ಕೊರವಡಿ ಕ್ರಾಸ್; ಡಿವೈಡರ್ ಏರಿ ನಿಂತ ಕೆಎಸ್ಆರ್ಟಿಸಿ ಬಸ್
Team Udayavani, Aug 12, 2019, 10:16 PM IST
ತೆಕ್ಕಟ್ಟೆ : ಇಲ್ಲಿನ ಕುಂಭಾಸಿ ಕೊರವಡಿ ಕ್ರಾಸ್ ರಾ.ಹೆ.66ರಲ್ಲಿ ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ಸಿನ ಚಕ್ರ ಹೆದ್ದಾರಿಯಲ್ಲಿ ಸೃಷ್ಟಿಯಾಗಿರುವ ಗುಂಡಿಗೆ ಬಿದ್ದು ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್ ಏರಿ ನಿಂತ ಘಟನೆ ಸೋಮವಾರ ರಾತ್ರಿ ಗಂಟೆ 8.30ರ ಸುಮಾರಿಗೆ ಸಂಭವಿಸಿದೆ.
ಕುಂದಾಪುರದಿಂದ ಮೈಸೂರು ಕಡೆಗೆ ಸಾಗುತ್ತಿದ್ದ ಕೆಎಸ್ಆರ್ಟಿಸಿ ಬಸ್ಸಿನ ಚಕ್ರ ರಾ.ಹೆ.66ರಲ್ಲಿರುವ ಗುಂಡಿಗೆ ಬಿದ್ದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಬಸ್ ಡಿವೈಡರ್ ಏರಿ ನಿಂತಿದೆ.
ಪರಿಣಾಮವಾಗಿ ಕೋಟ ಹಾಗೂ ಕುಂದಾಪುರ ಪೊಲೀಸ್ಠಾಣಾ ವ್ಯಾಪ್ತಿಯ ಗಡಿಭಾಗದಲ್ಲಿ ಅಳವಡಿಸಲಾದ ನಾಮಫಲಕ ಧರೆಶಾಯಿಯಾಗಿದೆ.
ಹೆದ್ದಾರಿ ಗುತ್ತಿಗೆ ಕಂಪೆನಿ ವಿರುದ್ಧ ಪ್ರತಿಭಟನೆ
ಈ ಸಂದರ್ಭ ರಾ.ಹೆ.66ರ ಗುತ್ತಿಗೆ ಕಂಪೆನಿಯ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಘಟನೆಗೆ ಕಾರಣವಾದ ಸುಮಾರು 2 ಅಡಿ ಆಳದ ಅಪಾಯಕಾರಿ ಗುಂಡಿಯಲ್ಲಿ ತಮ್ಮ ದ್ವಿಚಕ್ರವಾಹನವನ್ನು ಇರಿಸಿ ಅಣುಕು ಪ್ರದರ್ಶನಗೈದು ತೀವ್ರವಾಗಿ ಪ್ರತಿಭಟಿಸಿದ ಘಟನೆ ಕೂಡಾ ನಡೆಯಿತು.