ಕೋಟಿಲಿಂಗೇಶ್ವರ ದೇಗುಲ ಕೊಡಿ ಹಬ್ಬ: ಕೋವಿಡ್-19ರ ನಿಯಮ ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ
Team Udayavani, Nov 28, 2020, 8:30 PM IST
ಕೊಡಿ ಹಬ್ಬಕ್ಕೆ ಅಲಂಕಾರಗೊಂಡ ಕೋಟಿಲಿಂಗೇಶ್ವರ ದೇಗುಲ.
ಕೋಟೇಶ್ವರ: ಇಲ್ಲಿನ ಶ್ರೀ ಕೋಟಿಲಿಂಗೇಶ್ವರ ದೇಗುಲದ ಕೊಡಿ ಹಬ್ಬ ನ. 30ರಂದು ನಡೆಯಲಿದೆ. ಈ ಬಾರಿ ಕೋವಿಡ್-19ರ ಕಾನೂನಿನಂತೆ ಸರಳ ಉತ್ಸವ ಆಚರಣೆಗೆ ಅವಕಾಶ ಕಲ್ಪಿಸಲಾಗಿದೆ, ಹಾಗಾಗಿ ಉತ್ಸವಕ್ಕೆ ಆಗಮಿಸುವ ಭಕ್ತರಿಗೆ ಹಲವು ನಿರ್ಬಂಧಗಳನ್ನು ಹೇರಲಾಗಿದೆ.
ಹಬ್ಬಕ್ಕೆ ಮಾರ್ಗ ಸೂಚಿ
65 ವರ್ಷಕ್ಕೆ ಮೇಲ್ಪಟ್ಟವರು ಹಾಗೂ 10 ವರ್ಷದ ಒಳಗಿನ ಮಕ್ಕಳು ಅಲ್ಲದೇ ಗರ್ಭಿಣಿಯರು ಮನೆಯಲ್ಲೇ ಕುಳಿತು
ದೃಶ್ಯ ಮಾಧ್ಯಮದ ಮೂಲಕ ಬಿತ್ತರಿಸುವ ಕೊಡಿ ಹಬ್ಬದ ನೇರ ಪ್ರಸಾರ ವೀಕ್ಷಿಸ ಬಹುದು. ಭಕ್ತರು ಹಣ್ಣು ಕಾಯಿಯನ್ನು ತಂದು ದೇಗುಲದಲ್ಲಿ ಮಾತ್ರ ಸಮರ್ಪಿಸಬಹುದಾಗಿದ್ದು, ರಥೋತ್ಸವದಲ್ಲಿ ರಥಕ್ಕೆ ಸಲ್ಲಿಸುವ ಹಣ್ಣುಕಾಯಿ ಸೇವೆಗೆ ಅವಕಾಶವಿರುವು ದಿಲ್ಲ, ದೇಗುಲವನ್ನು ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಂಡು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಒಳ ಪ್ರವೇಶಿಸಬೇಕು.
ಜಾತ್ರೆಯ ಅನ್ನಸಂತರ್ಪಣೆ ರದ್ದುಗೊಳಿಸಲಾಗಿದೆ. ಕೋಟಿತೀರ್ಥ ಸರೋವರದಲ್ಲಿ ತೀರ್ಥಸ್ನಾನ, ಸಂಪ್ರೋಕ್ಷಣೆ ಇತ್ಯಾದಿಗಳಿಗೆ ಅವಕಾಶವಿರುವುದಿಲ್ಲ. ರಥಾರೋಹಣ, ರಥಾವರೋಹಣಕ್ಕೆ ಅಗತ್ಯವಿರುವಷ್ಟು ಮಂದಿಗೆ ಸೀಮಿತಗೊಳಿಸಲಾಗಿದ್ದು ಪಾಸ್ ಹೊಂದಿದ ಭಕ್ತರು ಮಾತ್ರ ಭಾಗವಹಿಸಲು ಅವಕಾಶವಿದೆ, ದೇವರ ದರ್ಶನಕ್ಕೆ ಆಗಮಿಸುವ ಭಕ್ತರು ಪೂರ್ವ ದಿಕ್ಕಿನ ಮಹಾದ್ವಾರದಿಂದ ಪ್ರವೇಶಿಸಿ ಮುಖ್ಯ ಪ್ರವೇಶ ದ್ವಾರದಲ್ಲಿ ಇರಿಸಲಾದ ಸ್ಯಾನಿಟೈಸರ್ ಬಳಸಿ ಬಲ ಭಾಗದಲ್ಲಿರುವ ಸೇವಾ ರಶೀದಿ ಕೌಂಟರ್ ಮತ್ತು ಹಣ್ಣು ಕಾಯಿ ಮಾಡುವ ಸ್ಥಳದಲ್ಲಿ ಸೇವೆ ಸಲ್ಲಿಸಿ ಆಗ್ನೇಯ ಮೂಲೆಯಲ್ಲಿರುವ ದ್ವಾರದ ಮೂಲಕ ದೇಗುಲದ ಒಳಸುತ್ತು ಪ್ರವೇಶಿಸಿ ದೇವರ ದರ್ಶನ ಪಡೆದು ಪೂರ್ವ ದಿಕ್ಕಿನ ಬಾಗಿಲಿನಿಂದ ಹೊರಹೋಗಲು ವ್ಯವಸ್ಥೆ ಮಾಡಲಾಗಿದೆ. ಸರಕಾರದ ಆದೇಶ ಪ್ರಕಾರ ಸರಳವಾಗಿ ರಥೋತ್ಸವ ನಡೆಯಲಿದೆ ಎಂದು ದೇಗುಲದ ಆಡಳಿತ ಸಮಿತಿಯವರು ತಿಳಿಸಿದ್ದಾರೆ.
ದೇಗುಲ ಅಲಂಕಾರ
ದೇಗುಲದ ಹೊರ ಆವರಣ ಸುಂದರವಾಗಿ ಅಲಂಕಾರಗೊಂಡಿದ್ದು, ಒಳಪೌಳಿ ಹೂವಿನಿಂದ ಅಲಂಕೃತಗೊಂಡಿದೆ. ರಥದ ಅಲಂಕಾರ ಭರದಿಂದ ಸಾಗಿದೆ. ರಥಬೀದಿ ಹಾಗೂ ಪೇಟೆಯಲ್ಲಿ ದೀಪಾಲಂಕಾರಗೊಳಿಸ ಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಸಾಂಸ್ಕೃತಿಕ ಹಾಗೂ
ಇನ್ನಿತರ ಕಾರ್ಯಕ್ರಮ ರದ್ದುಗೊಳಿಸಲಾ ಗಿದೆ. ಅಂಗಡಿ ಮುಂಗಟ್ಟುಗಳಿಗೆ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಪೇಟೆಯಲ್ಲಿ ಹಬ್ಬದ ಕಳೆ ಒಂದಿಷ್ಟು ಕುಂದಿದೆ. ಹಬ್ಬದ ಪೂರ್ವಭಾವಿಯಾಗಿ ತೆಂಕು ಹಾಗೂ ಬಡಗು ಕಟ್ಟೆ ಪೂಜೆಗಳು ದೇಗುಲದ ತಂತ್ರಿ ಪ್ರಸನ್ನ ಕುಮಾರ್ ಐತಾಳ ಅವರ ನೇತೃತ್ವದಲ್ಲಿ ಸರಳವಾಗಿ ನಡೆದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ