ಕುಂದಾಪುರ: ಹೈವೆ ಕಾಮಗಾರಿ ನಿರ್ಲಕ್ಷಿಸಿದ ಹೆದ್ದಾರಿ ಪ್ರಾಧಿಕಾರ!

 ಬಾಕಿ ಉಳಿದ ಕಾಮಗಾರಿಗೆ ಹತ್ತು ತಿಂಗಳಾದರೂ ಗಮನ ಹರಿಸಿಲ್ಲ

Team Udayavani, Jan 19, 2022, 7:11 PM IST

ಕುಂದಾಪುರ: ಹೈವೆ ಕಾಮಗಾರಿ ನಿರ್ಲಕ್ಷಿಸಿದ ಹೆದ್ದಾರಿ ಪ್ರಾಧಿಕಾರ!

ಕುಂದಾಪುರ: ನಗರದಲ್ಲಿ ನವಯುಗ ಕಂಪೆನಿಯವರು ನಡೆಸುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮುಗಿದು ವಾಹನಗಳ ಓಡಾಟ 10 ತಿಂಗಳಿನಿಂದ ನಡೆಯುತ್ತಿದೆ. ಆದರೆ ಕಾಮಗಾರಿಯಲ್ಲಿ ಸಾಕಷ್ಟು ನ್ಯೂನತೆಗಳಿವೆ. ಈ ಬಗ್ಗೆ ಪುರಸಭೆ ಸಾಕಷ್ಟು ನಿರ್ಣಯಗಳನ್ನು ಮಾಡಿದರೂ, ಕೇಂದ್ರ ಸಚಿವರು ಹೇಳಿದರೂ, ಜಿಲ್ಲಾಧಿಕಾರಿ ಪತ್ರ ಬರೆದರೂ ರಾಷ್ಟ್ರೀಯ ಹೆದ್ದಾರಿ ಇಲಾಖೆ ಸ್ಪಂದಿಸಿಲ್ಲ. ಎಸಿ ನೇತೃತ್ವದಲ್ಲಿ ಸಮಿತಿ ರಚಿಸಿ ಸಭೆಗೆ ಬನ್ನಿ ಎಂದರೂ ಬರುತ್ತಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ದಿವ್ಯ ನಿರ್ಲಕ್ಷ್ಯದ ಕುರಿತು ಕುಂದಾಪುರ ಜನತೆ ರೋಸಿ ಹೋಗಿದ್ದಾರೆ.

ಆಮೆಗತಿಯ ಕಾಮಗಾರಿ
ನಿರಂತರ 10 ವರ್ಷಗಳ ಕಾಲ ಕಾಮಗಾರಿ ನಡೆಸಿ ಫ್ಲೈಒವರ್‌ ಕಳೆದ ವರ್ಷಕ್ಕೆ ಮುಗಿದಿದೆ. ಅದಕ್ಕೂ ಮುನ್ನ
ಕೇಸು, ಗಲಾಟೆ, ಪ್ರತಿಭಟನೆ, ನೋಟಿಸ್‌ ಎಂದು ಸಾಕಷ್ಟು ಮುಜುಗರಕ್ಕೊಳಗಾದರೂ ಗುತ್ತಿಗೆದಾರ ಸಂಸ್ಥೆ ಬುದ್ಧಿ
ಕಲಿತಂತಿಲ್ಲ. ಬಾಕಿ ಉಳಿದ ಕಾಮಗಾರಿಗಳ ಕಡೆಗೆ ತಿಂಗಳು ಹತ್ತಾದರೂ ಗಮನ ಹರಿಸಿಲ್ಲ. ಫ್ಲೈಒವರ್‌ ಅಡಿ ವರ್ಷಾನುಗಟ್ಟಲೆಯಿಂದ ಪಾಳುಬಿದ್ದಿದ್ದ ವಸ್ತು, ತ್ಯಾಜ್ಯವನ್ನು ಸಹಾಯಕ ಕಮಿಷನರ್‌ ಖುದ್ದು ಸ್ಥಳಕ್ಕೆ ತೆರಳಿ ಖಾಲಿ ಮಾಡಿಸಬೇಕಾಗಿ ಬಂದಿತ್ತು. ಈಗಲೂ ಪೂರ್ಣ ತೆರವು ಕಾರ್ಯ ನಡೆದಿಲ್ಲ.

ಈಡೇರದ ಬೇಡಿಕೆ
ಕುಂದಾಪುರ ನಗರಕ್ಕೆ ಪ್ರವೇಶ ನೀಡಿಲ್ಲ. ಹೆದ್ದಾರಿಯಿಂದ ಸರ್ವಿಸ್‌ ರಸ್ತೆಗೆ ತೆರಳಲು ಅವಕಾಶ ಕೊಡಿ ಎಂದು
ಫ್ಲೈಒವರ್‌ ಕಾಮಗಾರಿ ಪೂರ್ಣವಾಗುವ ಮೊದಲೇ “ಉದಯವಾಣಿ “ಸುದಿನ’ ಪತ್ರಿಕೆಯಲ್ಲಿ ವರದಿಯೂ ಆಗಿತ್ತು. ಜನರೂ ಬೇಡಿಕೆ ಇಟ್ಟಿದ್ದರು. ತಾಂತ್ರಿಕ ಕಾರಣ ಗಳನ್ನು ನೀಡಿ ಪ್ರವೇಶ ನೀಡುತ್ತಿಲ್ಲ.

ವ್ಯವಸ್ಥೆಗಳೇ ಇಲ್ಲ
ಬೀದಿದೀಪ ಅಳವಡಿಸಿಲ್ಲ. ಕೆಲವು ಉರಿಯುತ್ತಿಲ್ಲ. ಫ್ಲೈಒವರ್‌ನಿಂದ ಮಳೆನೀರು ಸರ್ವಿಸ್‌ ರಸ್ತೆಗೆ ಬೀಳುವಾಗ ವಾಹನ ತೆರಳುವಾಗ ಸವಾರರ ಮೇಲೆ ಹಾರುತ್ತದೆ. ಇದನ್ನು ಸರಿಪಡಿಸಲಾಗಿದೆ ಎಂದು ಅಧಿವೇಶನದಲ್ಲಿ ಸುಳ್ಳು ಮಾಹಿತಿ ನೀಡಲಾಗಿದೆ.

ಮನವಿಗೆ ಬೆಲೆ ಇಲ್ಲ
ಪುರಸಭೆ ಈ ಕುರಿತು ಸಾಕಷ್ಟು ನಿರ್ಣಯ ಮಾಡಿದೆ. ಪುರಸಭೆಯ ಸಾಮಾನ್ಯ, ವಿಶೇಷ ಸಭೆಗೆ ಹೆದ್ದಾರಿ ಇಲಾಖೆ
ಅಧಿಕಾರಿಗಳು ಸರಿಯಾಗಿ ಬರುವುದಿಲ್ಲ. ಬಂದರೂ ಮಾಹಿತಿ ಕೊಡುವುದಿಲ್ಲ. ಕೊಟ್ಟರೂ ಬೇಡಿಕೆ ಈಡೇರಿಸುವುದಿಲ್ಲ. ಜಿಲ್ಲಾಧಿಕಾರಿಗಳು ಎಸಿ ಅಧ್ಯಕ್ಷತೆ ಯಲ್ಲಿ ಸಮಿತಿಯೊಂದನ್ನು ಮಾಡಿ ನಗರ ಪ್ರವೇಶಕ್ಕೆ ಅನುವಾಗುವಂತೆ ವರದಿ ನೀಡಲು ಹೇಳಿದ್ದರೂ ಹೆದ್ದಾರಿ ಇಲಾಖೆ ಮೌನವಾಗಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೂಚಿಸಿದ್ದರೂ ಪ್ರಯೋಜನ ಮಾತ್ರ ಆಗಲೇ ಇಲ್ಲ.

10 ಬೇಡಿಕೆಗಳು
– ಪಾದಚಾರಿ ಪಥ ಸಮರ್ಪಕವಾಗಿಲ್ಲ.
-ರಸ್ತೆ ನೀರು ಸರಾಗವಾಗಿ ಚರಂಡಿಗೆ   ಹರಿಯುವಂತಿಲ್ಲ.
– ಫ್ಲೈಒವರ್‌ ನೀರು ಸರ್ವಿಸ್‌ ರಸ್ತೆಗೆ ಬೀಳುತ್ತದೆ.
– ರಸ್ತೆ ದೀಪ ಅಳವಡಿಸಿಲ್ಲ
– ನಗರಕ್ಕೆ ಪ್ರವೇಶ ನೀಡಿಲ್ಲ
– ಶಾಸ್ತ್ರಿ ಸರ್ಕಲ್‌ ಬಳಿ ಫ್ಲೈ ಒವರ್‌ ಅಡಿ ಸ್ಥಳ ಪಾರ್ಕಿಂಗ್‌ಗೆ ಕೊಟ್ಟಿಲ್ಲ
– ಫ್ಲೈ ಒವರ್‌ ಕೆಳಗೆ ಉದ್ಯಾನ ನಿರ್ಮಿಸಿಲ್ಲ.
– ಸರ್ವಿಸ್‌ ರಸ್ತೆ ದುರಸ್ತಿಗೊಳಿಸಿಲ್ಲ.
– ಸರ್ವಿಸ್‌ ರಸ್ತೆಗೆ ಕೂಡುವ ರಸ್ತೆಯ ಸಂಪರ್ಕ ಸುಗಮವಾಗಿಲ್ಲ.
– ಸ್ವಾಗತ ಕಮಾನು ಇಲ್ಲ; ಕುಂದಾಪುರ ನಗರ ಎಂಬ ಫ‌ಲಕವೇ ಇಲ್ಲ

ಸೂಚಿಸಲಾಗಿದೆ
ಎಸಿ ಅಧ್ಯಕ್ಷತೆಯ ಸಮಿತಿ ಸಭೆಗೆ 3 ಬಾರಿ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ಹಾಜರಾಗಿಲ್ಲ. ಇನ್ನೊಂದು ದಿನಾಂಕ ನಿಗದಿ ಮಾಡಿ ಸಭೆ ನಡೆಸುವಂತೆ ಎಸಿಯವರಿಗೆ ಸೂಚಿಸಲಾಗಿದೆ. ನಗರಕ್ಕೆ ಪ್ರವೇಶ ನೀಡುವ ಕುರಿತು ತೀರ್ಮಾನ ಆಗಲಿದೆ.
-ಎಂ. ಕೂರ್ಮಾ ರಾವ್‌,
ಜಿಲ್ಲಾಧಿಕಾರಿ, ಉಡುಪಿ

ಟಾಪ್ ನ್ಯೂಸ್

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eqewqe

JP Hegde; ಉತ್ತಮರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿದೆ: ತೇಜಸ್ವಿನಿ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

1-qwewweq

K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ 

1-BVR-1

Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.