ವಾರದ ಸಂತೆಯಲ್ಲಿಯೂ ತುಟ್ಟಿಯಾದ ತರಕಾರಿ
Team Udayavani, Nov 21, 2021, 6:43 AM IST
ಕುಂದಾಪುರ / ಉಡುಪಿ/ಮಂಗಳೂರು: ರಾಜ್ಯದೆಲ್ಲೆಡೆ ನಿರಂತರ ಧಾರಾಕಾರ ಮಳೆಯಿಂದಾಗಿ ಹೊಲದಲ್ಲೇ ತರಕಾರಿ ಕೊಳೆಯುತ್ತಿದೆ. ಬೇಡಿಕೆಯಷ್ಟು ತರಕಾರಿ ಮಾರುಕಟ್ಟೆಗೆ ಪೂರೈಕೆಯಾಗದಿರುವ ಕಾರಣ ಬೆಲೆ ಗಗನಕ್ಕೇರುತ್ತಿದೆ.
ಟೊಮೇಟೊ, ತೊಂಡೆಕಾಯಿ, ಶುಂಠಿ, ಬೀನ್ಸ್, ಬದನೆ, ಬೆಂಡೆಕಾಯಿ, ಸೌತೆಕಾಯಿ ದರ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಮಳೆಯಿಂದಾಗಿ ಬಹುತೇಕ ತರಕಾರಿ ಬೆಳೆಗೆ ಹಾನಿಯಾಗಿದ್ದು, ಬಹು ಬೇಡಿಕೆಯ ತರಕಾರಿಗಳು ನಿರೀಕ್ಷಿತ ಪ್ರಮಾಣದಲ್ಲಿ ಪೂರೈಕೆಯಾಗುತ್ತಿಲ್ಲ.
ಶತಕದ ಬಾರಿಸಿದ ಟೊಮೇಟೊ:
4-5 ದಿನಗಳ ಹಿಂದೆ 60-70ರ ಆಸುಪಾಸಿನಲ್ಲಿದ್ದ ಒಂದು ಕೆಜಿ ಟೊಮೇಟೊ ದರ ಈಗ ಶತಕದ ಗಡಿ ದಾಟಿದೆ. ಶನಿವಾರ ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ಕರಾವಳಿಯೆಲ್ಲೆಡೆ ಕಿಲೋಗೆ 100 ರೂ.ಗಳಂತೆ ಮಾರಾಟವಾಯಿತು. ಉತ್ತಮ ಗುಣಮಟ್ಟದ ಟೊಮೇಟೊ ಅಭಾವ ಕಂಡು ಬಂತು. ಕುಂದಾಪುರ ಸಂತೆಯಲ್ಲಿ ಸ್ವಲ್ಪ ಮಟ್ಟಿಗೆ ಹಾನಿಗೀಡಾಗಿರುವ ಟೊಮೆಟೋ ಹಣ್ಣುಗಳನ್ನು ಕೆಲವರು ಕೆಜಿಗೆ 50 ರೂ.ಗಳಂತೆ ಮಾರುತ್ತಿದ್ದರು. 40 ಇದ್ದ ತೊಂಡೆಗೆ 120 ರೂ.!
ತಿಂಗಳ ಹಿಂದೆ ಕೇವಲ 40 ರೂ. ಇದ್ದ ತೊಂಡೆಕಾಯಿಗೆ ಈಗ 100ರಿಂದ 120 ರೂ. ವರೆಗೆ ಬೇಡಿಕೆ ಬಂದಿದೆ. ಬೇಡಿಕೆಯಷ್ಟು ಪೂರೈಕೆಯಾಗುತ್ತಿಲ್ಲ; ಬೆಲೆ ಮಾತ್ರ ಏರುಗತಿಯಲ್ಲಿ ಸಾಗಿದೆ. ಇನ್ನು ಬೀನ್ಸ್, ಅಲಸಂಡೆ, ಕ್ಯಾರೆಟ್ ಬೆಲೆ 80 ರೂ. ಆಸುಪಾಸಿನಲ್ಲಿವೆ. ತೊಂಡೆಕಾಯಿ 120 ರೂ., ನುಗ್ಗೆ 120 ರೂ., ಅಲಸಂಡೆ 100 ರೂ., ಕೊತ್ತಂಬರಿ ಸೊಪ್ಪು 120 ರೂ. ಇದೆ ಎಂದು ಉಡುಪಿಯ ತರಕಾರಿ ವ್ಯಾಪಾರಿ ಶಫೀಕ್ ತಿಳಿಸಿದ್ದಾರೆ.
ಚಿಕ್ಕಮಗಳೂರು, ಕಡೂರು, ಬೆಳಗಾವಿ, ಹಾಸನ ಮತ್ತು ಬೆಂಗಳೂರಿನಿಂದ ತರಕಾರಿ ನಿರೀಕ್ಷಿತ ಪ್ರಮಾಣದಲ್ಲಿ ಬರುತ್ತಿಲ್ಲ. ಜತೆಗೆ ಡೀಸೆಲ್ ದರವೂ ದುಬಾರಿಯಾಗಿರುವುದು ದಿನೇ ದಿನೆ ತರಕಾರಿ ಬೆಲೆ ಏರಲು ಕಾರಣ ಎಂದು ಹೆಮ್ಮಾಡಿಯ ತರಕಾರಿ ವ್ಯಾಪಾರಿ ವಿದ್ಯಾಕರ ಪೂಜಾರಿ ತಿಳಿಸಿದ್ದಾರೆ.
ಶುಭ ಸಮಾರಂಭಕ್ಕೂ ಹೊರೆ :
ದಸರಾ, ದೀಪಾವಳಿ ಮುಗಿದಿದ್ದು ಬಹುತೇಕ ಕಡೆಗಳಲ್ಲಿ ಮದುವೆ, ಗೃಹ ಪ್ರವೇಶ, ಪೂಜೆ ಸಹಿತ ಹತ್ತಾರು ಶುಭ ಸಮಾರಂಭಗಳು ನಡೆಯುತ್ತಿವೆ. ಅದಕ್ಕೆಂದು ಕೆಲವರು ಸಂತೆಗೆಂದು ತರಕಾರಿ ಖರೀದಿಗೆ ಬಂದಿದ್ದರೆ, ಅಲ್ಲಿ ಅಗತ್ಯದಷ್ಟು ಸಿಗದೆ ನಿರಾಶೆ ಅನುಭವಿಸಿದ್ದು ಕಂಡುಬಂತು.
ಕಳೆದ 3-4 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ತರಕಾರಿ ಬೆಲೆಯಲ್ಲಿ ಭಾರೀ ಏರಿಕೆಯಾಗುತ್ತಿದೆ. ಸಾಮಾನ್ಯವಾಗಿ 50-60 ರ ಆಸುಪಾಸಿನಲ್ಲಿದ್ದ ತರಕಾರಿಗಳ ಬೆಲೆ ಈಗ 70-80ರ ಗಡಿ ದಾಟಿದೆ. ಮಳೆಯಿಂದಾಗಿ ಅಂಗಡಿಗಳಿಗೆ ತರಕಾರಿ ಸರಬರಾಜು ಶೇ. 10ರಿಂದ 15ರಷ್ಟು ಕಡಿಮೆಯಾಗಿದೆ. – ರವಿಚಂದ್ರ ಶೆಟ್ಟಿ ಮಂಗಳೂರು ಹಾಪ್ಕಾಮ್ಸ್ ವ್ಯವಸ್ಥಾಪಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ