ಕೊಲ್ಲೂರು: ಭಾರೀ ಸಂಖ್ಯೆಯ ಭಕ್ತ ಜನತೆ
Team Udayavani, Sep 14, 2019, 1:20 AM IST
ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಲ್ಲಿ ಎರಡು ದಿನಗಳಿಂದ ವಿಪರೀತ ಭಕ್ತ ಸಂದಣಿ ಕಂಡುಬರುತ್ತಿದೆ.
ಓಣಂ ಮತ್ತು ಆ ಪ್ರಯುಕ್ತ ರಜೆಯ ಹಿನ್ನೆಲೆಯಲ್ಲಿ ಕೇರಳದಿಂದ ಬರುವ ಭಕ್ತರ ಸಂಖ್ಯೆ ಅಧಿಕವಾಗಿದ್ದು, ಶ್ರೀ ದೇವಿಯ ದರ್ಶನಕ್ಕೆ ಸರತಿ ಸಾಲಿನಲ್ಲಿ ಕೆಲವು ಗಂಟೆ ಕಾಲ ಕಾಯಬೇಕಾಯಿತು.
ಸುರಿಯುತ್ತಿರುವ ಮಳೆಯ ನಡುವೆಯೂ ನಾನಾ ಕಡೆಗಳಿಂದ ಇಲ್ಲಿಗೆ ಭಕ್ತರು ಆಗಮಿಸಿದ್ದು, ಜನಸ್ತೋಮ ನಿಯಂತ್ರಣಕ್ಕೆ ದೇಗುಲದ ಭದ್ರತಾ ಸಿಬಂದಿ ಹರಸಾಹಸ ಪಡಬೇಕಾಯಿತು. ದೇಗುಲದಲ್ಲಿ ಚಂಡಿಕಾ ಹೋಮ ಸಹಿತ ವಿದ್ಯಾರಂಭಕ್ಕೆ ಭಕ್ತರು ಆಗಮಿಸಿದ್ದರಿಂದ ನೂಕುನುಗ್ಗಲು ಉಂಟಾಯಿತು. ಶುಕ್ರವಾರ 15 ಸಾವಿರಕ್ಕೂ ಮಿಕ್ಕಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದರು.
ವಸತಿಗೃಹಗಳು ಭರ್ತಿ
ದೇಗುಲದ ವಸತಿಗೃಹ ಮತ್ತು ಖಾಸಗಿ ವಸತಿಗೃಹಗಳೂ ತುಂಬಿದ್ದು, ಆಗಮಿಸಿದ ಭಕ್ತರು ಕುಂದಾಪುರ, ಹೆಮ್ಮಾಡಿ ಪರಿಸರದಲ್ಲಿ ತಂಗಬೇಕಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ
Kundapur: ಬೈಕ್ ಢಿಕ್ಕಿ; ಸ್ಕೂಟರ್ ಸವಾರೆಗೆ ಗಾಯ
Congress;ಪ್ರತಾಪ್ಚಂದ್ರ ಶೆಟ್ಟಿ-ಜೆ.ಪಿ.ಹೆಗ್ಡೆ ಭೇಟಿ: ಕಾರ್ಯತಂತ್ರದ ಸಮಾಲೋಚನೆ
ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ
ಕಾಶ್ಮೀರದಲ್ಲಿ ಗುಂಡು ಹಾರಿಸಿ ಬಿಹಾರ ಕಾರ್ಮಿಕನ ಹತ್ಯೆ