ಕುಂದಾಪುರ: ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ಸಿಗಲಿ


Team Udayavani, Sep 27, 2021, 5:53 AM IST

ಕುಂದಾಪುರ: ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ಸಿಗಲಿ

ಇಂದು ಪ್ರವಾಸೋದ್ಯಮ ದಿನ. ಕುಂದಾಪುರ ತಾಲೂಕಿನಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ಈ ಹಿಂದೆ ಸಾಕಷ್ಟು ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಅನೇಕ ಚಲನಚಿತ್ರಗಳು ಕೂಡ ಇಲ್ಲಿ ಚಿತ್ರೀಕರಣಗೊಂಡಿವೆ. ಈ ಮೂಲಕ ಕುಂದಾಪುರದ ಕಡಲತಡಿ ಸಹಿತ ಬಹುತೇಕ ಪ್ರವಾಸಿ ತಾಣಗಳು ಜನರನ್ನು ಬೇರೆ ಬೇರೆ ಮಾಧ್ಯಮಗಳ ಮೂಲಕ ತಲುಪಿದೆ. ಈಗಂತೂ ಸಾಮಾಜಿಕ ಜಾಲತಾಣಗಳಿಂದಾಗಿ ಸಣ್ಣ ಸಣ್ಣ ತಾಣಗಳು ಕೂಡ ಬಹಳ ಬೇಗನೆ ಜನರನ್ನು ತಲುಪಬಲ್ಲವು. ಹಾಗಾಗಿ ಈ ನಿಟ್ಟಿನಲ್ಲಿ ಆಡಳಿತ ಯಂತ್ರ ಸ್ವಲ್ಪವೇ ಮುತುವರ್ಜಿ ವಹಿಸಿದರೂ ಯಾವುದೇ ಪ್ರವಾಸಿ ತಾಣವನ್ನು ಬಹಳ ಬೇಗ ಜನಪ್ರಿಯ ಸ್ಥಳ ಆಗಿ ಮಾರ್ಪಾಡು ಮಾಡಬಹುದು.

ಕೋವಿಡ್‌ ಪ್ರಕರಣಗಳ ಸಂಖ್ಯೆ ಸಾಕಷ್ಟು ಕಡಿಮೆಯಾಗಿರುವುದರಿಂದ ಜನರು ಮತ್ತೆ ಕೋವಿಡ್‌ ಪೂರ್ವ ಕಾಲದಂತೆ ಪ್ರವಾಸ ಹೊರಡುವ ಮನಸ್ಸು ಮಾಡುತ್ತಿದ್ದಾರೆ. ಆದರೆ ಹೆಚ್ಚಿನ ಪ್ರವಾಸಿ ಕೇಂದ್ರಗಳಲ್ಲಿ ಎರಡು ವರ್ಷಗಳಿಂದ ನಿರ್ವಹಣ ಕೆಲಸ ಕಾರ್ಯಗಳೇ ಆಗಿಲ್ಲ. ಕೆಲವು ತಾಣ ಗಳಿಗೆ ಹೋಗುವ ದಾರಿಯೂ ಸರಿಯಾಗಿಲ್ಲ. ಕೇವಲ ನಡೆದಾಡುವ ದಾರಿಯಷ್ಟೇ ಇರುವ ಪ್ರದೇಶಗಳಲ್ಲಿ ಗಿಡಗಂಟಿ ಬೆಳೆದು ದಾರಿ ಕಾಣದಂತಹ ಸ್ಥಿತಿ ಇದೆ. ಆದುದರಿಂದ ಈ ಪ್ರದೇಶಗಳನ್ನು ಮತ್ತೆ ಸ್ವತ್ಛಗೊಳಿಸಬೇಕಾಗಿದೆ. ಕನಿಷ್ಠ ಮೂಲಕ ಸೌಕರ್ಯ ವ್ಯವಸ್ಥೆಯನ್ನು ಮಾಡಬೇಕಾಗಿದೆ. ಅವಶ್ಯವಿರುವಲ್ಲಿಗೆ ದಾರಿ, ಬೆಳಕಿನ ವ್ಯವಸ್ಥೆ ಮಾಡಬೇಕಾಗಿದೆ.

ಇದನ್ನೂ ಓದಿ:ಶಿಕ್ಷಕರ ಅರ್ಹತಾ ಪರೀಕ್ಷೆ : ಬ್ಲೂಟೂತ್‌ ಶೂ ಧರಿಸಿ ಮೋಸ ಮಾಡುವ ಯತ್ನ

ಕೊರೊನೋತ್ತರ ಪ್ರಪಂಚವೇ ಬದಲಾಗಿದೆ. ಹಿಂದೆ ನಗರಗಳಲ್ಲಿ ಜನರ ಓಡಾಟ ಹೆಚ್ಚಿತ್ತು. ಹಿಂದೆ ಸಂಜೆ ವೇಳೆಗೆ ತಿರುಗಾಟಕ್ಕೆಂದು ನಗರಕ್ಕೆ ಬರುವವರ ಸಂಖ್ಯೆ ಸಾಕಷ್ಟಿತ್ತು. ಹೊಟೇಲ್‌, ಮಾಲ್‌, ಎಲೆಕ್ಟ್ರಾನಿಕ್‌ ಮಳಿಗೆಗಳು, ಬಟ್ಟೆ ಮಳಿಗೆಗಳಿಗೆ ವೀಕೆಂಡ್‌ ಶಾಪಿಂಗ್‌ ಎಂದು ಹೋಗುತ್ತಿದ್ದರು. ಈಗ ಅದೆಲ್ಲವೂ ಹೆಚ್ಚಾಗಿ ಶನಿವಾರವೇ ನಡೆಯುತ್ತಿದೆ. ರವಿವಾರ ಸಂಜೆಯ ವೇಳೆ ಕುಟುಂಬ ಸಹಿತವಾಗಿ ಹತ್ತಿರದ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಸಂಪ್ರದಾಯ ಆರಂಭವಾಗಿದೆ.

ದೂರದ ಪ್ರವಾಸಿ ತಾಣಗಳಿಗಿಂತ ಹತ್ತಿರದ ಪ್ರವಾಸಿ ತಾಣವೇ ಜನರಿಗೆ ಇಷ್ಟವಾಗತೊಡಗಿದೆ. ಜನ ಜಂಜಾಟದಿಂದ ದೂರವಿದ್ದು, ಪ್ರಶಾಂತ ತಾಣದಲ್ಲಿ ಕಾಲ ಕಳೆಯುವ ಹವ್ಯಾಸ ಹೆಚ್ಚುತ್ತಿದೆ.

ಈ ನಿಟ್ಟಿನಲ್ಲಿ ಪ್ರವಾಸೋದ್ಯಮದ ಮತ್ತಷ್ಟು ಬೆಳವಣಿಗೆ ಕುರಿತು ಸ್ಥಳೀಯಾಡಳಿತಗಳೂ ಮನಸ್ಸು ಮಾಡಬೇಕಿವೆ. ಪ್ರವಾಸೋದ್ಯಮ ಇಲಾಖೆ ಯೂ ಗಮನ ಹರಿಸಬೇಕಿದೆ. ರಾಜ್ಯ ಸರಕಾರ ಪ್ರವಾಸಿಗರ ಆಕರ್ಷಣೆಗೆ ಕ್ರಮ, ಮೂಲಸೌಕರ್ಯಕ್ಕೆ ಆದ್ಯತೆ ನೀಡಬೇಕಿದೆ. ಹಾಗೆ ಜನ ಬಂದಾಗ ಸ್ವತ್ಛತೆಗೆ ಆದ್ಯ ಗಮನ ನೀಡಬೇಕಿದೆ. ಇದಲ್ಲದ ಹೊರತು ಪ್ರವಾಸಿಗರು ಬಂದರೆ ಆ ಊರಿಗೆ ಶಾಪ. ಹಾಗಾಗದಂತೆ ಜಾಗೃತಿಯ ಅವಶ್ಯವೂ ಇದೆ. ನಗರಕ್ಕೆ ಆತುಕೊಂಡಿರುವ ಪಂಚಗಂಗಾವಳಿ, ಕೋಡಿ, ಬಬ್ಬುಕುದ್ರು ಮೊದಲಾದ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಯೋಜನೆ ತಯಾರಾಗಲಿ. ಅದಕ್ಕೆ ಅಗತ್ಯ ಬಜೆಟ್‌ ಸರಕಾರದಿಂದ ದೊರೆಯಲಿ. ಅಲ್ಲಿನ ವ್ಯವಸ್ಥೆಗಳೆಲ್ಲ ಉತ್ತಮಗೊಳ್ಳಲಿ. ಆಗ ಒಂದಷ್ಟು ಆರ್ಥಿಕ ಚೇತರಿಕೆಯೂ ಕಂಡು ಬಂದೀತು.

-ಸಂ

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ ಅಡಿಗೆ ಸಿಲುಕಿದ ಬೈಕ್; ಯಕ್ಷಗಾನ ಕಲಾವಿದ ಸ್ಥಳದಲ್ಲೇ ಮೃತ್ಯು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.