ರೈಲ್ವೇ ಮೇಲ್ಸೇತುವೆಯಲ್ಲಿ ಪೈಪ್ ಅಳವಡಿಕೆ
ಆಕ್ಷೇಪ ಸುಗಮ ವಾಹನ ಸಂಚಾರಕ್ಕೆ ಮತ್ತಷ್ಟು ತೊಡಕು
Team Udayavani, Apr 7, 2022, 10:41 AM IST
ಕುಂದಾಪುರ: ಬಹುತೇಕ ಎಲ್ಲ ಕಡೆಗಳಲ್ಲಿ ರೈಲ್ವೇ ಮೇಲ್ಸೇತುವೆ ಕಿರಿದಾಗಿದ್ದು, ಎರಡು ಘನ ವಾಹನಗಳು ಸಂಚರಿಸಲು ಆಗದಷ್ಟು ಕಿರಿದಾಗಿರುತ್ತವೆ. ಅದರಲ್ಲೂ ಪೈಪ್ಗಳನ್ನು ಅಳವಡಿಸಿದರೆ, ಸುಗಮ ವಾಹನ ಸಂಚಾರಕ್ಕೆ ಮತ್ತಷ್ಟು ತೊಡಕಾಗಲಿವೆ. ಇಂತದ್ದೆ ಸಮಸ್ಯೆ ಈಗ ತಲ್ಲೂರು ಸಮೀಪ ಹಾಗೂ ಕಾಳಾವರ ಸಮೀಪದ ರೈಲ್ವೇ ಮೇಲ್ಸೇತುವೆಯಲ್ಲಿ ಕಾಣಿಸಿಕೊಂಡಿದ್ದು, ಇದೀಗ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ತಲ್ಲುರು – ನೇರಳಕಟ್ಟೆ ಮುಖ್ಯ ರಸ್ತೆಯ ಹಟ್ಟಿಯಂಗಡಿಗಿಂತ ತುಸು ಹಿಂದಿರುವ ರೈಲ್ವೇ ಮೇಲ್ಸೇತುವೆಯಲ್ಲಿ ಖಾಸಗಿ ಒಡೆತನದ ನೆಟ್ವರ್ಕ್ ಸಂಪರ್ಕಿಸುವ ಪೈಪ್ಲೈನ್ಗಳನ್ನು ಅಳವಡಿಸಲಾಗಿದೆ. ಇನ್ನು ಕೋಟೇಶ್ವರ – ಹಾಲಾಡಿ ರಸ್ತೆಯ ಕಾಳಾವರ ಸಮೀಪದ ಸಳ್ವಾಡಿ ಬಳಿಯ ರೈಲ್ವೇ ಮೇಲ್ಸೇತುವೆಯಲ್ಲಿಯೂ ಇದೇ ರೀತಿ ಪೈಪ್ ಅಳವಡಿಸಲಾಗಿದೆ.
ಮೊದಲೇ ರೈಲ್ವೇ ಮೇಲ್ಸೇತುವೆ ಕಿರಿದಾಗಿದ್ದು, ಅದರಲ್ಲಿ ಮತ್ತೆ ಇಂತಹ ಪೈಪ್ಗಳನ್ನು ಹಾಕಿದರೆ ಹೇಗೆ ಎನ್ನುವ ಪ್ರಶ್ನೆ ಸಾರ್ವಜನಿಕರದ್ದಾಗಿದೆ. ಪೈಪ್ ಹಾಕಿದ್ದಕ್ಕೆ ಆಕ್ಷೇಪವಲ್ಲ. ಆದರೆ ರಸ್ತೆ ಕಡೆಯ ಮೇಲ್ಸೇತುವೆಯಲ್ಲಿ ಪೈಪ್ ಹಾಕುವ ಬದಲು, ಇದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಮಾಡಬಹುದಿತ್ತು ಎನ್ನುವ ಅಭಿಪ್ರಾಯ ವಾಹನ ಸವಾರರು ಹಾಗೂ ಈ ಭಾಗದ ನಾಗರಿಕರದ್ದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ