ಸೇನಾಪುರದಲ್ಲಿ “ಡಂಪಿಂಗ್‌ ಯಾರ್ಡ್‌’ಗೆ ವಿರೋಧ

ಸ್ಥಳೀಯರಿಂದ ಹೋರಾಟದ ಎಚ್ಚರಿಕೆ; "ಬೇರೆ ಗ್ರಾಮಗಳ ಕಸ ಇಲ್ಲಿ ಹಾಕುವುದು ಬೇಡ' ಎಂಬ ಆಗ್ರಹ

Team Udayavani, Oct 2, 2020, 2:25 AM IST

KUDಸೇನಾಪುರದಲ್ಲಿ “ಡಂಪಿಂಗ್‌ ಯಾರ್ಡ್‌’ಗೆ ವಿರೋಧ

ಸೇನಾಪುರ: ಡಂಪಿಂಗ್‌ ಯಾರ್ಡ್‌ಗೆ ಪ್ರಸ್ತಾವಿತ ಜಾಗದಲ್ಲಿ ಸ್ಥಳೀಯರು ಸೇರಿರುವುದು.

ಕುಂದಾಪುರ: ಸೇನಾಪುರ ಗ್ರಾಮದ ದಲಿತ ಕುಟುಂಬಗಳೇ ಹೆಚ್ಚಾಗಿ ರುವ ಅಂಬೇಡ್ಕರ್‌ ನಗರದ ಒಂದು ಎಕರೆ ಪ್ರದೇಶವಿರುವ ಸರಕಾರಿ ಜಾಗದಲ್ಲಿ ಡಂಪಿಂಗ್‌ ಯಾರ್ಡ್‌ ತೆರೆಯಲು ತೆರಮರೆಯ ಸಿದ್ಧತೆಗಳು ನಡೆಯುತ್ತಿದೆ. ಆದರೆ ಇದಕ್ಕೆ ಸ್ಥಳೀಯರಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಯಾವುದೇ ಕಾರಣಕ್ಕೂ ಬೇರೆ ಗ್ರಾಮಗಳ ಕಸ ವಿಲೇವಾರಿ ಮಾಡಲು ಇಲ್ಲಿ ಡಂಪಿಂಗ್‌ ಯಾರ್ಡ್‌ ಮಾಡುವುದು ಬೇಡ ಎನ್ನುವ ಕೂಗು ಇಲ್ಲಿನ ಜನರದ್ದಾಗಿದೆ.

ನಾಡ ಗ್ರಾ.ಪಂ.ನಿಂದ ಇತ್ತೀಚೆಗಷ್ಟೇ ಬೇರ್ಪಟ್ಟು ಈಗ ಹೊಸಾಡು ಪಂಚಾಯತ್‌ಗೆ ಸೇರ್ಪಡೆಗೊಂಡ ಸೇನಾಪುರ ಗ್ರಾಮದ ರೈಲು ನಿಲ್ದಾಣ ಸಮೀಪದ ಅಂಬೇಡ್ಕರ್‌ ನಗರದಲ್ಲಿ 3 ಗ್ರಾ.ಪಂ. ವ್ಯಾಪ್ತಿಯ ಸೇನಾಪುರ ಮಾತ್ರವಲ್ಲದೆ ನಾಡ, ಬಡಾಕೆರೆ, ಹಡವು, ಆಲೂರು, ಹಕ್ಲಾಡಿ ಗ್ರಾಮಗಳ ಕಸ ವಿಲೇವಾರಿ ಮಾಡಲು “ಡಂಪಿಂಗ್‌ ಯಾರ್ಡ್‌’ ತೆರೆಯಲು ಸಿದ್ಧತೆಗಳು ನಡೆಯುತ್ತಿದೆ. ಈಗಾಗಲೇ ಸರ್ವೇ ನಂಬರ್‌ 156 ರಲ್ಲಿ ಜಾಗ ಗುರುತಿಸಿ, ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎನ್ನುವ ಮಾಹಿತಿಯಿದೆ.

ಯಾರು ಹೊಣೆ?
ಸೇನಾಪುರ ಗ್ರಾಮದಲ್ಲಿ ಉತ್ಪತ್ತಿಯಾಗುವ ಕಸ ವಿಲೇವಾರಿ ಮಾಡುವ ಸಲುವಾಗಿ ಇಲ್ಲಿನ ಅಂಬೇಡ್ಕರ್‌ ನಗರದಲ್ಲಿ ಡಂಪಿಂಗ್‌ ಯಾರ್ಡ್‌ ತೆರೆದರೆ ನಮ್ಮ ತಕರಾರಿಲ್ಲ. ಆದರೆ ನಮ್ಮ ಗ್ರಾಮ ಹೊರತುಪಡಿಸಿ ಇತರೆ ಗ್ರಾಮಗಳ ಕಸವನ್ನು ಇಲ್ಲಿ ವಿಲೇವಾರಿ ಮಾಡುವುದು ಎಷ್ಟು ಸರಿ. ಕಸ ಸಮರ್ಪಕ ವಿಲೇವಾರಿಯಾಗದೆ ಗಬ್ಬು ವಾಸನೆ ಬಂದರೆ ಇಡೀ ಊರಿಗೆ ಕೆಟ್ಟ ಹೆಸರು ಬರಬಹುದು. ಪರಿಸರಕ್ಕೂ ಸಾಕಷ್ಟು ಹಾನಿಯಾಗಬಹುದು. ಇಲ್ಲಿನ ಕುಡಿಯುವ ನೀರಿನ ವ್ಯವಸ್ಥೆಗೂ ಸಮಸ್ಯೆಯಾಗಬಹುದು. ಕಸದಿಂದ ಏನಾದರೂ ಸಾಂಕ್ರಾಮಿಕ ರೋಗಗಳು ಹರಡಿದರೆ ಅದಕ್ಕೆ ಯಾರೂ ಹೊಣೆ ಎನ್ನುವುದು ಇಲ್ಲಿನ ಗ್ರಾಮಸ್ಥರ ಪ್ರಶ್ನೆಯಾಗಿದೆ.

ಎಷ್ಟು ಮನೆಗಳಿವೆ?
ಸೇನಾಪುರ ರೈಲು ನಿಲ್ದಾಣ ಪಕ್ಕದಲ್ಲೇ ಇರುವ ಅಂಬೇಡ್ಕರ್‌ ನಗರದಲ್ಲಿ ಈ ಕಸ ವಿಲೇವಾರಿ ಘಟಕ (ಡಂಪಿಂಗ್‌ ಯಾರ್ಡ್‌) ತೆರೆಯಲು ಜಾಗ ಗುರುತಿಸಲಾಗಿದೆ. ಈ ಜಾಗದ ಆಸುಪಾಸಿನಲ್ಲಿ ದಲಿತ ಕುಟುಂಬಗಳೇ ಹೆಚ್ಚಾಗಿದ್ದು, ಸುಮಾರು 50-60 ಮನೆಗಳಿವೆ. ಇನ್ನು ಈ ಜಾಗದ ಸಮೀಪವೇ ಹಕೂರಿಗೂ ತೆರಳುವ ಮಾರ್ಗವಿದೆ. ಅದು ಈ ಜಾಗ ಗೋಮಾಳ ವ್ಯಾಪ್ತಿಯಲ್ಲಿ ಬರುವುದರಿಂದ ಡಂಪಿಂಗ್‌
ಯಾರ್ಡ್‌ಗೆ ಹೇಗೆ ಕೊಡಲಾಗಿದೆ ಎನ್ನುವುದಾಗಿ ಅಂಬೇಡ್ಕರ್‌ ನಗರದ ನಿವಾಸಿ ಶಂಭು ಪ್ರಶ್ನಿಸುತ್ತಾರೆ.

ಹೋರಾಟ ಮಾಡುತ್ತೇವೆ
ಸೇನಾಪುರ ಗ್ರಾಮ ಮಾತ್ರವಲ್ಲದೆ ಇತರೆ ಗ್ರಾಮಗಳ ಕಸ ವಿಲೇವಾರಿ ಮಾಡಲು ಡಂಪಿಂಗ್‌ ಯಾರ್ಡ್‌ ಮಾಡುವುದು ಎಷ್ಟು ಸರಿ. ಅವರವರ ಪಂಚಾಯತ್‌ ವ್ಯಾಪ್ತಿಯಲ್ಲಿ ಬೇಕಾದರೆ ಮಾಡಲಿ. ಗ್ರಾಮದ ನಿವೇಶನ ರಹಿತರಿಗೆ ಭೂಮಿ ಕೊಡಲು ಜಾಗ ಇಲ್ಲಂತ ಹೇಳುತ್ತಾರೆ. ಆದರೆ ಬೇರೆ ಬೇರೆ ಗ್ರಾಮಗಳ ಕಸ ವಿಲೇವಾರಿಗೆ ಡಂಪಿಂಗ್‌ ಯಾರ್ಡ್‌ ತೆರೆಯಲು ಮಾತ್ರ ನಮ್ಮ ಗ್ರಾಮದಲ್ಲಿ ಜಾಗವಿದೆ. ನಾವು ಇಲ್ಲಿ ಬೇರೆ ಗ್ರಾಮಗಳ ಡಂಪಿಂಗ್‌ ಯಾರ್ಡ್‌ ತೆರೆಯಲು ಬಿಡುವುದಿಲ್ಲ. ಇಲ್ಲಿನವರು ಮಾತ್ರವಲ್ಲದೆ ಗ್ರಾಮಸ್ಥರೆಲ್ಲ ಸೇರಿ ಹೋರಾಟ ಮಾಡುತ್ತೇವೆ.
– ಅಣ್ಣಪ್ಪ ಪೂಜಾರಿ ಗುಡ್ಡಮ್ಮಾಡಿ, ಗ್ರಾ.ಪಂ. ಮಾಜಿ ಸದಸ್ಯರು

ಪ್ರಸ್ತಾವನೆ ಸಲ್ಲಿಕೆ
3 ಗ್ರಾ.ಪಂ.ಗಳನ್ನು ಒಳಗೊಂಡು ಸೇನಾಪುರದಲ್ಲಿ ಕಸದ ಡಂಪಿಂಗ್‌ ಯಾರ್ಡ್‌ ತೆರೆಯುವ ಸಂಬಂಧ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲಿನ ಸ್ಥಳೀಯರ ಆಕ್ಷೇಪಣೆಗಳಿದ್ದಲ್ಲಿ ಪರಿಶೀಲಿಸಲಾಗುವುದು.
– ಆನಂದಪ್ಪ ನಾಯ್ಕ, ಕುಂದಾಪುರ ತಹಶೀಲ್ದಾರ್‌

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.