ಬೆಳೆದ ತರಕಾರಿಗೆ ಬೇಡಿಕೆಯೂ ಇಲ್ಲ, ಬೆಲೆಯೂ ಇಲ್ಲ


Team Udayavani, May 6, 2021, 5:00 AM IST

ಬೆಳೆದ ತರಕಾರಿಗೆ ಬೇಡಿಕೆಯೂ ಇಲ್ಲ, ಬೆಲೆಯೂ ಇಲ್ಲ

ಕುಂದಾಪುರ:  ಗದ್ದೆಯಲ್ಲಿ ಟನ್‌ಗಟ್ಟಲೆ ತರಕಾರಿ ಬೆಳೆದಿದ್ದೇವೆ. ನಗರದ  ಅಂಗಡಿಗಳಿಗೆ ಹೋಗಿ ಕೊಡಲು ಬಸ್‌ ವ್ಯವಸ್ಥೆಯಿಲ್ಲ. ಬಾಡಿಗೆ ಮಾಡಿಕೊಂಡು ಹೋದರೆ ಸಿಗುವ ಹಣ ಪೂರ್ತಿ ಅದಕ್ಕೆ  ಆಗುತ್ತದೆ. ವಾರದ ಸಂತೆಯೂ ನಡೆಯು ತ್ತಿಲ್ಲ. ಊರಲ್ಲಿ ವ್ಯಾಪಾರವಿಲ್ಲ. ನಾವು ಈ ಬಾರಿ ಎಪ್ರಿಲ್‌- ಮೇನಲ್ಲಿ ತುಂಬಾ ಶುಭ ಸಮಾರಂಭಗಳಿವೆ ಎಂದುಕೊಂಡು ಸಾಕಷ್ಟು ತರಕಾರಿ ಬೆಳೆಸಿದ್ದೇವೆ. ಆದರೆ ಬೆಳೆದ ತರಕಾರಿಗೆ ಈಗ ಬೇಡಿಕೆಯೂ ಇಲ್ಲ; ಬೆಲೆಯೂ ಇಲ್ಲದಂತಾಗಿದೆ..

ಇದು ಹಕ್ಲಾಡಿ ಕುಂದಬಾರಂದಾಡಿ ಗ್ರಾಮದಲ್ಲಿರುವ 10ಕ್ಕೂ ಹೆಚ್ಚು ಮಂದಿ ರೈತರು “ಉದಯವಾಣಿ’ ಜತೆ ತಮ್ಮ ಸಂಕಟವನ್ನು ತೋಡಿಕೊಂಡರು.

ಇಲ್ಲಿ ಅನೇಕ ಮಂದಿ ರೈತರು ಎಕರೆಗಟ್ಟಲೆ ಗದ್ದೆಗಳಲ್ಲಿ ಸೌತೆಕಾಯಿ, ಬೆಂಡೆಕಾಯಿ, ತೊಂಡೆಕಾಯಿ, ಅಲಸಂಡೆ, ಬದನೆ, ಸೇರಿದಂತೆ ಅನೇಕ ವಿಧದ ತರಕಾರಿಗಳನ್ನು ಬೆಳೆಸಿದ್ದರು. ಆದರೆ ಈಗ ಜನತಾ ಕರ್ಫ್ಯೂನಿಂದಾಗಿ ತರಕಾರಿಯನ್ನು ಮಾರುಕಟ್ಟೆಗೂ  ತರಲಾಗದೇ, ಅಂಗಡಿಗಳಿಗೂ ಮಾರಾಟ ಮಾಡಲಾಗದೇ ತೊಂದರೆ ಅನುಭವಿಸುವಂತಾಗಿದೆ.

ಸೀಸನ್‌ನಲ್ಲೇ ಸಮಸ್ಯೆ :  ಕಳೆದ ವರ್ಷ ಕೋವಿಡ್, ಲಾಕ್‌ಡೌನ್‌ನಿಂದಾಗಿ ಸಂಪೂರ್ಣ ನಷ್ಟ ಅನುಭವಿಸಿದ್ದ ರೈತರು, ಈ ಬಾರಿಯಾದರೂ ಆ ನಷ್ಟವನ್ನು ತುಂಬಬಹುದು ಎಂದು ನಂಬಿ ಕೊಂಡು, ಸಾಕಷ್ಟು ತರಕಾರಿ ಬೆಳೆಸಿದ್ದರು. ಅದರಲ್ಲೂ ಫೆಬ್ರವರಿ, ಮಾರ್ಚ್‌ನಲ್ಲಿ ಮೌಡ್ಯವಿದ್ದುದ್ದರಿಂದ,  ಎಪ್ರಿಲ್‌- ಮೇ ಸೀಸನ್‌ನಲ್ಲಿ ತುಂಬಾ ಮದುವೆ, ಗೃಹ ಪ್ರವೇಶ ಸಹಿತ ಅನೇಕ ಸಮಾರಂಭಗಳು ನಿಗದಿಯಾಗಿದ್ದವು. ಇದರಿಂದ ಈ ಬಾರಿಯ ಸೀಸನ್‌ ಉತ್ತಮ ಲಾಭ ತರ ಬಹುದು ಎಂದು ಕಾಯುತ್ತಿದ್ದ ರೈತರಿಗೆ ಮತ್ತೆ ಕೊರೊನಾ ಎರಡನೇ ಅಲೆ ಬರಸಿಡಿಲಿನಂತೆ ಬಂದೆರಗಿದೆ.

ನಾವು ಸುಮಾರು ಒಂದು ಎಕರೆ ಗದ್ದೆಯಲ್ಲಿ ಸೌತೆಕಾಯಿ ಬೆಳೆಸಿದ್ದೇವೆ. ಇದಕ್ಕೆ ಸುಮಾರು 25 ಸಾವಿರ ರೂ. ಖರ್ಚಾಗಿದೆ. ಆದರೆ ಈಗ ಕೇಳಿದರೆ ಯಾರಿಗೂ ಬೇಡ. ಅಂಗಡಿಗಳಲ್ಲಿ ಕೆ.ಜಿ.ಗೆ 3 ರೂ. ಕೊಡುತ್ತಾರೆ. ಕನಿಷ್ಠ 7-8 ರೂ. ಆದರೂ ಸಿಗದಿದ್ದರೆ ಹೇಗೆ ? ಅದರಲ್ಲೂ ರೋಗದಿಂದಲೂ ಸಾಕಷ್ಟು ಹಾಳಾಗಿದೆ. ಕಳೆದೆರಡು ವರ್ಷಗಳಿಂದ ತರಕಾರಿ ಬೆಳೆದರೂ ಬೇಡಿಕೆ ಹಾಗೂ ಬೆಲೆಯಿಲ್ಲದೆ ಭಾರೀ ನಷ್ಟ ಅನುಭವಿಸುವಂತಾಗಿದೆ ಎನ್ನುತ್ತಾರೆ ಕುಂದಬಾರಂದಾಡಿಯ  ಕೃಷಿಕ ಶಿಶಿರ್‌.

ಜನತಾ ಕರ್ಫ್ಯೂನಿಂದಾಗಿ ತರಕಾರಿ ಬೆಳೆದ ರೈತರಿಗೆ ಸಮಸ್ಯೆಯಾಗುತ್ತಿರುವ ಬಗ್ಗೆ ಅರಿವಿದ್ದು, ಅದಕ್ಕಾಗಿ ತರಕಾರಿ ಮಾರಾಟದ ಸಮಯವನ್ನು ಬದಲಾಯಿಸಲಾಗಿದೆ.  ಇಲ್ಲಿಯ ರೈತರು ಬೆಳೆದ ತರಕಾರಿಗಳನ್ನು ತೋಟಗಾರಿಕೆ ಇಲಾಖೆಯ ಅಧೀನದ ಹಾಪ್‌ಕಾಮ್ಸ್‌ ಮೂಲಕ ಖರೀದಿಸುವ ಪ್ರಯತ್ನ ಮಾಡಲಾಗುವುದು.   –ಸಂಜೀವ ನಾಯ್ಕ,ಹಿರಿಯ ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಕುಂದಾಪುರ

ಈಗ ಲಾಕ್‌ಡೌನ್‌ ಆಗಿರುವುದರಿಂದ ನಾವು ಬೆಳೆದ ತರಕಾರಿ ಯಾರಿಗೂ ಬೇಡ. ವಾರಕ್ಕೆರಡು ಸಲ ತೊಂಡೆಕಾಯಿ ಕೊಯ್ಯಬೇಕು. ಆದರೆ ಕೊಂಡು ಹೋಗಲು ಬಸ್ಸಿಲ್ಲ. ರಿಕ್ಷಾ ಬಾಡಿಗೆ ಮಾಡಿಕೊಂಡು ಹೋದರೆ ಅದಕ್ಕೆ 300 ರೂ. ಕೊಡಬೇಕು. ನಾವು ತರಕಾರಿ ಮಾರಿದಾಗ ಸಿಗುವ ಹಣ ಬಾಡಿಗೆಗೆ ನೀಡಬೇಕಾಗುತ್ತದೆ.  ಬಾಬು ಗಾಣಿಗ ಕುಂದಬಾರಂದಾಡಿ, ಕೃಷಿಕ

ಟಾಪ್ ನ್ಯೂಸ್

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

jaಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ

ಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ

raKundapura ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

Kundapura ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.