ರಕ್ಷಣೆಗೆ ಧಾವಿಸಿ ಮಾನವೀಯತೆ ಮೆರೆದ ಸ್ಥಳೀಯ ಯುವಕರ ತಂಡ!
ಶಾನಾಡಿ: ಜಿಂಕೆ ಮೇಲೆ ಬೀದಿನಾಯಿಗಳ ದಾಳಿ!
Team Udayavani, May 8, 2022, 11:59 AM IST
ತೆಕ್ಕಟ್ಟೆ: ಇಲ್ಲಿನ ಕೆದೂರು ಗ್ರಾ.ಪಂ. ವ್ಯಾಪ್ತಿಯ ಶಾನಾಡಿ ಎಂಬಲ್ಲಿ ಬೀದಿನಾಯಿಗಳ ದಾಳಿಗೆ 4 ವರ್ಷದ ಜಿಂಕೆಯೊಂದು ಒಳಗಾಗಿದ್ದು ರಕ್ಷಣೆಯ ಪ್ರಯತ್ನ ವಿಫಲವಾದ ಘಟನೆ ಮೇ 7ರಂದು ಶಾನಾಡಿ ವಿಶ್ವನಾಥ ಹೆಗ್ಡೆ ಅವರಿಗೆ ಸಂಬಂಧಿಸಿದ ಹಾಡಿಯಲ್ಲಿ ಸಂಭವಿಸಿದೆ.
ಶಾನಾಡಿ ಎಂಬಲ್ಲಿ ಸುಮಾರು 7ಕ್ಕೂ ಅಧಿಕ ನಾಯಿಗಳು ಏಕಾಏಕಿ ಜಿಂಕೆಯೊಂದನ್ನು ಅಟ್ಟಾಡಿಸಿಕೊಂಡು ಬಂದಿದ್ದು, ಪ್ರಾಣಭಯದಿಂದ ಜಿಂಕೆ ಸಮೀಪದ ಹಾಡಿಯ ಒಳಗೆ ಪ್ರವೇಶಿಸಿತ್ತು. ಇದೇ ಸಂದರ್ಭದಲ್ಲಿ ಪರಿಸರದ ಸ್ಥಳೀಯ ಯುವಕರಾದ ಕೆದೂರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಸುರೇಶ್ ಮೊಗವೀರ ಶಾನಾಡಿ, ರಾಘವೇಂದ್ರ ಶಾನಾಡಿ, ಉದಯ ಶಾನಾಡಿ, ಸಂತೋಷ್ ಶಾನಾಡಿ, ಸುದರ್ಶನ್ ಕೆದೂರು, ವಿಜಯ ಶಾನಾಡಿ ಅವರು ತತ್ಕ್ಷಣ ಜಿಂಕೆಯ ರಕ್ಷಣೆಗೆ ಧಾವಿಸಿದರು. ಅನಂತರ ಕುಡಿಯಲು ನೀರು ನೀಡಿ ಮಾನವೀಯತೆ ಮೆರೆದರಾದರೂ ಕೂಡ ಅಷ್ಟರಲ್ಲಿಯೇ ಜಿಂಕೆ ಅಸುನೀಗಿದೆ.
ಜಿಂಕೆ ಅಸುನೀಗಿದ ಸುದ್ದಿ ಗ್ರಾಮದಲ್ಲಿ ವ್ಯಾಪಿಸುತ್ತಿದ್ದಂತೆ ಸುತ್ತಮುತ್ತಲಿನ ಪರಿಸರದ ಮಕ್ಕಳು ಹಾಗೂ ಹಿರಿಯರು ತಂಡೋಪತಂಡವಾಗಿ ಸ್ಥಳಕ್ಕೆ ಕಾತುರದಿಂದ ವೀಕ್ಷಿಸಿದರು.
ಅರಣ್ಯ ಇಲಾಖೆಯ ಸೋಮಶೇಖರ್ ಸ್ಥಳಕ್ಕೆ ತೆರಳಿದರು. ಈ ಸಂದರ್ಭದಲ್ಲಿ ಶಾನಾಡಿ ವಿಶ್ವನಾಥ ಹೆಗ್ಡೆ, ಹಿರಿಯ ಪ್ರಗತಿಪರ ಕೃಷಿಕ ಶಾನಾಡಿ ರಾಮಚಂದ್ರ ಭಟ್, ಕೆದೂರು ಗ್ರಾ.ಪಂ. ಸದಸ್ಯ ಉಲ್ಲಾಸ್ ಹೆಗ್ಡೆ, ಗ್ರಾ.ಪಂ.ಸಿಬಂದಿ ರಾಮ ದೇವಾಡಿಗ, ಸುಧಾಕರ ಶಾನಾಡಿ ಮತ್ತಿತರರು ಸಹಕರಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ
Udupi; ಮಸ್ಟರಿಂಗ್ ಕೇಂದ್ರದಲ್ಲಿ ಸಕಲ ತಯಾರಿ
ಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ
ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.
ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ