ಯಕ್ಷರಂಗದ ಹೊಸ ಬೆಳಕು; ಮೇಘನಾ-ಭೂಮಿಕಾ ಸೋದರಿಯರು

ಘಟಾನುಘಟಿ ಕಲಾವಿದರೊಂದಿಗೂ ಸೈ ಎಂದೆನಿಸಿಕೊಂಡ ಸೋದರಿಯರು ಇವರು

Team Udayavani, Jan 9, 2020, 5:17 AM IST

18

ಯಕ್ಷಗಾನ ಕೇವಲ ಗಂಡು ಕಲೆ. ಅವರಿಗಷ್ಟೇ ಸೀಮಿತ ಎಂಬುದನ್ನು ಸುಳ್ಳು ಮಾಡಿದವರು ಕುಂದಾಪುರದ ಮೇಘನಾ ಮತ್ತು ಭೂಮಿಕಾ ಸೋದರಿಯರು. ಕೋಡಿಯ ಪದ್ಮನಾಭ ಐತಾಳ್‌ ಮತ್ತು ರಾಧಿಕಾ ದಂಪತಿಯ ಮಕ್ಕಳಾದ ಇವರು ಚಿಕ್ಕ ವಯಸ್ಸಿನಿಂದಲೇ ಯಕ್ಷಗಾನದ ಕಡೆ ವಾಲಿದವರು. ಈಗ ಗೆಜ್ಜೆ ಕಟ್ಟಿ ರಂಗಸ್ಥಳಕ್ಕೆ ಬಂದರೇ ಎದುರಿಗಿರುವ ಪಾತ್ರಧಾರಿಗಳಿಗೂ ಅಚ್ಚರಿ ಹುಟ್ಟಿಸುತ್ತಾರೆ.ಯಕ್ಷಗಾನಕ್ಕೆ ಒಪ್ಪುವ ಸರ್ವಾಂಗೀಣ ಸುಂದರ ಭಾವಾಭಿವ್ಯಕ್ತಿ ಈ ಸೋದರಿಯರಿಗೆ ಸಿದ್ಧಿಸಿದೆ.

ಯಕ್ಷಗುರು ರಾಮಚಂದ್ರ ಭಟ್‌ ಹೆಮ್ಮಾಡಿ ಅವರಲ್ಲಿ ಪ್ರಾಥಮಿಕ ಹೆಜ್ಜೆಗಳನ್ನು ಅಭ್ಯಸಿಸಿ, ಭಾಗವತ ರವಿ ಕುಮಾರ್‌ ಸೂರಾಲ್‌ ಅವರಲ್ಲಿ ಪೂರ್ಣ ಹೆಜ್ಜೆಗಾರಿಕೆ ಕಲಿತರು ಈಗಾಗಲೇ ಹಲವು ಪೌರಾಣಿಕ ಪ್ರಸಂಗಗಳಲ್ಲಿ ಪಾತ್ರ ನಿರ್ವಹಿಸಿದ್ದಾರೆ.

ಪ್ರಸ್ತುತ, ಸರಕಾರಿ ಪ್ರಥಮ ದರ್ಜೆ ಪದವಿ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಮೇಘನಾ ಎಂಕಾಂ ಅಭ್ಯಸಿಸುತ್ತಿದ್ದರೆ, ಭೂಮಿಕಾ, ಶ್ರೀ ಮಧ್ವ ವಾದಿರಾಜ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ ಆ್ಯಂಡ್‌ ಮ್ಯಾನೇಜ್‌ಮೆಂಟ್‌ನಲ್ಲಿ ಕಂಪ್ಯೂಟರ್‌ ಸೈನ್ಸ್‌ ಎಂಜಿನಿಯರಿಂಗ್‌ ಕಲಿಯುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಹೋಗುವ ಇಂದಿನ ಯುವಜನರ ಮಧ್ಯೆ ಇವರು ವಿಶಿಷ್ಟವಾಗಿ ತೋರುತ್ತಾರೆ.

ಯಕ್ಷಗಾನದ ಪ್ರಮುಖ ಪೌರಾಣಿಕ ಪ್ರಸಂಗಗಳಾದ ಲವಕುಶ ಕಾಳಗದ ಲವ-ಕುಶ ಜೋಡಿವೇಷ, ಜಾಂಬವತಿ ಕಲ್ಯಾಣದ ಕೃಷ್ಣ, ಕಂಸ ದಿಗ್ವಿಜಯದ ಕಂಸ, ಸುಧನ್ವಾರ್ಜುನ ಕಾಳಗದ ಅರ್ಜುನ, ಶಶಿಪ್ರಭಾ ಪರಿಣಯದ ಮಾರ್ತಾಂಡತೇಜ, ಭ್ರಮರಕುಂತಳೆ, ಅಭಿಮನ್ಯು ಕಾಳಗದ ದ್ರೋಣ, ಅಭಿಮನ್ಯು ಪಾತ್ರಗಳೂ ಸೇರಿದಂತೆ ಹಲವಾರು ಪಾತ್ರಗಳಿಗೆ ಜೀವ ತುಂಬಿದ್ದಾರೆ. ಎಲ್ಲ ಮುಖ್ಯ ಪಾತ್ರಗಳನ್ನೇ ನಿಭಾಯಿಸಿದ್ದಲ್ಲದೇ, ಪುಂಡು ವೇಷಕ್ಕೂ, ಸ್ತ್ರೀ ವೇಷಕ್ಕೂ ಹಾಗೂ ಖಳನಾಯಕನ ಪಾತ್ರಕ್ಕೂ ಸೈ ಎನ್ನಿಸಿಕೊಂಡಿರುವುದು ವಿಶೇಷ.

ಬಡಗುತಿಟ್ಟು ಯಕ್ಷರಂಗದ ಪ್ರಸಿದ್ಧ ಡೇರೆ ಮೇಳಗಳಾದ ಪೆರ್ಡೂರು, ಸಾಲಿಗ್ರಾಮ ಹಾಗೂ ನೀಲಾವರ, ಸೌಕೂರು ಮೇಳದ ರಂಗಸ್ಥಳದಲ್ಲಿ ಗೆಜ್ಜೆ ಕಟ್ಟಿ ಕುಣಿದು ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದ್ದಾರೆ. ಅಗ್ರಮಾನ್ಯ ಕಲಾವಿದರಾದ ಕೊಂಡದಕುಳಿ ರಾಮಚಂದ್ರ ಹೆಗಡೆ, ವಾಸುದೇವ ಸಾಮಗ, ಮೋಹನದಾಸ ಶೆಣೈ, ಶಶಿಕಾಂತ್‌ ಶೆಟ್ಟಿಯವರ ಜೊತೆಗೆ ಪಾತ್ರವಹಿಸಿದ್ದಲ್ಲದೇ, ಪ್ರಸಿದ್ಧ ಭಾಗವತರಾದ ಜನ್ಸಾಲೆ ರಾಘವೇಂದ್ರ ಆಚಾರ್ಯ, ರಾಘವೇಂದ್ರ ಮಯ್ಯ, ಹಿಲ್ಲೂರು ರಾಮಚಂದ್ರ ಹೆಗಡೆಯವರ ಪದ್ಯಗಳಿಗೆ ಹೆಜ್ಜೆಹಾಕಿರುವುದು ಇವರ ಹೆಚ್ಚುಗಾರಿಕೆ.

ಅನೇಕ ಸ್ಥಳಿಯ ಸಂಸ್ಥೆಗಳ ಸಮಾರಂಭಗಳಲ್ಲಿಯೂ ವೇಷ ಕಟ್ಟಿದ್ದಾರೆ. ಪಾತ್ರ ನಿರ್ವಹಿಸುವುದಲ್ಲದೇ ಹೆಜ್ಜೆ ಕಲಿಸಿಕೊಡುವುದರಲ್ಲಿಯೂ ಇವರು ಮುಂದು. ಕಾಲೇಜು ವಾರ್ಷಿಕೋತ್ಸವಕ್ಕೆ ಸಹಪಾಠಿಗಳಿಗೆ ಹೆಜ್ಜೆ ಕಲಿಸಿಕೊಟ್ಟು ಉಪನ್ಯಾಸಕರ ಪ್ರೀತಿ ಗಳಿಸಿದವರು. ಕೊಮೆ ತೆಕ್ಕಟ್ಟೆಯ ಯಶಸ್ವಿ ಕಲಾವೃಂದ 2015 ರಲ್ಲಿ ಆಯೋಜಿಸಿದ ಜಿಲ್ಲಾ ಮಟ್ಟದ ಯಕ್ಷಗಾನ ಜೋಡಿವೇಷ ಸ್ಪರ್ಧೆಯ ಸೀನಿಯರ್‌ ಭಾಗದಲ್ಲಿ ಬಹುಮಾನ ಗಳಿಸಿದವರು. ಹಲವು ಸಂಘ ಸಂಸ್ಥೆಗಳ ಗೌರವಕ್ಕೆ ಪಾತ್ರರಾದವರು. ಯಕ್ಷಗಾನದಲ್ಲಿ ಮಹತ್ತರವಾದ ಕನಸುಗಳನ್ನು ಹೊತ್ತಿರುವ ಈ ಸೋದರಿಯರು ಯಕ್ಷ ರಂಗದ ಹೊಸ ಬೆಳಕಾಗಿ ಭರವಸೆ ಮೂಡಿಸಿದ್ದಾರೆನ್ನುವುದು ಅತಿಶಯೋಕ್ತಿಯಲ್ಲ.

ನಮ್ಮ ಕಲಾಸೇವೆ
ಅನೇಕ ಸಂಘ ಸಂಸ್ಥೆಗಳು ನಮ್ಮನ್ನು ಪಾತ್ರಗಳಿಗಾಗಿ ಕರೆಯುತ್ತಾರೆ. ಕೊಟ್ಟ ಪಾತ್ರಗಳಿಗೆ ಜೀವ ತುಂಬುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಕಲಿಯುವುದು ಇನ್ನೂ ಸಾಕಷ್ಟಿದೆ. ಇದು ನಮ್ಮ ಸಣ್ಣ ಸೇವೆ ಅಷ್ಟೇ. ನಮಗೆ ಸಿಗುವ ಪ್ರತಿ ಅವಕಾಶವೂ ದೊಡ್ಡದು. ಕಲಾಸೇವೆ ಮಾಡುವುದರಲ್ಲಿಯೇ ತುಂಬಾ ತೃಪ್ತಿ ಇದೆ.
-ಮೇಘನಾ, ಭೂಮಿಕಾ(ಯಕ್ಷ ಸಹೋದರಿಯರು)

- ಶ್ರೀರಾಜ್‌ ಎಸ್‌ ಆಚಾರ್ಯ, ವಕ್ವಾಡಿ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-congress

Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್‌ರಾಜ್‌ ಮೌರ್ಯ

7

Kundapur: ಬೈಕ್‌ ಢಿಕ್ಕಿ; ಸ್ಕೂಟರ್‌ ಸವಾರೆಗೆ ಗಾಯ

1-wewewe

Congress;ಪ್ರತಾಪ್‌ಚಂದ್ರ ಶೆಟ್ಟಿ-ಜೆ.ಪಿ.ಹೆಗ್ಡೆ ಭೇಟಿ: ಕಾರ್ಯತಂತ್ರದ ಸಮಾಲೋಚನೆ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

suicide

ಕಾಶ್ಮೀರದಲ್ಲಿ ಗುಂಡು ಹಾರಿಸಿ ಬಿಹಾರ ಕಾರ್ಮಿಕನ ಹತ್ಯೆ  

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.