ಕುಂದಾಪುರ: ಜೋಡೆತ್ತಿನ ಗಾಡಿಯಲ್ಲಿ ಬಂದ ಮದುಮಗಳು
Team Udayavani, Jan 28, 2022, 7:03 AM IST
ಕುಂದಾಪುರ: ಸಂಪ್ರದಾಯದ ನೆನಪಿಗಾಗಿ ಮದುಮ ಗಳನ್ನು ಜೋಡೆತ್ತಿನ ಗಾಡಿಯಲ್ಲಿ ಕರೆತಂದ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಟ್ಟಿನಮಕ್ಕಿ ಬವಳಾಡಿ ಮಹಾಬಲ ಆಚಾರ್ಯ ಅವರ ಪುತ್ರಿ ಪ್ರತಿಮಾ ಹಾಗೂ ಕಟ್ಬೆಲೂ¤ರು ಬಾಬು ಆಚಾರ್ಯ ಅವರ ಪುತ್ರ ಗುರುರಾಜ್ ಅವರ ವಿವಾಹ ಜ.26ರಂದು ಕಿರಿಮಂಜೇಶ್ವರದ ಅರೆಹೊಳೆ ಕ್ರಾಸ್ನ ಮಾಂಗಲ್ಯ ಆರ್ಕೆಡ್ನ ಚಿನ್ಮಯಿ ಸಭಾಭವನದಲ್ಲಿ ನಡೆದಿದೆ.
ಕಟ್ಟಿನಮಕ್ಕಿ ಬವಳಾಡಿಯ ಮಹಾಬಲ ಆಚಾರ್ಯ ಅವರು ಪುತ್ರಿಯ ದಿಬ್ಬಣವನ್ನು ಮದುವೆ ಮಂಟಪಕ್ಕೆ ಅವರು ಕರೆತರಲು ಬೈಂದೂರಿನ ಸೀತಾರಾಮ ಶೆಟ್ಟಿ ಅವರ ಎತ್ತಿನಗಾಡಿಯನ್ನು ನಿಗದಿಪಡಿಸಿದರು.
ಕಿರಿಮಂಜೇಶ್ವರವರೆಗೆ ಕಾರಿನಲ್ಲಿ ಬಂದು ಅಲ್ಲಿಂದ ಜೋಡೆತ್ತಿನ ಗಾಡಿ ಯಲ್ಲಿ ಮದುಮಗಳು ಸಾಗಿ ಬಂದಳು. ದಾರಿಯುದ್ದಕ್ಕೂ ಸಾರ್ವಜನಿಕರು ಈ ಸಂಭ್ರಮವನ್ನು ಕಣ್ತುಂಬಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundapur: ಕುಸಿದು ಬಿದ್ದು ಸಾವು
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು
Delhi Police: ಮಾರುತಿ ಸ್ವಿಫ್ಟ್ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
ಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ