನ ವಿಶಿಷ್ಟವಾದುದು. ಎಕರೆಗಟ್ಟಲೆ ಕೃಷಿ ಇದ್ದ ಮಾತ್ರಕ್ಕೆ ಆತ ಕೃಷಿಕನಲ್ಲ. ಕೃಷಿಯ ಕಾಯಕದಲ್ಲಿ ಆತ ದುಡಿಯಬೇಕು. ಹಾಗಿದ್ದಲ್ಲಿ ಮಾತ್ರ ಕೃಷಿಕ. ವಿದ್ಯಾವಂತ ಯುವಕರು ಸರಕಾರಿ ಕೆಲಸವನ್ನು ಕೇಳಿ ಬಂದಾಗ ಕೊಡ್ಗಿಯವರು ಅವರಿಗೆ ಕೃಷಿಯನ್ನು ಕೈಗೆತ್ತಿಕೊಳ್ಳುವಂತೆ ಮಾರ್ಗದರ್ಶನ ಮಾಡುತ್ತಿದ್ದರು. ಕೃಷಿಯನ್ನು ತ್ಯಜಿಸಿ ನಗರದತ್ತ ವಲಸೆ ಹೋಗುವುದಕ್ಕೆ ಕೊಡ್ಗಿಯವರ ಅಸಮಾಧಾನವಿತ್ತು. ತಮ್ಮ ಮಕ್ಕಳನ್ನು ಕೂಡ ಕೃಷಿಯಲ್ಲಿ ತೊಡಗಿಸಿ ನೈತಿಕತೆಯನ್ನು ಮೆರೆದರು. ಹೈನುಗಾರಿಕೆಯ ಅಭಿವೃದ್ಧಿಗಾಗಿ ಭಾಷಣ ಮಾಡಲಿಲ್ಲ. ಗ್ರಾಮ ಗ್ರಾಮಗಳನ್ನು ಸುತ್ತಿದರು. ಡಾ| ಟಿ.ಎ. ಪೈಯವರು ಕೊಡ್ಗಿಯವರಿಗೆ ಬೆಂಬಲ ನೀಡಿದರು. ಹಳ್ಳಿಗರ ಮನವೊಲಿಸಿ ಹಳ್ಳಿ ಹಳ್ಳಿಗಳಲ್ಲಿ ಹಾಲು ಉತ್ಪಾದಕರ ಸಂಘದ ಸ್ಥಾಪನೆಗೆ ಕಾರಣರಾದರು. ಅವರೇ ಹೈನುಗಾರರಾಗಿ ಅದರ ಅನುಭವ ಪಡೆದರು.

ರಾಜಕೀಯ ಸೆಳೆತ
ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದ ಕೊಡ್ಗಿಯವರು 1960ರಲ್ಲಿ ರಾಜಕೀಯ ಪ್ರವೇಶಿಸಿದರು. ಹಾಲಾಡಿ ಕ್ಷೇತ್ರದಿಂದ ತಾಲೂಕು ಬೋರ್ಡಿನ ಸದಸ್ಯರಾಗಿ ಆಯ್ಕೆಯಾದರು. 1972 ಹಾಗೂ 1978ರಲ್ಲಿ ಎರಡು
ಬಾರಿ ಬೈಂದೂರು ಕ್ಷೇತ್ರದ ಶಾಸಕರಾಗಿ ಆಯ್ಕೆಯಾದರು. 2006ರಲ್ಲಿ ಮೂರನೇ ಹಣಕಾಸು ಅಯೋಗದ ಅಧ್ಯಕ್ಷ ರಾಗಿಯೂ 2009ರಲ್ಲಿ ಮೂರನೇ ಹಣಕಾಸು ಅಯೋಗದ ಅನುಷ್ಠಾನ ಕಾರ್ಯಪಡೆಯ ಅಧ್ಯಕ್ಷ ರಾಗಿಯೂ ಸೇವೆ ಸಲ್ಲಿಸಿದರು.

ಅಮಾಸೆಬೈಲು ಚಾರಿಟೆಬಲ್‌ ಟ್ರಸ್ಟ್‌
ಕೊಡ್ಗಿಯವರ ಗ್ರಾಮೀಣ ಅಭಿವೃದ್ಧಿಯ ಚಿಂತನೆ ವಿಶಿಷ್ಟವಾದುದು. ತಮ್ಮ ಚಿಂತನೆಗಳ ಪ್ರಾಯೋಗಿಕ ಅನುಷ್ಠಾನಕ್ಕೆ ಅವರು ಆಯ್ಕೆ ಮಾಡಿಕೊಂಡುದು ಅಮಾಸೆಬೈಲು ಗ್ರಾಮವನ್ನು. ಈ ಉದ್ದೇಶಕ್ಕಾಗಿ ಅಮಾಸೆಬೈಲು ಚಾರಿಟೆಬಲ್‌ ಟ್ರಸ್ಟ್‌ ಅಸ್ತಿತ್ವಕ್ಕೆ ಬಂದಿತು. ಡಾ| ಡಿ. ವೀರೇಂದ್ರ ಹೆಗ್ಗಡೆ ಯವರು ಇದರ ಗೌರವಾಧ್ಯಕ್ಷರು. ಇಡೀ ಗ್ರಾಮವನ್ನು ಸೋಲಾರ್‌ ಗ್ರಾಮವನ್ನಾಗಿ ಪರಿವರ್ತಿಸಿ ರಾಷ್ಟ್ರಕ್ಕೆ ಮಾದರಿ ಗ್ರಾಮವನ್ನಾಗಿ ಪರಿವರ್ತಿಸಿದರು. ಅವರ ಈ ಸಾಧನೆಗಾಗಿ 2019ರಲ್ಲಿ ರಾಷ್ಟ್ರೀಯ ಸೂರ್ಯಮಿತ್ರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ಟ್ರಸ್ಟಿನ ಮೂಲಕ ಅಮಾಸೆಬೈಲು ಗ್ರಾಮದ ಸಮಗ್ರ ಅಭಿವೃದ್ಧಿಗೆ ಕಾರಣೀಕರ್ತರಾದರು. ಗ್ರಾಮೀಣಾಭಿವೃದ್ಧಿಗೊಂದು ದಿಕ್ಸೂಚಿಯನ್ನು ಈ ಮೂಲಕ ತೋರಿಸಿದರು.

ಕೊಡ್ಗಿಯವರ ಜ್ಞಾನಗಳೆಲ್ಲವೂ ಅನುಭವಾಧಾರಿತ. ಅದಕ್ಕೆ ಪ್ರಾಯೋಗಿಕತೆಯ ಸ್ಪರ್ಶವಿದೆ. ಎಲ್ಲ ಕ್ಷೇತ್ರಗಳಿಗೆ ಅಗತ್ಯವಾದ ಚಿಂತನೆಗಳಿವೆ. ಹಾಗಾಗಿ ಕೊಡ್ಗಿಯವರು ನಮ್ಮ ನಡುವಿದ್ದ ಅಪೂರ್ವ ವ್ಯಕ್ತಿ ಎನ್ನಬಹುದು.

– ಡಾ| ಶ್ರೀಕಾಂತ ರಾವ್‌, ಸಿದ್ದಾಪುರ

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ ಅಡಿಗೆ ಸಿಲುಕಿದ ಬೈಕ್; ಯಕ್ಷಗಾನ ಕಲಾವಿದ ಸ್ಥಳದಲ್ಲೇ ಮೃತ್ಯು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.