ಕೋಡಿ: ಮರಳು ದಿಬ್ಬಕ್ಕೆ ಬೋಟು ಢಿಕ್ಕಿ
Team Udayavani, May 12, 2019, 11:32 AM IST
ಕುಂದಾಪುರ: ಕೋಡಿ ಸಮುದ್ರ ತೀರದಿಂದ ಮೀನುಗಾರಿಕೆಗೆ ತೆರಳಿದ್ದ ಎರಡು ಸಣ್ಣ ಬೋಟ್ಗಳು ಮರಳು ದಿಬ್ಬಕ್ಕೆ ಢಿಕ್ಕಿ ಹೊಡೆದು ಮರಳಲ್ಲಿ ಹೂತು ಹೋದ ಘಟನೆ ಶನಿವಾರ ಸಂಭವಿಸಿದ್ದು, ಮೀನುಗಾರರು ಪಾರಾಗಿದ್ದಾರೆ.
ಕೋಡಿಯ ವಿಶ್ವನಾಥ ಖಾರ್ವಿಗೆ ಸೇರಿದ ಮಂದಾರ್ತಿ ಮಾತಾ ಹೆಸರಿನ 2 ಬೋಟ್ಗಳು ಸಮುದ್ರದಲ್ಲಿ ನೀರು ಕಡಿಮೆ ಇದ್ದ ಕಾರಣದಿಂದಾಗಿ ಹೂಳಲ್ಲಿ ಸಿಲುಕಿಕೊಂಡಿತ್ತು. ಬೋಟ್ನಲ್ಲಿದ್ದ ಮೀನುಗಾರರು ಮಧ್ಯಾಹ್ನದ ಭರತದ ತನಕ ಕಾದು, ಬಳಿಕ ಅಲ್ಲಿಂದ ಬೋಟನ್ನು ದಡಕ್ಕೆ ತಂದರು.
ಗಂಗೊಳ್ಳಿ ಬ್ರೇಕ್ ವಾಟರ್ ಕಾಮಗಾರಿ ಹಿನ್ನೆಲೆಯಲ್ಲಿ ತೆಗೆಯಲಾದ ಮಣ್ಣು ತೆರವುಗೊಳಿಸದೆ, ಅಲ್ಲಿಯೇ ರಾಶಿ ಹಾಕಿರುವುದು ಅವಘಡಕ್ಕೆ ಕಾರಣ ಎಂದು ಮೀನುಗಾರರು ಆರೋಪಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆಯೂ ಒಂದು ಬೋಟ್ ಇದೇ ರೀತಿ ಸಿಲುಕಿಕೊಂಡಿತ್ತು. ಅಳಿವೆಯಲ್ಲಿ ಮರಳು ರಾಶಿ ಬಿದ್ದಿದ್ದು, ಮಳೆಗಾಲಕ್ಕೆ ತೆರವುಗೊಳಿಸದಿದ್ದರೆ ಮತ್ತಷ್ಟು ಅನಾಹುತ ಸಂಭವಿಸುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್
R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್