ಬಸ್ರೂರು ಮಾರ್ಗವಾಗಿ ಸಂಚರಿಸದ ಬಸ್
Team Udayavani, May 16, 2020, 5:15 AM IST
ಬಸ್ರೂರು: ಉಡುಪಿ ಜಿಲ್ಲೆ ಯೊಳಗೆ ಸೀಮಿತ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಆದರೆ ಕುಂದಾಪುರದಿಂದ ಬಸ್ರೂರು ಮಾರ್ಗವಾಗಿ ಸಿದ್ದಾಪುರ ಕಡೆಗೆ ಯಾವುದೇ ಬಸ್ ಸಂಚಾರ ಆರಂಭಿಸಿಲ್ಲ. ಇದರಿಂದ ಕೆಲ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.
ಕುಂದಾಪುರ – ಉಡುಪಿ, ಬೈಂದೂರಿಗೆ ಕೆಲವು ಬಸ್ಗಳು ಸಂಚರಿಸಿದರೂ ಕುಂದಾಪುರದಿಂದ ಬಸ್ರೂರು ಕಂಡ್ಲೂರು ಮಾರ್ಗವಾಗಿ ಸಿದ್ದಾಪುರ ಕಡೆಗೆ ಯಾವುದೇ ಬಸ್ ಸಹ ಸಂಚರಿಸಲಿಲ್ಲ. ಈ ಮಾರ್ಗದಲ್ಲಿ ಖಾಸಗಿ ಬಸ್ಗಳೇ ಹೆಚ್ಚಿದ್ದು, ಮೂರು ಸರಕಾರಿ ಬಸ್ಗಳು ಹೊಸಂಗಡಿ, ಯಡಮೊಗೆ – ಜಡ್ಡಿನಗದ್ದೆಗೆ ಸಂಚರಿಸುತ್ತಿತ್ತು. ಆದರೆ ಸರಕಾರಿ ಬಸ್ಗಳು ಸಂಚರಿಸಲಿಲ್ಲ. ಕುಂದಾಪುರದ ಕಚೇರಿ ಮತ್ತಿತರ ಕೆಲಸಗಳಿಗೆ ಪ್ರತಿ ನಿತ್ಯ ಸಂಚರಿಸುವವರಿಗೆ ಇದರಿಂದ ಅನಾನುಕೂಲವಾಗಿದೆ. ರಸ್ತೆಯಲ್ಲಿ ಖಾಸಗಿ ಕಾರು, ರಿಕ್ಷಾ ಮತ್ತು ದ್ವಿಚಕ್ರ ವಾಹನಗಳಷ್ಟೇ ಸಂಚರಿಸುತ್ತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Neha Case: ನೇಹಾ ಅಮಾನುಷ ಹತ್ಯೆಗೆ ಜೆ.ಪಿ.ಹೆಗ್ಡೆ ಖಂಡನೆ
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ