ಈಡೇರಿದ ರೈತರ ದಶಕಗಳ ಬೇಡಿಕೆ
Team Udayavani, May 15, 2020, 5:56 AM IST
ಕೋಟ: ಕೋಟ ಗ್ರಾ.ಪಂ. ವ್ಯಾಪ್ತಿಯ ಗಿಳಿಯಾರು ಹಂಡೆಕೆರೆ ಭಾಗದ ಕೃಷಿಭೂಮಿಗೆ ತೆಕ್ಕಟ್ಟೆ, ಮಣೂರು ದೇವಸ ಮಾರ್ಗವಾಗಿ ವಾರಾಹಿ ನೀರು ಹರಿದು ಬಂದಿದ್ದು ಈ ಭಾಗದ ರೈತರ ದಶಕಗಳ ಬೇಡಿಕೆ ಫಲಿಸಿದೆ.
ಇಲ್ಲಿನ ನೂರಾರು ಎಕ್ರೆ ಕೃಷಿಭೂಮಿಯ ಬಿತ್ತನೆ, ನಾಟಿ ಮುಂತಾದ ಚಟುವಟಿಕೆಗಳಿಗೆ ವಾರಾಹಿ ನೀರು ಅಗತ್ಯವಿದ್ದು ಈ ಕುರಿತು ಸ್ಥಳೀಯ ರೈತರು ಹಲವಾರು ಬಾರಿ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮುಂತಾದವರಿಗೆ ಮನವಿ ಮಾಡಿದ್ದರು. ಇದೀಗ ಇವರ ಬೇಡಿಕೆ ಈಡೇರಿದ್ದು ಕೃಷಿ ಚಟುವಟಿಕೆಗೆ ಅನುಕೂಲವಾಗಿದೆ ಹಾಗೂ ಈ ಬಾರಿ ಮುಂಗಾರು ಮಳೆಗೆ ಕಾಯದೆ ಬಿತ್ತನೆ, ನಾಟಿ ನಡೆಸಬಹುದಾದ ವಾತವರಣ ಇಲ್ಲಿ ನಿರ್ಮಾಣವಾಗಿದೆ. ಬೇಡಿಕೆಗೆ ಪೂರಕ ಪ್ರತಿಕ್ರಿಯೆ ನೀಡಿದ ಶಾಸಕರು, ಇತರ ಜನಪ್ರತಿನಿಧಿಗಳು ಹಾಗೂ ವಾರಾಹಿ ಅಧಿಕಾರಿಗಳಿಗೆ ರೈತರು ಅಭಿನಂದನೆ ಸಲ್ಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ
Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ
Subramanya ಏನೆಕಲ್ಲು: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ