ಬಸ್ರೂರು: ಶಿಥಿಲಗೊಂಡಿರುವ ಹಳೆ ನೀರಿನ ಟ್ಯಾಂಕ್; ಎಚ್ಚೆತ್ತುಕೊಳ್ಳದಿದ್ದರೆ ಅಪಾಯ
Team Udayavani, Nov 16, 2020, 2:02 AM IST
ಬಸ್ರೂರು: ಬಸ್ರೂರು ಬಸ್ ನಿಲ್ದಾಣದ ಬಳಿ ಗುಪ್ಪಿಹಾಡಿಗೆ ಹೋಗುವ ರಸ್ತೆ ಬಳಿ ಒಂದು ಹಳೆಯ ನೀರಿನ ಟ್ಯಾಂಕ್ ಪ್ರಸ್ತುತ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಹಳೆ ನೀರಿನ ಟ್ಯಾಂಕ್ ಸುಮಾರು 50 ವರ್ಷಕ್ಕೂ ಹಿಂದೆಯೇ ನಿರ್ಮಿಸಿದ್ದು, ಅದು ಸೋರತೊಡಗಿ ಶಿಥಿಲಗೊಂಡಾಗ ಗುಂಡಿಗೋಳಿಗೆ ಹೋಗುವ ದಾರಿಯಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ಗ್ರಾಮೀಣ ನೀರು ಸರಬರಾಜು ಇಲಾಖೆ ವತಿಯಿಂದ 2.50 ಲಕ್ಷ ಲೀ. ಸಾಮರ್ಥ್ಯದ ನೂತನ ನೀರು ಟ್ಯಾಂಕ್ ಅನ್ನು ರಚಿಸಲಾಯಿತು.
ಆದರೆ ಶಿಥಿಲಗೊಂಡು ಬೀಳುವ ಸ್ಥಿತಿಯಲ್ಲಿರುವ ಹಳೆ ನೀರಿನ ಟ್ಯಾಂಕ್ ಮಾತ್ರ ಹಾಗೆಯೇ ಮುಖ್ಯ ರಸ್ತೆ ಪಕ್ಕ ಉಳಿದುಕೊಂಡಿದೆ. ಇದರ ಸುತ್ತ ಮುತ್ತ ಹಲವು ಮನೆಗಳಿದ್ದು, ಬಿದ್ದರೆ ಅಪಾಯ ಕಟ್ಟಿಟ್ಟದ್ದು. ತತ್ಕ್ಷಣ ತೆರವು ಮಾಡಬೇಕು ಎನ್ನುವುದು ಜನರ ಆಗ್ರಹವಾಗಿದೆ. ನಮ್ಮ ಮನೆ ಸಮೀಪವೇ ಹಳೆಯ ಟ್ಯಾಂಕ್ ಇದೆ. ಇದು ಯಾವಾಗ ಬೀಳುತ್ತದೆ ಎಂದು ಹೇಳಲಾಗದು. ಬಿದ್ದರೆ ಗಂಡಾಂತರ ತಪ್ಪಿದ್ದಲ್ಲ, ಅದಕ್ಕೂ ಮೊದಲೇ ತೆರವು ಮಾಡಬೇಕಿದೆ ಎಂದು ಸ್ಥಳೀಯರಾದ ಶ್ರೀಧರ ಹೇಳುತ್ತಾರೆ.
ತೆರವಿಗೆ ಕ್ರಮ
ಬಸ್ರೂರು ಗ್ರಾ.ಪಂ. ವತಿಯಿಂದ ಕೆಲವು ವರ್ಷಗಳ ಹಿಂದೆಯೇ ಹಳೆ ನೀರಿನ ಟ್ಯಾಂಕನ್ನು ಉರುಳಿಸಲು ಅನುಮತಿ ನೀಡಬೇಕೆಂದು ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆಯಲಾಗಿದೆ. ಆದರೆ ಇದುವರೆಗೂ ಅವರಿಂದ ಯಾವುದೇ ಪತ್ರ ಬಂದಿಲ್ಲ. ಅನುಮತಿ ನೀಡಿದ ತತ್ಕ್ಷಣ ಹಳೆ ನೀರಿನ ಟ್ಯಾಂಕನ್ನು ತೆರವು ಮಾಡಿ ಅಪಾಯವಾಗದಂತೆ ಜಾಗ್ರತೆ ಮಾಡಲಾಗುತ್ತದೆ.
– ನಾಗೇಂದ್ರ ಜೆ., ಪಿಡಿಒ, ಬಸ್ರೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ