ನೆಟ್‌ವರ್ಕ್‌ ಸಮಸ್ಯೆಗೆ ಪರಿಹಾರ ಕಂಡುಕೊಂಡ ಹಳ್ಳಿಹೊಳೆ ಗ್ರಾಮಸ್ಥರು


Team Udayavani, May 21, 2021, 5:20 AM IST

ನೆಟ್‌ವರ್ಕ್‌ ಸಮಸ್ಯೆಗೆ ಪರಿಹಾರ ಕಂಡುಕೊಂಡ ಹಳ್ಳಿಹೊಳೆ ಗ್ರಾಮಸ್ಥರು

ಕುಂದಾಪುರ: ನೆಟ್‌ವರ್ಕ್‌ ಸಮಸ್ಯೆಯನ್ನು ಎದುರಿಸುತ್ತಿರುವ ಪ್ರಮುಖ ಊರು ಗಳಲ್ಲಿ ಹಳ್ಳಿಹೊಳೆ ಮೊದಲ ಸ್ಥಾನದಲ್ಲಿದ್ದು, ಇಲ್ಲಿ ನೆಟ್‌ವರ್ಕ್‌ಗಾಗಿ ಜನ ಆ ಊರು ಬಿಟ್ಟು, ಬೇರೆ ಊರಿಗೆ ಬರಬೇಕಾದ ಸ್ಥಿತಿಯಿದೆ. ಆನ್‌ಲೈನ್‌ ತರಗತಿ, ವರ್ಕ್‌ ಫ್ರಂ ಹೋಂನವರು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದರು. ಆದರೆ ಈಗ ಆ ಸಮಸ್ಯೆಗೆ ಊರವರೇ ಪರಿಹಾರ ಕಂಡುಕೊಂಡಿದ್ದಾರೆ.

ಬಿಎಸ್ಸೆನ್ನೆಲ್‌ನವರ ಸಹ ಕಾರದೊಂದಿಗೆ 10-12 ಮಂದಿ ಉತ್ಸಾಹಿ ಯುವಕರ ತಂಡ ಹಾಗೂ ಊರ ಪ್ರಮುಖರ ನೆರವಿನೊಂದಿಗೆ ಬಿಎಸ್ಸೆನ್ನೆಲ್‌ ಅಧೀನದ ಏರ್‌ ಫೈಬರ್‌ ಸಿಸ್ಟಂ ಅನ್ನು ಅಳವಡಿಸಿಕೊಳ್ಳುವ ಮೂಲಕ ಹಳ್ಳಿಹೊಳೆ ಗ್ರಾಮಸ್ಥರು ನೆಟ್‌ವರ್ಕ್‌ ಸಮಸ್ಯೆಗೆ ಪರಿಹಾರವನ್ನು  ಕಂಡುಕೊಂಡಿದ್ದಾರೆ.  ಇದರಿಂದಾಗಿ  ವರ್ಕ್‌ ಫ್ರಂ ಹೋಂ, ಆನ್‌ಲೈನ್‌ ತರಗತಿಯಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಬಹಳಷ್ಟು ಪ್ರಯೋಜನವಾಗುತ್ತಿದೆ.

ಎಲ್ಲೆಲ್ಲ ಅಳವಡಿಕೆ :

ಈಗಾಗಲೇ ಹಳ್ಳಿಹೊಳೆಯ 23 ಮನೆಗಳು ಈ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದು, ಇದರಿಂದ 100ಕ್ಕೂ ಮಿಕ್ಕಿ ಮಂದಿ ಪ್ರಯೋಜನ ಪಡೆಯುತ್ತಿದ್ದಾರೆ. ಪ್ರಮುಖವಾಗಿ ಗ್ರಾಮದ ಚಕ್ರಾ ಮೈದಾನ,  ದೇವರಬಾಳು, ಕಮ್ಮರಪಾಲು, ಹಳ್ಳಿಬೈಲು ಊರುಗಳಲ್ಲಿ  ಅಳವಡಿಸಲಾಗಿದೆ. ಅನೇಕ ಮಂದಿ ಬೇಡಿಕೆ ಸಲ್ಲಿಸಿದ್ದು, ಹಂತ-ಹಂತವಾಗಿ ಅಳವಡಿಕೆ ಪ್ರಕ್ರಿಯೆ ನಡೆಯುತ್ತಿದೆ.

ಕಾರ್ಯ ಹೇಗೆ? :

ಕೇಂದ್ರ ಸರಕಾರ ಭಾರತ್‌ ಏರ್‌ ಫೈಬರ್‌ ಮೂಲಕ ಹೈಸ್ಪೀಡ್‌ ನೆಟ್‌ವರ್ಕ್‌ ಸಂಪರ್ಕ ಪಡೆಯುವ ವ್ಯವಸ್ಥೆಯನ್ನು  ಜಾರಿಗೊಳಿಸಿದೆ. ಏರ್‌ನೆಟ್‌ ವರ್ಕ್‌ ಅಂದರೆ ಅದಕ್ಕೆ ಕೇಬಲ್‌, ಬ್ರಾಡ್‌ ಬ್ಯಾಂಡ್‌, ಒಎಫ್‌ಸಿ ಇಲ್ಲದ ಸಂಪರ್ಕ. ಲೈನ್‌ಆಫ್‌ ಸೈಟ್‌ ಕಾನ್ಸೆಫ್ಟ್‌ ಮೂಲಕ ಸಂಪರ್ಕ  ಪಡೆಯುವ ವಿಧಾನವಿದು. ಕರೆಂಟ್‌ ಹೋದರೂ ಯುಪಿಎಸ್‌ನಿಂದಾಗಿ ಸಮಸ್ಯೆಯಾಗುವುದಿಲ್ಲ.

ಅನೇಕರ ಸಹಕಾರ :

ಏರ್‌ಫೈಬರ್‌ ಅಳವಡಿಕೆಗೆ ಬೇಕಾದಷ್ಟು ಗ್ರಾಹಕರಲ್ಲಿ ಹಣಕಾಸಿನ  ಸಮಸ್ಯೆ ಇದ್ದುದರಿಂದ  ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದವರು ಪ್ರಮುಖವಾಗಿ ಆರ್ಥಿಕ ನೆರವು ನೀಡಿದ್ದು, ಇವರಲ್ಲದೆ ಊರ ಪ್ರಮುಖರಾದ ಕೃಷ್ಣಾನಂದ ಚಾತ್ರ, ಹಳ್ಳಿಹೊಳೆ ಗ್ರಾ.ಪಂ. ಮಾಜಿ ಸದಸ್ಯ ದಿನೇಶ್‌ ಯಡಿಯಾಳ, ಶಿವರಾಮ ಪೂಜಾರಿ, ಮುರಳಿ ಎಡಿಯಾಳ, ಟೆಕ್ನೀಶಿಯನ್‌ ಜಗದೀಶ್‌, ಶ್ರೀಹರ್ಷ ಯಡಿಯಾಳ ಏರ್‌ಫೈಬರ್‌ ಅಳವಡಿಕೆಗೆ ಸಹಕರಿಸಿದ್ದಾರೆ.

ಉದಯವಾಣಿ ವರದಿ :

ಹಳ್ಳಿಹೊಳೆ ಗ್ರಾಮ ವ್ಯಾಪ್ತಿಯಲ್ಲಿ ನೆಟ್‌ವರ್ಕ್‌ ಸಮಸ್ಯೆ ಇರುವ ಬಗ್ಗೆ, ಬಿಎಸ್ಸೆನ್ನೆಲ್‌ ಟವರ್‌ಗೆ ವಿದ್ಯುತ್‌ ಸಮಸ್ಯೆ, ನಿರ್ವಹಣೆ ಬಗ್ಗೆ ಉದಯವಾಣಿಯು ಅನೇಕ ಬಾರಿ ವಿಶೇಷ ವರದಿಯನ್ನು ಪ್ರಕಟಿಸಿತ್ತು.

ಉಡುಪಿ: ಪ್ರಥಮ ಪ್ರಯೋಗ :

ಈ ಏರ್‌ ಫೈಬರ್‌ ಸಿಸ್ಟಂ ಅನ್ನು  ರಾಜ್ಯದಲ್ಲಿ ಈ ವರೆಗೆ ಸುಳ್ಯದ ದೊಡ್ಡತೋಟ, ಕಮಿಲ, ಮಡಿಕೇರಿಯಲ್ಲಿ ಅಳವಡಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿಯೇ ಹಳ್ಳಿಹೊಳೆಯಲ್ಲಿ ಮೊದಲ ಬಾರಿಗೆ ಅಳವಡಿಸಿಕೊಳ್ಳಲಾಗಿದೆ. ಒಟ್ಟಾರೆ ರಾಜ್ಯದಲ್ಲಿ ಈ ಏರ್‌ಫೈಬರ್‌ ವ್ಯವಸ್ಥೆಯನ್ನು ಅಳವಡಿಸಿಕೊಂಡ 4ನೇ ಪ್ರದೇಶವಾಗಿದೆ.

ನಾನು ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದು, ಒಂದು ವರ್ಷದಿಂದ ಮನೆಯಲ್ಲಿದ್ದೇನೆ. ನೆಟ್‌ವರ್ಕ್‌ಗಾಗಿ ಕಮಲಶಿಲೆಯಲ್ಲಿ ಬಾಡಿಗೆ ರೂಂ ಮಾಡಿಕೊಂಡು ಅಥವಾ ದೇವಸ್ಥಾನದ ಬಳಿ, ಟವರ್‌ ಬಳಿ ಕುಳಿತು ಕೆಲಸ ಮಾಡುವಂತಹ ಪರಿಸ್ಥಿತಿಯಿತ್ತು. ಅದಕ್ಕಾಗಿ ನಾವು 10-12 ಮಂದಿ ಯುವಕರು,  ಕೆಲವು ಪ್ರಮುಖರ ಸಹಕಾರದೊಂದಿಗೆ ಏರ್‌ ಫೈಬರ್‌ ಅಳವಡಿಸಲು ಮುಂದಾದೆವು. ಈಗ ಉತ್ತಮ ನೆಟ್‌ವರ್ಕ್‌ ಸಿಗುತ್ತಿದೆ. ನಿತಿನ್‌ ಚಾತ್ರ ಹಳ್ಳಿಹೊಳೆ

ನೆಟ್‌ವರ್ಕ್‌ ಸಿಗದಿರುವ ಮನೆಗೆ ಇದರ ಆ್ಯಂಟೆನಾವನ್ನು ಅಳವಡಿಸಲಾಗುತ್ತಿದ್ದು, ಆ್ಯಂಟೆನಾಗೆ ಟವರ್‌ ಕಾಣುವಂತೆ ಇರಬೇಕು. ಅದರಿಂದ ಆ ಮನೆಗೆ ನೆಟ್‌ವರ್ಕ್‌ ಸಂಪರ್ಕ ಸಿಗುತ್ತದೆ. ಮನೆಯ ಎಷ್ಟು ಜನ ಬೇಕಾದರೂ ನೆಟ್‌ವರ್ಕ್‌ ಬಳಸಬಹುದು. ಅಕ್ಕ- ಪಕ್ಕದ ಮನೆಯವರು ಸಹ ಬಳಸಬಹುದು. ಒಂದು ಆ್ಯಂಟೆನಾದ ವ್ಯಾಪ್ತಿ  5 ಕಿ.ಮೀ. ಸುಧೀರ್‌ ರಾವ್‌, ಪೃಥ್ವೀಶ್‌ ಚಾತ್ರ, ಟೆಲಿಕಾಂ ಪ್ರೊಫೆಶನಲ್‌ ಫೀಲ್ಡ್‌

ಟಾಪ್ ನ್ಯೂಸ್

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

jaಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ

ಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.