ನಡಂಬೂರು: ಬೆಳಗ್ಗೆ ಬಸ್‌ ಇದೆ; ಸಂಜೆ ಸಂಚರಿಸಲ್ಲ

ಕಾಡ ದಾರಿಯಲ್ಲಿ ನಿತ್ಯ ವಿದ್ಯಾರ್ಥಿಗಳಿಂದ ಐದಾರು ಕಿ.ಮೀ. ನಡಿಗೆ ; ಬಸ್‌ ಸಂಪರ್ಕ ಕಲ್ಪಿಸಲು ಬೇಡಿಕೆ

Team Udayavani, Sep 19, 2022, 11:55 AM IST

9

ಹಾಲಾಡಿ: ಅಮಾಸೆಬೈಲು ಗ್ರಾಮದ ನಡಂಬೂರು, ನರಸೀಪುರ, ಗುಂಡಾಣ ಭಾಗಕ್ಕೆ ಬೆಳಗ್ಗೆ ಬಸ್‌ ಇದೆ. ಆದರೆ ಸಂಜೆ ಸಮಯಕ್ಕೆ ಒಂದೇ ಒಂದು ಬಸ್‌ ಇಲ್ಲ. ಇದರಿಂದ ಬೆಳಗ್ಗೆ ಶಾಲಾ- ಕಾಲೇಜಿಗೆ ತೆರಳಿದ ವಿದ್ಯಾರ್ಥಿಗಳು ಮನೆ ಸೇರಬೇಕಾದರೆ ಐದಾರು ಕಿ.ಮೀ. ಕಾಡ ಹಾದಿಯಲ್ಲಿ ನಡೆದೇ ಸಾಗಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ.

ಅಮಾಸೆಬೈಲಿನಿಂದ ಐದಾರು ಕಿ.ಮೀ. ದೂರದ ನಡಂಬೂರು, ನರಸೀಪುರ, ಗುಂಡಾಣ ಭಾಗಕ್ಕೆ ಬಸ್‌ ಇಲ್ಲದೆ 25ರಿಂದ 30 ಮಕ್ಕಳು ನಿತ್ಯ ಸಂಜೆ ವೇಳೆಗೆ ನಡೆದುಕೊಂಡೇ ಹೋಗಬೇಕಾದ ಸ್ಥಿತಿಯಿದೆ.

ಬೆಳಗ್ಗೆ ಹೋದ ಬಸ್‌ ಮತ್ತೆ ಬರುವುದು ಮರುದಿನ

ಹೆಂಗವಳ್ಳಿಯಿಂದ ನಡಂಬೂರು ಮಾರ್ಗವಾಗಿ ಅಮಾಸೆಬೈಲು ಮೂಲಕ ಕುಂದಾಪುರಕ್ಕೆ ತೆರಳಲು ಬೆಳಗ್ಗಿನ ಅವಧಿಯಲ್ಲಿ ಒಂದು ಖಾಸಗಿ ಬಸ್‌ ಇದೆ. ಈ ಬಸ್‌ ನಡಂಬೂರು, ನರಸೀಪುರ ಪ್ರದೇಶಕ್ಕೆ ಬೆಳಗ್ಗೆ 8 ಗಂಟೆಯ ಸುಮಾರಿಗೆ ಬರುತ್ತದೆ. ಈ ಬಸ್‌ನಲ್ಲಿ ಈ ಭಾಗದ ಸುಮಾರು ಮಕ್ಕಳಿಗೆ ಶಾಲಾ – ಕಾಲೇಜಿಗೆ ತೆರಳಲು, ಅಮಾಸೆಬೈಲು ಪೇಟೆ, ಪಂಚಾಯತ್‌ಗೆ ತೆರಳಲು, ಕುಂದಾಪುರ ಕಡೆಗೆ ತೆರಳಲು ಸಾರ್ವಜನಿಕರಿಗೂ ಅನುಕೂಲವಾಗುತ್ತದೆ. ಆದರೆ ಇದೇ ಜನರಿಗೆ ವಾಪಾಸು ಬರಬೇಕಾದರೆ ಯಾವುದೇ ಬಸ್‌ ಸೌಕರ್ಯವಿಲ್ಲ. ಈ ಊರಿಗೆ ಮತ್ತೆ ಬಸ್‌ ಬರುವುದು ಮರುದಿನ ಬೆಳಗ್ಗೆ. ಇದರಿಂದ ಶಾಲಾ- ಕಾಲೇಜು ಮಕ್ಕಳು, ಕೆಲಸಕ್ಕೆ ತೆರಳಿದ ಜನರು ವಾಪಾಸು ನಡೆದುಕೊಂಡೇ ಬರುವಂತಾಗಿದೆ.

ಎಲ್ಲಿಗೆಲ್ಲ ಸಮಸ್ಯೆ

ನಡಂಬೂರು, ನರಸೀಪುರ, ಗುಂಡಾಣ, ನಿಲ್ಸಿಕಲ್‌, ಮಾವಿನಕಾಡು, ಉಳಿಕಾಡು ಹೀಗೆ ಸುತ್ತಮುತ್ತಲಿನ ಪರಿಸರದ ಅನೇಕ ಕಡೆಗಳ ಮಕ್ಕಳು ಹಾಲಾಡಿ, ಬಿದ್ಕಲ್‌ ಕಟ್ಟೆ, ಕೋಟೇಶ್ವರ, ಕುಂದಾಪುರ ಭಾಗದ ಶಿಕ್ಷಣ ಸಂಸ್ಥೆಗಳಿಗೆ ವ್ಯಾಸಂಗಕ್ಕೆ ಬರುತ್ತಾರೆ.

ಬಸ್‌ ಕಲ್ಪಿಸಲು ಆಗ್ರಹ: ಪ್ರತಿ ನಿತ್ಯ ಮಕ್ಕಳು ಮಾತ್ರವಲ್ಲದೆ ಗ್ರಾಮಸ್ಥರು ಸಹ ಕನಿಷ್ಠ ಗ್ರಾ.ಪಂ. ಕಚೇರಿ ಕೆಲಸಕ್ಕೆ ಬರಬೇಕಾದರೂ 5-6 ಕಿ.ಮೀ. ನಡೆದುಕೊಂಡು ಅಥವಾ ರಿಕ್ಷಾ ಇನ್ನಿತರ ವಾಹನ ಬಾಡಿಗೆ ಮಾಡಿಕೊಂಡು ಬರಬೇಕಾಗಿದೆ. ಗ್ರಾಮೀಣ ಭಾಗವಾದ ಇಲ್ಲಿಗೆ ಈ ಬೆಳಗ್ಗೆ ಇರುವಂತೆಯೇ ಸಂಜೆ ವೇಳೆಯೂ ಒಂದು ಬಸ್‌ ವ್ಯವಸ್ಥೆ ಮಾಡಿದರೆ ಬಹಳಷ್ಟು ಅನುಕೂಲವಾಗಲಿದೆ. – ಕಿರಣ್‌ ಶೆಟ್ಟಿ, ಕೊಟ್ಟಕ್ಕಿ, ಗ್ರಾ.ಪಂ. ಸದಸ್ಯರು

ಪರಿಶೀಲಿಸಲಾಗುವುದು: ಅಮಾಸೆಬೈಲು ಗ್ರಾಮದ ನಡಂಬೂರು ಭಾಗಕ್ಕೆ ಬಸ್‌ ಸೌಕರ್ಯ ಇಲ್ಲದಿರುವ ಬಗ್ಗೆ ಮಾಹಿತಿಯಿಲ್ಲ. ಸಾರ್ವಜನಿಕರಿಂದ ಮನವಿ ಬಂದಲ್ಲಿ ಪರಿಶೀಲಿಸಿ, ಸಂಬಂಧಪಟ್ಟವರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. – ರಾಜೇಶ್‌, ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್‌ ಕುಂದಾಪುರ

ಟಾಪ್ ನ್ಯೂಸ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-congress

Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್‌ರಾಜ್‌ ಮೌರ್ಯ

7

Kundapur: ಬೈಕ್‌ ಢಿಕ್ಕಿ; ಸ್ಕೂಟರ್‌ ಸವಾರೆಗೆ ಗಾಯ

1-wewewe

Congress;ಪ್ರತಾಪ್‌ಚಂದ್ರ ಶೆಟ್ಟಿ-ಜೆ.ಪಿ.ಹೆಗ್ಡೆ ಭೇಟಿ: ಕಾರ್ಯತಂತ್ರದ ಸಮಾಲೋಚನೆ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

suicide

ಕಾಶ್ಮೀರದಲ್ಲಿ ಗುಂಡು ಹಾರಿಸಿ ಬಿಹಾರ ಕಾರ್ಮಿಕನ ಹತ್ಯೆ  

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.