ಮಳೆಗಾಲದಲ್ಲಿ ಮರದ ಸಂಕ; ಬಾಕಿ ದಿನ ಹೊಳೆಯಲ್ಲೇ ನಡಿಗೆ 


Team Udayavani, Sep 24, 2021, 8:00 AM IST

ಮಳೆಗಾಲದಲ್ಲಿ ಮರದ ಸಂಕ; ಬಾಕಿ ದಿನ ಹೊಳೆಯಲ್ಲೇ ನಡಿಗೆ 

ಬೈಂದೂರು: ಈ ಊರಿನ ಜನರ ಬದುಕು ಅಕ್ಷರಶಃ  ನರಕ ಯಾತನೆಯಂತಿದೆ. ಆಸ್ಪತ್ರೆಗೆ ಹೋಗಬೇಕಾದರೆ ನಾಲ್ಕೈದು ಕಿ.ಮೀ. ಹೊತ್ತುಕೊಂಡು ಹೋಗಬೇಕು. ಕಲ್ಲು, ಮಣ್ಣಿನ ದುರ್ಗಮ ದಾರಿಯಲ್ಲಿ 15 ಕಿ.ಮೀ. ನಡೆದರೆ ಡಾಮರು ಹಾಸಿದ ರಸ್ತೆಯನ್ನು ಕಾಣಬಹುದಾಗಿದೆ. ಮೊಬೈಲ್‌ ನೆಟ್‌ವರ್ಕ್‌ ಇಲ್ಲದೆ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾದರೆ ಮನೆಗಳಿಗೆ ದಾರಿ ಇಲ್ಲದ ಕಾರಣ ಇಲ್ಲಿನ ಯುವತಿಯರಿಗೆ ನೆಂಟಸ್ತಿಕೆಯೇ ಬರುತ್ತಿಲ್ಲವಂತೆ!

ಬೈಂದೂರು ತಾಲೂಕು ಕೇಂದ್ರದಿಂದ 15 ಕಿ.ಮೀ. ದೂರದಲ್ಲಿರುವ ಯಡ್ತರೆ ಗ್ರಾ.ಪಂ. ವ್ಯಾಪ್ತಿಯ ಊದೂರು ಸಮೀಪದ ಕರ್ನ ಗದ್ದೆಯೇ ಈ ಕುಗ್ರಾಮ.

ಕಾಲ್ನಡಿಗೆಯೇ ಗತಿ:

ಇಲ್ಲಿ ಬಹು ವರ್ಷಗಳಿಂದ ರಸ್ತೆ ಇಲ್ಲ, ಸೇತುವೆ ಆಗಿಲ್ಲ. ಕರ್ನಗದ್ದೆಯಲ್ಲಿ 70ಕ್ಕೂ ಹೆಚ್ಚು ಕುಟುಂಬಗಳು ನೆಲೆಸಿವೆ. ಶಿರೂರು ಮಾರ್ಗವಾಗಿ ಊದೂರು ಸಮೀಪದ ಬಲಭಾಗದಿಂದ ಹತ್ತು ಕಿ.ಮೀ. ಮಣ್ಣಿನ ರಸ್ತೆ ಕಾಡಿನ ಮಧ್ಯೆ ಸಾಗುತ್ತದೆ. ಬಳಿಕ ಮಸಿಬೆಟ್ಟು ಹೊಳೆ ಹರಿಯುತ್ತದೆ. ಯಾವುದೇ ವಾಹನ ಬಂದರೂ ಸಹ ಈ ನದಿ ದಂಡೆಯವರೆಗೆ ಮಾತ್ರ. ಆ ಮೇಲೆ ಕಾಲ್ನಡಿಗೆಯೇ ಗತಿ. ಸೇತುವೆ ಇಲ್ಲದ ಕಾರಣ ನೀರಿಗಿಳಿದೇ ದಾಟಬೇಕು. ಸೇತುವೆಯಾಗಿ ಮರದ ದಿಮ್ಮಿಯನ್ನು ಊರವರು ಹಾಕುತ್ತಿದ್ದು, ಮಳೆಗಾಲದಲ್ಲಿ ಅದರ ಮೇಲೆಯೇ ನಡೆದು ಸಾಗಬೇಕು. ಕಾಲು ಜಾರಿದರೆ ಪ್ರವಾಹಕ್ಕೆ ಬೀಳುವುದು ನಿಶ್ಚಿತ.

ಕೃಷಿ, ಶಾಲೆ, ಆಸ್ಪತ್ರೆ, ನಿತ್ಯ ವ್ಯವಹಾರ ಎಲ್ಲಿಗೆ ಹೋಗಬೇಕಿದ್ದರೂ ಇಲ್ಲಿನ ಜನರು ನದಿ ದಾಟಿಯೇ ಹೋಗಬೇಕಿರುವುದರಿಂದ ಗ್ರಾಮೀಣ ಭಾಗದ ಜನರ ಬದುಕು ಅತಂತ್ರವಾಗಿದೆ. ದೂರದಲ್ಲಿರುವ ಸಂಬಂಧಿಕರು ಕೂಡ ಇಲ್ಲಿನ ಮನೆಗಳಿಗೆ ಬರುವುದೆಂದರೆ ಹಿಂದೆ ಮುಂದೆ ನೋಡುತ್ತಾರೆ.

ಸುಮಾರು 60 ವರ್ಷಗಳಿಂದ ಈ ಊರಿಗೆ ಯಾವುದೇ ಸರಕಾರಿ ಯೋಜನೆ ಬಂದಿಲ್ಲ. ಸೇತುವೆ, ಡಾಮರು ರಸ್ತೆ ಚುನಾವಣೆ ಸಮಯದ ಭರವಸೆಯಾಗಿ ಉಳಿದು ಬಿಟ್ಟಿದೆ. ಆದ್ದರಿಂದ ಸ್ಥಳೀಯರು ವ್ಯವಸ್ಥೆಯ ಮೇಲಿನ ನಂಬಿಕೆಯನ್ನೇ ಕಳೆದುಕೊಂಡಿದ್ದಾರೆ.

ಸೇತುವೆ ನಿರ್ಮಿಸಿ:

ಈ ಭಾಗದಲ್ಲಿ ಸುಮಾರು 25 ಅಂಗವಿಕಲರಿದ್ದು ಅವರನ್ನು ಹೊತ್ತುಕೊಂಡೇ ನದಿ ದಾಟಬೇಕಾಗಿದೆ. ಹೀಗಾಗಿ ಕನಿಷ್ಠ ಪಕ್ಷ ಇಲ್ಲಿನ ಮಸಿಬೆಟ್ಟು ಹೊಳೆಗೆ ಸೇತುವೆ ನಿರ್ಮಾಣವಾದರೆ ಸುಮಾರು ಸಮಸ್ಯೆ ಗಳಿಗೆ ಮುಕ್ತಿ ಸಿಗುತ್ತದೆ. ಆದುದರಿಂದ ಸರಕಾರ ಕರ್ನಗದ್ದೆ ಗೊಂದು ಸೇತುವೆ ಮಂಜೂರು ಮಾಡಬೇಕು ಎನ್ನುವುದು ಸಾರ್ವತ್ರಿಕ ಬೇಡಿಕೆಯಾಗಿದೆ.

ನೂರಾರು ಕೋಟಿ ರೂ. ಅನುದಾನ, ಸಾವಿರಾರು ಕೋಟಿ ಪ್ರಗತಿಯ ಘೋಷಣೆಗಳ ನಡುವೆ ಕತ್ತಲಲ್ಲಿ ಜೀವನ ಸಾಗಿಸುವ ಈ ಗ್ರಾಮದ ಬಗ್ಗೆ ಇಲಾಖೆ, ಸರಕಾರ, ಜನಪ್ರತಿನಿಧಿಗಳು ಗಮನ ಹರಿಸಬೇಕಿದೆ. ಜನರ ಸಂಕಷ್ಟಗಳಿಗೆ ಶೀಘ್ರ ಸ್ಪಂದಿಸಬೇಕಿದೆ.

ಕರ್ನಗದ್ದೆಯಲ್ಲಿ ಕಳೆದ 18 ವರ್ಷಗಳಿಂದ ವಾಸವಾಗಿದ್ದೇನೆ. ಪ್ರತೀ ದಿನ ಕೆಲಸ ಮುಗಿಸಿ ರಾತ್ರಿ ಕಾಡಿನಲ್ಲಿ ಸಾಗಬೇಕು. ವಾಹನ ಇದ್ದರೂ ಮನೆಯ ವರೆಗೆ ಕೊಂಡೊಯ್ಯಲಾಗುತ್ತಿಲ್ಲ. ಇಲ್ಲಿನ ಯುವ ಸಮುದಾಯ, ವಿದ್ಯಾರ್ಥಿಗಳು ನಮ್ಮಲ್ಲಿ ಇನ್ನೂ ಮೂಲಸೌಲಭ್ಯಗಳೇ ಇಲ್ಲ ಎಂದು ಹೇಳಿಕೊಳ್ಳಲು ಮುಜುಗರ ಅನುಭವಿಸುತ್ತಿದ್ದಾರೆ. ಹತ್ತಾರು ಬಾರಿ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಜಿಲ್ಲಾಡಳಿತ, ಶಾಸಕರು, ಸಂಸದರು ಕನಿಷ್ಠ ಒಂದು ಸೇತುವೆ ಮಂಜೂರು ಮಾಡಿದರೆ ಬಹಳಷ್ಟು ಅನುಕೂಲವಾಗುತ್ತಿತ್ತು.ಚಂದ್ರಶೇಖರ ಶೆಟ್ಟಿ, ಸ್ಥಳೀಯರು

ಬೈಂದೂರು ತಹಶೀಲ್ದಾರ್‌ ಆಗಿ ಅಧಿಕಾರ ವಹಿಸಿಕೊಂಡು ಸ್ವಲ್ಪ ಸಮಯವಾಗಿದ್ದ ಕಾರಣ ಸಂಪೂರ್ಣ ತಾಲೂಕು ಭೇಟಿ ಸಾಧ್ಯವಾಗಿಲ್ಲ . ಕರ್ನಗದ್ದೆ ಸಮಸ್ಯೆ ಕುರಿತು ಮಾಹಿತಿ ಸದ್ಯದಲ್ಲೇ ಸ್ಥಳಕ್ಕೆ ಭೇಟಿ ನೀಡುತ್ತೇನೆ ಮತ್ತು ಅಲ್ಲಿನ ಸಮಸ್ಯೆ ಆಲಿಸಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡುತ್ತೇನೆ.ಶೋಭಾಲಕ್ಷ್ಮೀ , ತಹಶೀಲ್ದಾರರು, ಬೈಂದೂರು

-ಅರುಣ್‌ ಕುಮಾರ್‌ ಶಿರೂರು

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-congress

Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್‌ರಾಜ್‌ ಮೌರ್ಯ

7

Kundapur: ಬೈಕ್‌ ಢಿಕ್ಕಿ; ಸ್ಕೂಟರ್‌ ಸವಾರೆಗೆ ಗಾಯ

1-wewewe

Congress;ಪ್ರತಾಪ್‌ಚಂದ್ರ ಶೆಟ್ಟಿ-ಜೆ.ಪಿ.ಹೆಗ್ಡೆ ಭೇಟಿ: ಕಾರ್ಯತಂತ್ರದ ಸಮಾಲೋಚನೆ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

suicide

ಕಾಶ್ಮೀರದಲ್ಲಿ ಗುಂಡು ಹಾರಿಸಿ ಬಿಹಾರ ಕಾರ್ಮಿಕನ ಹತ್ಯೆ  

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.