ಚೆಕ್ಪೋಸ್ಟ್ಗೆ ಕುಂದಾಪುರ ಉಪವಿಭಾಗಾಧಿಕಾರಿ ಭೇಟಿ
Team Udayavani, Apr 23, 2020, 5:51 AM IST
ಪಡುಬಿದ್ರಿ: ಕೋವಿಡ್-19 ಮಹಾಮಾರಿ ಹರಡದಂತೆ ಉಡುಪಿ ಜಿಲ್ಲೆಯ ಗಡಿ ಹೆಜಮಾಡಿಯಲ್ಲಿ ಸೀಲ್ಡೌನ್ ಮಾಡಿ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದ್ದು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಕೆ. ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅವರು ಗಡಿ ತಪಾಸಣಾ ಕೇಂದ್ರದಲ್ಲಿನ ದಾಖಲೆಗಳನ್ನು ಪರಿಶೀಲಿಸಿ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸಿಬಂದಿಗೆ ಸೂಚನೆ ನೀಡಿದರು. ಗಡಿಯಲ್ಲಿ ಅನ್ಯ ಜಿಲ್ಲೆಗಳ ವಾಹನಗಳ ಸಂಚಾರ ಮಂಗಳವಾರ ಹೆಚ್ಚಾಗಿದ್ದು, ವಾಹನಗಳ ಪಾಸ್ಗಳನ್ನು ತಪಾಸಣೆ ನಡೆಸಿದರು. ಮಾಸ್ಕ್ ಧರಿಸದೆ ವಾಹನ ಚಲಾವಣೆ ಮಾಡುತ್ತಿರುವ ಸವಾರರಿಗೆ ಖಡಕ್ ಸೂಚನೆ ನೀಡಿದರು. ಅವರೊಂದಿಗೆ ಪ್ರಾದೇಶಿಕ ಅರಣ್ಯ ಅಧಿಕಾರಿ ಕ್ಲಿಫರ್ಡ್ ಲೋಬೋ, ನೋಡೆಲ್ ಅಧಿಕಾರಿ ಉದಯಕುಮಾರ್, ಹೆಜಮಾಡಿ ಗ್ರಾಮ ಲೆಕ್ಕಿಗ ಅರುಣ್ಕುಮಾರ್, ಪಡುಬಿದ್ರಿ ಠಾಣೆ ಎಎಸ್ಐ ಸುರೇಶ್ ಭಟ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ