ಕುಂದಾಪುರ ಸರಕಾರಿ ಆಸ್ಪತ್ರೆ: ರಾತ್ರಿಯೂ ಡಯಾಲಿಸಿಸ್‌

 ಕೈ ಕೊಟ್ಟ ನಿರ್ವಹಣ ಸಂಸ್ಥೆ ; ಸಿಬಂದಿಗೆ ಬರದ ವೇತನ ; ಬದಲಿ ವ್ಯವಸ್ಥೆ

Team Udayavani, Nov 23, 2021, 4:56 AM IST

ಕುಂದಾಪುರ ಸರಕಾರಿ ಆಸ್ಪತ್ರೆ: ರಾತ್ರಿಯೂ ಡಯಾಲಿಸಿಸ್‌

ವಿಶೇಷ ವರದಿ-ಕುಂದಾಪುರ: ಹಾಳಾದ ಡಯಾಲಿಸಿಸ್‌ ಯಂತ್ರಗಳು, ನಿರ್ವಹಣ ಸಂಸ್ಥೆಯ ಸಿಬಂದಿ ರಾಜೀನಾಮೆ, ಇರುವ ಸಿಬಂದಿಗೆ ಬರದ ವೇತನದಿಂದಾಗಿ ಇಲ್ಲಿನ ಸರಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಹಗಲು, ರಾತ್ರಿ ಡಯಾಲಿಸಿಸ್‌ ಮಾಡಲಾಗುತ್ತಿದೆ. ವಾರದಲ್ಲಿ ಮೂರು ದಿನ ಮಧ್ಯರಾತ್ರಿ ವೇಳೆ ರೋಗಿಗಳು ಚಿಕಿತ್ಸೆ ಮುಗಿಸಿ ಮನೆ ತಲುಪುವ ಕುರಿತು ಚಿಂತಿಸಬೇಕಿದೆ.

ನಿರ್ವಹಣೆ ಖಾಸಗಿ ಸಂಸ್ಥೆಗೆ
2015 ಮಾರ್ಚ್‌ನಿಂದ ಸರಕಾರ ರಾಜ್ಯದ ಎಲ್ಲೆಡೆ 23 ಜಿಲ್ಲೆಗಳ 122 ಸರಕಾರಿ ಆಸ್ಪತ್ರೆಗಳ ಡಯಾಲಿಸಿಸ್‌ ಘಟಕ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗೆ ಒಪ್ಪಿಸಿತು. ಆ ಸಂಸ್ಥೆ ಒಬ್ಬ ಸೂಪರ್‌ ಸ್ಪೆಷಲಿಸ್ಟ್‌, ಒಬ್ಬರು ವೈದ್ಯರನ್ನು ಪ್ರತೀ ಕೇಂದ್ರಕ್ಕೆ ಒದಗಿಸಬೇಕಿತ್ತು. ಪ್ರತೀ ರೋಗಿಗೆ 2 ಚುಚ್ಚುಮದ್ದನ್ನು ಸಂಸ್ಥೆಯೇ ನೀಡಬೇಕು. ಡಯಾಲಿಸಿಸ್‌ ಯಂತ್ರಗಳ ತಂತ್ರಜ್ಞ 2, ನರ್ಸ್‌ 3, ಗ್ರೂಪ್‌ ಡಿ 3 ಸಿಬಂದಿಯನ್ನು ನೀಡಬೇಕು. ಇದಿಷ್ಟಕ್ಕೆ ಸರಕಾರ ಪಾವತಿ ಮಾಡುವುದು ಎಂದಾಗಿತ್ತು.

ಆರಂಭದಲ್ಲೇ ಎಡವಿತು
ಸೂಪರ್‌ ಸ್ಪೆಷಲಿಸ್ಟ್‌ಗಳನ್ನು ನೀಡಲಿಲ್ಲ, ವೈದ್ಯರನ್ನು ಒದಗಿಸಲಿಲ್ಲ, ಚುಚ್ಚುಮದ್ದು ಕೊಡಲಿಲ್ಲ. ಇವೆಲ್ಲ ಸರಕಾರಿ ಆಸ್ಪತ್ರೆಯಿಂದಲೇ ನೀಡಲ್ಪಡುತ್ತಿತ್ತು. ಆರೋಗ್ಯ ರಕ್ಷಾ ನಿಧಿಯಿಂದ ಖರ್ಚಾಗುತ್ತಿತ್ತು. ಕೊನೆಗೆ ಸರಕಾರ ಈ ಮೊತ್ತ ಕಳೆದು ಬಾಕಿ ಮೊತ್ತ ಸಂಸ್ಥೆಗೆ ನೀಡಲಾರಂಭಿಸಿತು. 5 ಯಂತ್ರಗಳಿದ್ದುದು 2 ಹಾಳಾಗಿ 3ಕ್ಕೆ ಇಳಿಯಿತು. ಯಂತ್ರಗಳನ್ನು ನೀಡಿದ ಸಂಸ್ಥೆ ನಿರ್ವಹಣೆ ಮಾಡಲಿಲ್ಲ, ದುರಸ್ತಿ ಮಾಡಲಿಲ್ಲ. ಇದಕ್ಕೆ ಸಂಸ್ಥೆ ಹಾಗೂ ಕಂಪೆನಿ ನಡುವಿನ ವ್ಯವಹಾರ ಕಾರಣ ಎನ್ನಲಾಗಿದೆ. ಘಟಕದಲ್ಲಿ ಡಯಾ
ಲಿಸಿಸ್‌ಗೆ ಬೇಕಾಗುವ ರಾಸಾಯನಿಕ ವಸ್ತುಗಳು ಮತ್ತು ಫಿಲ್ಟರ್‌ಗಳು ಖಾಲಿಯಾಗಿ ಸಂಸ್ಥೆ ಪೂರೈಸುವುದನ್ನು ನಿಲ್ಲಿಸಿದೆ.

ಸಿಬಂದಿ ರಾಜೀನಾಮೆ
2021 ಮೇ ತಿಂಗಳಿನಿಂದ ಸಿಬಂದಿಗೆ ವೇತನ ಪಾವತಿಯಾಗದ ಕಾರಣ ಇಲ್ಲಿನ ಆಸ್ಪತ್ರೆಯಲ್ಲಿ ಅಕ್ಟೋಬರ್‌ನಲ್ಲಿ ಇಬ್ಬರು ಸಿಬಂದಿ ರಾಜೀನಾಮೆ ನೀಡಿದರು. ನವೆಂಬರ್‌ನಲ್ಲಿ ಇನ್ನೊಬ್ಬರು ರಾಜೀನಾಮೆ ನೀಡಿದ್ದಾರೆ. ಡಿಸೆಂಬರ್‌ನಿಂದ ಖಾಸಗಿ ನಿರ್ವಹಣೆ ಮುಕ್ತ ಡಯಾಲಿಸಿಸ್‌ ಕೇಂದ್ರ ಆಗಲಿದೆ. ಎಂಬಲ್ಲಿಗೆ 2015ಕ್ಕಿಂತ ಮೊದಲೇ ಇದ್ದ ಸರಕಾರಿ ವ್ಯವಸ್ಥೆ§ಯೇ ಜಾರಿಗೆ ಬರಲಿದೆ. ಕೇವಲ ಖಾಸಗಿಯವರಿಗೆ ಹಣ ಮಾಡಲು ಈ ನಿರ್ವಹಣ ಯೋಜನೆ ಮಾಡಿದಂತಾಗಿದೆ ಎನ್ನುವುದು ಸಾರ್ವಜನಿಕರ ಆರೋಪ.

ಇದನ್ನೂ ಓದಿ:ಶ್ರೀರಂಗಪಟ್ಟಣ : ಜನರನ್ನು ಭಯಭೀತರನ್ನಾಗಿಸಿದ್ದ ಬೃಹದಾಕಾರದ ಮೊಸಳೆ ಬಲೆಗೆ

ಬದಲಿ ವ್ಯವಸ್ಥೆ
ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಬದಲಿ ವ್ಯವಸ್ಥೆ ಮೂಲಕ ಡಯಾಲಿಸಿಸ್‌ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಖಾಸಗಿ ನಿರ್ವಹಣ ಸಂಸ್ಥೆ ಸಿಬಂದಿ ರಾಜೀನಾಮೆ ನೀಡುತ್ತಿದ್ದಂತೆಯೇ ಏಜೆನ್ಸಿ ಮೂಲಕ ಸಿಬಂದಿ ಪಡೆದು ಅವರಿಗೆ ತರಬೇತಿ ಕೊಡಿಸಲಾಗಿದೆ. 3 ಗ್ರೂಪ್‌ ಡಿ, 3 ನರ್ಸ್‌, 2 ತಂತ್ರಜ್ಞರು ಏಜೆನ್ಸಿ ಸರಕಾರಿ ಆಸ್ಪತ್ರೆಯೇ ನಿರ್ವಹಣ ಸಂಸ್ಥೆಯ ಹಂಗು ತೊರೆದು ನೇಮಿಸಿದೆ. ಈಗ ಖಾಲಿಯಾಗುವ ಹುದ್ದೆಗೂ ಇದೇ ಮಾದರಿ ಅನುಸರಿಸಲಾಗುತ್ತಿದೆ. ಬಾಕಿಯಾದ ವೇತನ ಪಾವತಿಗೆ ಸರಕಾರಕ್ಕೆ ಬರೆಯಲಾಗಿದೆ. ಮೂರೇ ಯಂತ್ರಗಳು ಇರುವ ಕಾರಣ ಮೂರು ಪಾಳಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಯಂತ್ರಕ್ಕೆ ವಿಶ್ರಾಂತಿಯೂ ಬೇಕಾದ ಕಾರಣ ಹಗಲು ಸಾಲದೇ ರಾತ್ರಿಯೂ ಚಿಕಿತ್ಸೆ ನೀಡಬೇಕಿದೆ. ರಾತ್ರಿ ವೇಳೆ ಚಿಕಿತ್ಸೆ ಪಡೆದು ಮನೆಗೆ ಮರಳುವವರಿಗೆ ಆತಂಕ ಉಂಟಾಗಿದೆ. ಅನಿವಾರ್ಯ ಆದವರಿಗೆ ಆಸ್ಪತ್ರೆಯಲ್ಲೇ ಉಳಿದುಕೊಳ್ಳಲು ಅನುಮತಿ ನೀಡಲಾಗಿದೆ.

ದುರಸ್ತಿ
5 ಯಂತ್ರಗಳ ಪೈಕಿ 2 ಹಾಳಾಗಿದೆ. ಹಾಳಾದ ಯಂತ್ರಗಳ ದುರಸ್ತಿ ಸರಕಾರಿ ವೆಚ್ಚದಲ್ಲಿ ಮಾಡಿಸುವಂತಿಲ್ಲ. ಏಕೆಂದರೆ ಅದು ಸಂಸ್ಥೆಯ ಯಂತ್ರಗಳು. ಆ ಸಂಸ್ಥೆಯ ನಿರ್ವಹಣೆ ಹೊಣೆ ಕಳಚಿಕೊಂಡಾಗ ಈ ಯಂತ್ರಗಳನ್ನೂ ಮರಳಿಸಬೇಕಾಗುತ್ತದೆಯೋ ಎಂಬ ಸಂದಿಗ್ಧ ಒದಗಿದೆ. ಹಾಗೊಂದು ವೇಳೆ ಪರಿಸ್ಥಿತಿ ಬಂದಲ್ಲಿ ರಾಜ್ಯಾದ್ಯಂತ ಡಯಾಲಿಸಿಸ್‌ ರೋಗಿಗಳ ಹಾಹಾಕಾರ ಉಂಟಾಗಲಿದೆ. ಒಂದೊಮ್ಮೆ ದಾನಿಗಳು ಯಂತ್ರ ನೀಡಿದರೂ ಅದರ ಸಿಬಂದಿ, ನಿರ್ವಹಣೆ ಹೊಣೆ ಸರಕಾರಿ ಆಸ್ಪತ್ರೆಯೇ ಮಾಡಬೇಕಿದೆ.

ಚಿಕಿತ್ಸೆ
ಒಟ್ಟು 38 ಜನ ಕುಂದಾಪುರದಲ್ಲಿ, ರಾಜ್ಯದಲ್ಲಿ 3,500 ಜನ ಡಯಾಲಿಸಿಸ್‌ನ್ನು ಸರಕಾರಿ ಆಸ್ಪತ್ರೆ ಮೂಲಕ ಪಡೆಯುತ್ತಿದ್ದಾರೆ. ಕಿಡ್ನಿ ಸಂಬಂಧಿ ಕಾಯಿಲೆಗೆ ಒಮ್ಮೆ ಡಯಾಲಿಸಿಸ್‌ ಪಡೆದರೆ ಆಜೀವಪರ್ಯಂತ, ವಾರದಲ್ಲಿ 2 ದಿನ ಡಯಾಲಿಸಿಸ್‌ ಪಡೆಯಬೇಕಾಗುತ್ತದೆ. ಹೊಸ ರೋಗಿಗಳ ನೋಂದಣಿಯಾಗಬೇಕಾದರೆ ಹೊಸಯಂತ್ರಗಳು ಹಾಗೂ ಅವುಗಳ ನಿಯಂತ್ರಣಕ್ಕೆ ಸಿಬಂದಿ ಬೇಕಾಗುತ್ತದೆ.

ಸರಕಾರದಿಂದ ಪಾವತಿ
ಖಾಸಗಿ ಸಂಸ್ಥೆ ಸಿಬಂದಿಗೆ ವೇತನ ನೀಡದ ಕಾರಣ ಆಗಸ್ಟ್‌ನಲ್ಲಿ ಸರಕಾರವೇ ಮೇಯಿಂದ ಆಗಸ್ಟ್‌ವರೆಗಿನ ವೇತನ ಬಿಡುಗಡೆ ಮಾಡಿದೆ. ಸೆಪ್ಟಂಬರ್‌, ಅಕ್ಟೋಬರ್‌ನಲ್ಲಿ ನೀಡಬೇಕಿದೆ.

ಬದಲಿ ವ್ಯವಸ್ಥೆ
ರೋಗಿಗಳಿಗೆ ತೊಂದರೆಯಾಗದಂತೆ ಬದಲಿ ವ್ಯವಸ್ಥೆ ಮಾಡಲಾಗಿದೆ. ಏಜೆನ್ಸಿ ಮೂಲಕ ಸಿಬಂದಿ ನೇಮಿಸಿಕೊಳ್ಳಲಾಗಿದೆ. ಅಗತ್ಯಕ್ಕಿರಲಿ ಎಂದು ನಮ್ಮ ಸಿಬಂದಿಗೂ ತರಬೇತಿ ಕೊಡಿಸಲಾಗುತ್ತಿದೆ. ಯಂತ್ರಗಳ ಕೊರತೆ ಇರುವ ಕಾರಣ ಮೂರು ಪಾಳಿಯಲ್ಲಿ ರಾತ್ರಿವರೆಗೆ ಚಿಕಿತ್ಸೆ ಕೊಡುತ್ತಿರುವುದು ಹೌದು. ರಾತ್ರಿ ಚಿಕಿತ್ಸೆ ಪಡೆದವರು ಆಸ್ಪತ್ರೆಯಲ್ಲೇ ಉಳಿದುಕೊಳ್ಳಲು ಅನುಮತಿ ನೀಡಲಾಗಿದೆ.
 - ಡಾ| ರಾಬರ್ಟ್‌ ರೆಬೆಲ್ಲೋ
ಶಸ್ತ್ರಚಿಕಿತ್ಸಕ ಆಡಳಿತಾಧಿಕಾರಿ, ಉಪವಿಭಾಗ ಆಸ್ಪತ್ರೆ ಕುಂದಾಪುರ

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್- ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.