ವಿಧಾನಪರಿಷತ್ ಚುನಾವಣೆಗೆ ಅಂತಿಮ ಸಿದ್ಧತೆ
Team Udayavani, Dec 10, 2021, 3:20 AM IST
ಕುಂದಾಪುರ: ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳಿಂದ ಆಯ್ಕೆಯಾಗುವ ವಿಧಾನ ಪರಿಷತ್ ಸದಸ್ಯತ್ವಕ್ಕೆ ಡಿ.10ರಂದು ನಡೆಯುವ ಚುನಾವಣೆಗೆ ಗುರುವಾರ ಎಲ್ಲ ವಿಧದ ಸಿದ್ಧತೆಗಳೂ ನಡೆದವು.
ಸಹಾಯಕ ಕಮಿಷನರ್ ಕೆ. ರಾಜು ಅವರ ಮಾರ್ಗದರ್ಶನದಲ್ಲಿ, ತಹಶೀಲ್ದಾರ್ ಕಿರಣ್ ಗೌರಯ್ಯ ಅವರು ಚುನಾವಣ ಸಿದ್ಧತೆಗಳನ್ನು ಪರಿಶೀಲಿಸಿದರು. ತಾಲೂಕಿನಲ್ಲಿ 45 ಮತಗಟ್ಟೆಗಳಿದ್ದು 296 ಪುರುಷ, 318 ಮಹಿಳಾ ಮತದಾರರು ಸೇರಿ ಒಟ್ಟು 614 ಮತದಾರರಿದ್ದಾರೆ.
45 ಮತಗಟ್ಟೆಗಳಲ್ಲಿ 45 ಪ್ರಥಮ ಮತಗಟ್ಟೆ ಅಧಿಕಾರಿ, 8 ಹೆಚ್ಚುವರಿ, 45 ಸಹಾಯಕ ಮತಗಟ್ಟೆ ಅಧಿಕಾರಿ, 8 ಹೆಚ್ಚುವರಿ, 45 ಮೈಕ್ರೋ ಅಬ್ಸರ್ವರ್ಸ್, 8 ಹೆಚ್ಚುವರಿ, 45 ಡಿ ದರ್ಜೆ ಗುಮಾಸ್ತರು, ಎಲ್ಲ ಮತಗಟ್ಟೆಗಳಿಗೂ ಪೊಲೀಸರು ಚುನಾವಣ ಪ್ರಕ್ರಿಯೆಗೆ ನೇಮಕವಾಗಿದ್ದಾರೆ. ಪುರಸಭೆಯಲ್ಲಿ 23 ಸದಸ್ಯರು, 5 ನಾಮನಿರ್ದೇಶಿತರು, ಶಾಸಕರ ಮತ ಚಲಾವಣೆ ಇದೆ.
ತಾಲೂಕಿನಲ್ಲಿ ಅತ್ಯಂತ ಕನಿಷ್ಠ ಮತದಾರರು ಇರುವ ಪಂಚಾಯತ್ ಎಂದರೆ ಯಡಮೊಗೆ ಪಂಚಾಯತ್. ಇಲ್ಲಿ 6 ಸದಸ್ಯರ ಪೈಕಿ ಇಬ್ಬರು ಜೈಲಿನಲ್ಲಿದ್ದು 4 ಮಂದಿಯಷ್ಟೇ ಮತದಾನ ಮಾಡಬೇಕಿದೆ.
ಎಲೆಕ್ಟ್ರಾನಿಕ್ ಮತಯಂತ್ರಗಳ ಬಳಕೆ ಅಲ್ಲದ ಕಾರಣ ಮತಪೆಟ್ಟಿಗೆಗಳು, ಬ್ಯಾಲೆಟ್ ಪೇಪರ್, ಅಂಕೆ ನಮೂದಿಸಲು ಪೆನ್ನು ಇತ್ಯಾದಿಗಳನ್ನು ಎಲ್ಲ ಮತಗಟ್ಟೆಗಳಿಗೆ ಕೊಂಡೊಯ್ಯಲಾಗಿದೆ. ಬೆಳಗ್ಗೆಯೇ ಎಲ್ಲ ಮತಗಟ್ಟೆಗಳನ್ನು ಚುನಾವಣ ಸಿಬಂದಿ ತಲುಪಿದ್ದಾರೆ.
ಕಾರ್ಕಳದಲ್ಲಿ ಮಸ್ಟರಿಂಗ್ ಕಾರ್ಯ :
ಕಾರ್ಕಳ: ವಿಧಾನ ಪರಿಷತ್ಗೆ ಡಿ. 10ರಂದು ನಡೆಯಲಿರುವ ಚುನಾವಣೆಗೆ ಸಂಬಂಧಿಸಿ ಗುರುವಾರ ಕಾರ್ಕಳ ತಾಲೂಕು ಕಚೇರಿಯಲ್ಲಿ ಮಸ್ಟರಿಂಗ್ ಕಾರ್ಯ ತಾಲೂಕು ಚುನಾವಣಾಧಿಕಾರಿ ಮೇಲುಸ್ತುವಾರಿ ಯಲ್ಲಿ ನಡೆಯಿತು.
ಭದ್ರತಾ ನಿರತ ಪೊಲೀಸರು, ಚುನಾವಣೆ ಕರ್ತವ್ಯ ನಿರ್ವಹಿಸಲಿರುವ ಅಧಿಕಾರಿಗಳು, ಸಹಾಯಕರು ಸಿದ್ಧತೆಗಳನ್ನು ಮಾಡಿಕೊಂಡು ಮತಯಂತ್ರ ಹಾಗೂ ಚುನಾವಣ ವಸ್ತುಗಳೊಂದಿಗೆ ಮತಗಟ್ಟೆಗೆ ತೆರಳಿದರು. ಕಾರ್ಕಳ ತಾಲೂಕಿನ 27 ಗ್ರಾಮ ಪಂಚಾಯತ್ಗಳ ಮತಗಟ್ಟೆ ಹಾಗೂ ಪುರಸಭೆ ಮತಗಟ್ಟೆ ಸೇರಿ 28 ಮತಗಟ್ಟೆಗಳು ತೆರೆದಿವೆ. ಈ ಹಿನ್ನೆಲೆಯಲ್ಲಿ ಬಿಗು ಪೊಲೀಸ್ ಬಂದೊಬಸ್ತ್ ನಡೆಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
ಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ
Kundapura ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ
MUST WATCH
ಹೊಸ ಸೇರ್ಪಡೆ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ