ಕುಂದಾಪುರ: ಹೆಚ್ಚುತ್ತಿರುವ ನಗ-ನಗದು ಕಳವು
ವಾರದೊಳಗೆ 4 ಕಳ್ಳತನ ಪ್ರಕರಣ ಪತ್ತೆಗೆ ವಿಶೇಷ ತಂಡ ರಚನೆಗೆ ಆಗ್ರಹ
Team Udayavani, Feb 15, 2021, 3:20 AM IST
ಸಾಂದರ್ಭಿಕ ಚಿತ್ರ
ಕುಂದಾಪುರ: ಕಳೆದೊಂದು ವಾರದಲ್ಲಿ ನಗರ ಸೇರಿದಂತೆ ಕುಂದಾಪುರ ಉಪ ವಿಭಾಗದಲ್ಲಿ 4 ಕಳ್ಳತನ ಪ್ರಕರಣಗಳು ನಡೆದಿವೆ. ಅದರಲ್ಲೂ 3 ಪ್ರಕರಣಗಳಲ್ಲಿ ನಗ- ನಗದು ಕಳವಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಕಳೆದ ಫೆ.6ರಂದು ಶಾಸ್ತ್ರಿ ಸರ್ಕಲ್ ಬಳಿ ಉಪನ್ಯಾಸಕಿಯೊಬ್ಬರ 40 ಸಾವಿರ ರೂ. ಕಳವಾಗಿತ್ತು. ಈ ಕೃತ್ಯದಲ್ಲಿ ಮಹಿಳಾ ಗ್ಯಾಂಗ್ ಕೈವಾಡದ ಶಂಕೆ ವ್ಯಕ್ತವಾಗಿತ್ತು. ಫೆ. 11ರಂದು ಹೆಮ್ಮಾಡಿ ಸಮೀಪ ಬಸ್ನಲ್ಲಿ ಪ್ರಯಾಣಿಸು ತ್ತಿದ್ದ ವೃದ್ಧೆಯೊಬ್ಬರ 1 ಲಕ್ಷ ರೂ. ಮೌಲ್ಯದ ಚಿನ್ನದ ಸರ ಕಳ್ಳತನವಾಗಿದೆ. ಇದು ಕೂಡ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಫೆ.13ರಂದು ಕುಂದಾಪುರದ ಹೊಸ ಬಸ್ ನಿಲ್ದಾಣ ಸಮೀಪದ ವಿದ್ಯಾ ಬುಕ್ ಹೌಸ್ ಬಳಿ ಪುಸ್ತಕ ಖರೀದಿಯ ಸೋಗಿನಲ್ಲಿ ಬಂದ ಸುಮಾರು 45 ವರ್ಷ ಪ್ರಾಯದ ವ್ಯಕ್ತಿಯೊಬ್ಬ ಆ ಮಳಿಗೆಯ ಮಾಲಕರ ಕಾರಿನಲ್ಲಿದ್ದ 20 ಸಾವಿರ ರೂ. ಕಳವುಗೈದಿದ್ದ.
ದೇಗುಲದ ಘಂಟೆ ಕಳವು :
ಅಂಪಾರು ಗ್ರಾಮದ ನುಕ್ಯಾಡಿ ಶ್ರೀ ಮಹಾಗಣಪತಿ ದೇವಸ್ಥಾನದ ಮುಖ್ಯದ್ವಾರದ ಮುಂಭಾಗದ ಸುತ್ತ ಅಳವಡಿಸಿರುವ ಅಂದಾಜು 1 ಟನ್ಗೂ ಮಿಕ್ಕಿದ ಸುಮಾರು 500ರಿಂದ 600ಕ್ಕೂ ಹೆಚ್ಚಿನ ಕಂಚಿನ ಘಂಟೆಗಳು, ಭಕ್ತರೊಬ್ಬರು ನೀಡಿದ ಸುಮಾರು 106 ಕೆ.ಜಿ. ತೂಕದ ಒಂದು ದೊಡ್ಡ ಘಂಟೆ ಕಳವಾಗಿದ್ದು, ಇದರ ಒಟ್ಟು ಮೌಲ್ಯ 11 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಕಳ್ಳರ ಪತ್ತೆಗೆ ಆಗ್ರಹ :
ಕುಂದಾಪುರ ಉಪ ವಿಭಾಗ ವ್ಯಾಪ್ತಿ ಯಲ್ಲಿ ಕಳೆದೊಂದು ವಾರದೊಳಗೆ 4 ಕಳ್ಳತನ ಪ್ರಕರಣಗಳು ನಡೆದಿದ್ದು, ಈವರೆಗೆ ಯಾವುದೇ ಪ್ರಕರಣದಲ್ಲಿಯೂ ಕಳ್ಳರ ಪತ್ತೆಯಾಗಿಲ್ಲ. ಹೀಗೇ ಬಿಟ್ಟರೆ ಇದು ಹೆಚ್ಚುವ ಆತಂಕ ಜನರಲ್ಲಿದ್ದು, ಶೀಘ್ರ ವಿಶೇಷ ಪೊಲೀಸ್ ತಂಡವನ್ನು ರಚಿಸಿ, ಕಳ್ಳರನ್ನು ಪತ್ತೆಹಚ್ಚಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಶೀಘ್ರ ವಿಶೇಷ ತಂಡ :
ಕಳೆದ ಕೆಲ ದಿನಗಳಿಂದ ಅಲ್ಲಲ್ಲಿ ಕಳ್ಳತನ ಪ್ರಕರಣಗಳು ನಡೆದಿದ್ದು, ಈ ಬಗ್ಗೆ ಈಗಾಗಲೇ ಪ್ರಾಥಮಿಕ ಹಂತದ ತನಿಖೆಗಳು ನಡೆದಿವೆ. ಆದರೆ ಯಾವುದೇ ಮಹತ್ವದ ಸುಳಿವು ಲಭ್ಯವಾಗಿಲ್ಲ.
ಈ ಪ್ರಕರಣಗಳನ್ನು ಭೇದಿಸಲು ಶೀಘ್ರ ವಿಶೇಷ ಪೊಲೀಸರ ತಂಡವನ್ನು ರಚಿಸಲಾಗುವುದು ಎಂದು ಕುಂದಾಪುರ ಉಪ ವಿಭಾಗದ ಡಿವೈಎಸ್ಪಿ ಕೆ. ಶಂಕರ್ “ಉದಯವಾಣಿ’ಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JP Hegde; ಉತ್ತಮರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿದೆ: ತೇಜಸ್ವಿನಿ
Udupi: ಅನುಮತಿಯಿಲ್ಲದೆ ಪೋಸ್ಟರ್ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್
K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ