ಗಂಗೊಳ್ಳಿ: ಯಾಂತ್ರಿಕ ಮೀನುಗಾರಿಕೆಯೂ ಆರಂಭ
Team Udayavani, May 9, 2020, 5:46 AM IST
ಗಂಗೊಳ್ಳಿ: ಒಂದೂವರೆ ತಿಂಗಳಿಗೂ ಹೆಚ್ಚು ಕಾಲ ಲಾಕ್ಡೌನ್ನಿಂದಾಗಿ ಸ್ಥಗಿತಗೊಂಡಿದ್ದ ಯಾಂತ್ರೀಕೃತ ಮೀನುಗಾರಿಕೆ ಗಂಗೊಳ್ಳಿಯಲ್ಲಿ ಶುಕ್ರವಾರ ದಿಂದ ಆರಂಭಗೊಂಡಿದೆ.
ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಸೀಮಿತ ಬೋಟ್ಗಳಿಗೆ ಮಾತ್ರ ಅನುಮತಿ ನೀಡಲಾಗಿದೆ.ಗಂಗೊಳ್ಳಿಯಲ್ಲಿ ಶುಕ್ರವಾರ 2 ಪರ್ಸೀನ್ ಹಾಗೂ 1 ಮೀನುಗಾರಿಕಾ ಬೋಟ್ ಮಾತ್ರ ಮೀನುಗಾರಿಕೆಗೆ ತೆರಳಿದ್ದು, ಶನಿವಾರ ಅಥವಾ ರವಿವಾರ ಮರಳುವ ನಿರೀಕ್ಷೆಯಿದೆ. ಗಂಗೊಳ್ಳಿಯ ಮೀನುಗಾರಿಕೆ ಬಂದರಿನಲ್ಲಿ ದಿನಕ್ಕೆ 8 ಬೋಟ್ಗಳಿಂದ ಮಾತ್ರ ಮೀನು ಇಳಿಸಲು ಅನುಮತಿ ನೀಡಲಾಗಿದೆ.
ಎ.12 ರಿಂದ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆಗೆ ಅವಕಾಶ ಕಲ್ಪಿಸಲಾಗಿದ್ದರೂ, ಆಳ ಸಮುದ್ರ ಮೀನುಗಾರಿಕೆಗೆ ನಿರ್ಬಂಧ ವಿಧಿಸಲಾಗಿತ್ತು. ಆದರೆ ಈಗ ಉಡುಪಿ ಜಿಲ್ಲೆ ಹಸುರು ವಲಯದಲ್ಲಿರುವುದರಿಂದ ಯಾಂತ್ರಿಕ ಮೀನುಗಾರಿಕೆಗೂ ಅನುಮತಿ ನೀಡಲಾಗಿದೆ. ಇಲಾಖೆಯ ನಿರ್ದೇಶನದಂತೆ ಆಳ ಸಮುದ್ರ ಮೀನು ಗಾರಿಕೆಗೆ ಅವಕಾಶ ಸಿಕ್ಕಿದ್ದು, ಗಂಗೊಳ್ಳಿಯಲ್ಲಿ ಶುಕ್ರವಾರ ಮೀನುಗಾರಿಕೆಗೆ ತೆರಳಿದೆ. ಬಂದರಿನಲ್ಲಿ ಹರಾಜು ಅಥವಾ ಮಾರಾಟಕ್ಕೆ ಅವಕಾಶ ಇಲ್ಲವಾಗಿದ್ದು, ನೇರವಾಗಿ ವಾಹನಗಳಿಗೆ ತುಂಬಿಸಿ, ಸಾಗಿಸುವುದರಿಂದ ಮೀನಿಗೆ ಉತ್ತಮ ಬೆಲೆಯನ್ನು ನಿರೀಕ್ಷಿಸುವಂತಿಲ್ಲ ಎನ್ನುವುದಾಗಿ ಗಂಗೊಳ್ಳಿಯ ಪರ್ಸಿನ್ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ರಮೇಶ್ ಕುಂದರ್ ಹೇಳಿದ್ದಾರೆ.
ಇಲಾಖೆಯ ನಿರ್ದೇಶನ ಪಾಲನೆಗೆ ಸೂಚನೆ
ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬಂದರುಗಳಲ್ಲಿ ಏಕಕಾಲದಲ್ಲಿ ಮಲ್ಪೆಯಲ್ಲಿ 30, ಹಂಗಾರಕಟ್ಟೆ ಹಾಗೂ ಗಂಗೊಳ್ಳಿಯಲ್ಲಿ ತಲಾ 8 ಬೋಟ್ಗಳಿಂದ ಮೀನು ಇಳಿಸಲು ಅವಕಾಶ ಕಲ್ಪಿಸಲಾಗಿದೆ. ಈ ವೇಳೆ ಕಡಿಮೆ ಜನ ಸೇರುವಂತೆ, ಬಂದರಿನಲ್ಲಿ ಮಾರಾಟ, ಹರಾಜು ಮಾಡದೆ, ನೇರವಾಗಿ ಮೀನಿನ ವಾಹನಕ್ಕೆ ತುಂಬಿಸಿ, ಸಾಗಿಸಲು ಅನುಮತಿ ನೀಡಲಾಗಿದ್ದು, ಮೀನುಗಾರರು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರ ಜತೆಗೆ ಇಲಾಖೆಯ ನಿರ್ದೇಶನಗಳನ್ನು ಪಾಲಿಸಲು ಸೂಚಿಸಲಾಗಿದೆ.
-ಗಣೇಶ್ ಕೆ.ಕೆ.,
ಉಪ ನಿರ್ದೇಶಕರು,
ಮೀನುಗಾರಿಕೆ ಇಲಾಖೆ, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು