ಕುಂದಾಪುರ ಉ.ವಿ. ಗ್ರಾಮಾಂತರ ಸೀಲ್ಡೌನ್?
ಮಾರ್ಗಸೂಚಿ ಸಿದ್ಧಪಡಿಸಿರುವ ಎಎಸ್ಪಿ ಹರಿರಾಮ್ ಶಂಕರ್
Team Udayavani, Apr 13, 2020, 5:31 AM IST
ಕುಂದಾಪುರ: ಬೈಂದೂರು ಹಾಗೂ ಕುಂದಾಪುರ ತಾಲೂಕು ಗ್ರಾಮಾಂತರ ಪ್ರದೇಶಗಳು ಸೀಲ್ಡೌನ್ ಆಗಲಿವೆಯೇ? ಗ್ರಾಮಾಂತರ
ದಲ್ಲಿ ಯಾರೂ ಯಾವುದೇ ಕಾರಣಕ್ಕೂ ಮನೆ ಬಿಟ್ಟು ಬರುವಂತಿಲ್ಲ ಎಂಬ ಸಂದೇಹ ಹರಡುತ್ತಿದೆ.ಇದಕ್ಕೆ ಪೂರಕವಾಗಿ ಕುಂದಾಪುರ ಉಪವಿಭಾಗ ಎಎಸ್ಪಿ ಹರಿರಾಮ್ಶಂಕರ್ ಮಾರ್ಗಸೂಚಿಸಿದ್ಧಪಡಿಸಿದ್ದು, ಸೋಮವಾರದಿಂದಲೇ ಜಾರಿಗೆ ಬರಲಿವೆ. ಸೀಲ್ಡೌನ್ ಎಂಬ ಪದಬಳಕೆ ಮಾಡದೇ ಇದ್ದರೂ ಅಂಥದೇ ಕ್ರಮಗಳ ಜಾರಿಗೆ ಪ್ರಯತ್ನಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸರಕಾರ ನಿಗದಿಪಡಿಸಿದ ವ್ಯಕ್ತಿಗಳೇ ಆವಶ್ಯಕ ವಸ್ತುಗಳನ್ನು ಮನೆ ಮನೆಗೆ ತಲುಪಿಸಲಿದ್ದಾರೆ. ಅನಗತ್ಯವಾಗಿ ರಸ್ತೆಯಲ್ಲಿ ಓಡಾಡುವವರ ವಾಹನಗಳನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆ ತೀವ್ರಗೊಳ್ಳಲಿದೆ. ಎಲ್ಲ ವಾರ್ಡ್ಗಳಿಗೆ, ಸುಮಾರು 200 ಮನೆಗಳಿಗೆ 1ರಂತೆವಾಹನ ಹಾಗೂ ಇಬ್ಬರನ್ನು ನೇಮಿಸಲಾಗಿದ್ದು, ಅವರು ತರಕಾರಿ ಹಾಗೂ ದಿನಸಿ ವಸ್ತುಗಳನ್ನು ಮನೆ ಮನೆಗೆ ತಲುಪಿಸಲಿದ್ದಾರೆ. ವೈದ್ಯಕೀಯ ಕಾರಣಗಳಿಗಾಗಿ ಮಾತ್ರ ಜನರನ್ನು, ವಾಹನಗಳನ್ನು ಬಿಡಲಾಗುತ್ತದೆ. ಕುಂದಾಪುರ ಉಪ ವಿಭಾಗದ 64 ಪಿಡಿಒಗಳು, ಇಬ್ಬರು ತಾ.ಪಂ.ಇಒಗಳು ಇದರ ನಿರ್ವಹಣೆ ಮಾಡಲಿದ್ದಾರೆ. ಇದಕ್ಕೆ ಉಡುಪಿ ಜಿ.ಪಂ. ಸಿಇಒ ಒಪ್ಪಿಗೆ ಸೂಚಿಸಿದ್ದು, ಎಲ್ಲ ಠಾಣೆಗಳ ಎಸ್ಐಗಳು ಗೊತ್ತುಪಡಿಸಿದ ವಾರ್ಡ್ ಸದಸ್ಯರು ಹಾಗೂ ಪಿಡಿಒಗಳ ಸಂಪರ್ಕದಲ್ಲಿರುತ್ತಾರೆ. ಎರಡು – ಮೂರು ದಿನಗಳಲ್ಲಿ ಈ ವ್ಯವಸ್ಥೆ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದು ಶೇ. 100 ಲಾಕ್ಡೌನ್ಗೆ ಸಹಕಾರಿಯಾಗಲಿದೆ. ಈ ಪ್ರಯೋಗವನ್ನು ಗ್ರಾಮಾಂತರದಲ್ಲಿ ಆರಂಭಿಸುತ್ತಿದ್ದು, ಪುರಸಭೆ ವ್ಯಾಪ್ತಿಯನ್ನು ಸದ್ಯಕ್ಕೆ ಹೊರಗಿಡಲಾಗಿದೆ. ಕುಂದಾಪುರ ನಗರಕ್ಕೆ ಜನ ಅನಗತ್ಯವಾಗಿ ಬರುವುದನ್ನು ತಡೆಯಲು ಈ ಉಪಕ್ರಮ ಕೈಗೊಳ್ಳಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ದ್ವೇಷ ಹರಡುವ ಸಂದೇಶಗಳನ್ನು ಹಂಚಿಕೊಳ್ಳಬಾರದು. ಪೊಲೀಸ್ ಇಲಾಖೆ ಈ ನಿಟ್ಟಿನಲ್ಲಿ ಕಠಿನ ಕ್ರಮ ಕೈಗೊಳ್ಳಲಿದೆ. ಬೈಂದೂರು ಹಾಗೂ ಕಂಡೂÉರು ಠಾಣೆಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ದ್ವೇಷ, ನಿಂದನಾತ್ಮಕ ಬರಹಗಳನ್ನು ಹಾಕಿದವರ ಮೇಲೆ ಕೇಸು ದಾಖಲಿಸಲಾಗಿದೆ. ಎಲ್ಲ ಧಾರ್ಮಿಕ ಕೇಂದ್ರಗಳಲ್ಲೂ ಜನಸಂದಣಿ ಸೇರುವ ಎಲ್ಲ ಚಟುವಟಿಕೆ ನಿಷೇಧಿಸಲಾಗಿದ್ದು, ಇದನ್ನು ಉಲ್ಲಂ ಸಿದ ಕುರಿತು ಗಂಗೊಳ್ಳಿ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ. ಜಾನುವಾರುಗಳನ್ನು ಬೀದಿಗೆ ಬಿಡಬಾರದು. ಅವುಗಳನ್ನು ಕದ್ದೊಯ್ಯುವ ಜಾಲವೂ ಸಕ್ರಿಯವಾಗಿದೆ. ಬೈಂದೂರು ಠಾಣೆಯಲ್ಲಿ ಅಕ್ರಮ ಜಾನುವಾರು ಹತ್ಯೆ ಕುರಿತು 2 ಪ್ರಕರಣ ದಾಖಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ