ಆನೆಗುಡ್ಡೆ ಶ್ರೀ ವಿನಾಯಕ ದೇಗುಲ: ಸಂಭ್ರಮದ ದೀಪೋತ್ಸವ
Team Udayavani, Dec 4, 2020, 8:53 AM IST
ತೆಕ್ಕಟ್ಟೆ: ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಕೋವಿಡ್-19 ಆತಂಕದ ನಡುವೆಯೂ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಡಿ.3 ಗುರುವಾರದಂದು ಸಂಭ್ರಮದ ದೀಪೋತ್ಸವ ನಡೆಯಿತು.
ಈ ಸಂದರ್ಭದಲ್ಲಿ ನೂರಾರು ಭಕ್ತರು ಸನ್ನಿಧಿಯಲ್ಲಿ ನೆರೆದಿದ್ದರು. ದೇವಳದ ಹಿರಿಯ ಧರ್ಮದರ್ಶಿ ಕೆ.ಸೂರ್ಯನಾರಾಯಣ ಉಪಾಧ್ಯಾಯ, ಆಡಳಿತ ಧರ್ಮದರ್ಶಿ ಕೆ.ಶ್ರೀರಮಣ ಉಪಾಧ್ಯಾಯ, ದೇವಳದ ಮೆನೇಜರ್ ತೆಕ್ಕಟ್ಟೆ ನಟೇಶ್ ಕಾರಂತ್, ಪರ್ಯಾಯ ಅರ್ಚಕ ಕೆ. ಗಣೇಶ್ ಉಪಾಧ್ಯಾಯ, ಅರ್ಚಕ ವೃಂದ, ದೇವಳದ ಸಿಬಂದಿಗಳು ಉಪಸ್ಥಿತರಿದ್ದರು.
ಚಿತ್ರಕೃಪೆ: ಲೋಕೇಶ್ ಆಚಾರ್ಯ