ಪಾರ್ಕಿಂಗ್‌ ತಾಣಕ್ಕೆ ಹೋಗಲು ತೆಪ್ಪ ಬೇಕು!


Team Udayavani, Apr 9, 2021, 6:20 AM IST

ಪಾರ್ಕಿಂಗ್‌ ತಾಣಕ್ಕೆ ಹೋಗಲು ತೆಪ್ಪ ಬೇಕು!

ಕುಂದಾಪುರ: ಸಣ್ಣ ನಗರದಲ್ಲಿ ಇರುವ ಪ್ರದೇಶದಲ್ಲಿ ಮಾಡಲಾದ ವ್ಯವಸ್ಥೆಯೊಂದು ಅವೈಜ್ಞಾನಿಕ ಯೋಜನೆಯಿಂದಾಗಿ ಇದ್ದರೂ ಪ್ರಯೋಜನಕ್ಕಿಲ್ಲದ ಸ್ಥಿತಿ. ಕಣ್ಣಿಗೆ ಕಂಡರೂ ಅಲ್ಲಿಗೆ ವಾಹನ ಕೊಂಡೊಯ್ಯಲು ತೆಪ್ಪ ಅಥವಾ ದೋಣಿ ಬೇಕು!.

-ಇದು ಕುಂದಾಪುರ ಪುರಸಭೆ ಎದುರಿನ ಯೋಜನಾ ಪ್ರಾಧಿಕಾರ, ಎಸ್‌ಬಿಐ ಇರುವ ಕಟ್ಟಡದಲ್ಲಿನ ಪಾರ್ಕಿಂಗ್‌ಗೆಂದೇ ಮೀಸಲಾದ ವಿನ್ಯಾಸಗೊಳಿಸಲಾಗಿರುವ ನೆಲ ಮಹಡಿಯ ಸ್ಥಿತಿ.

ಅದ್ಯಾವ ಎಂಜಿನಿಯರ್‌ ಇದರ ವಿನ್ಯಾಸಗಾರರೋ ತಿಳಿಯದು. ಮಳೆಗಾಲದಲ್ಲಿ ಪೂರ್ತಿ ನೀರು ತುಂಬಿರುತ್ತದೆ. ರಸ್ತೆಯ ನೀರೆಲ್ಲ ಇದರಲ್ಲಿ ತುಂಬಿ ಕಟ್ಟಡಕ್ಕೇ ಆತಂಕದ ಸ್ಥಿತಿ ಇರುತ್ತದೆ. ಇನ್ನು ಮಳೆಗಾಲ ಮುಗಿದು ಕೆಲವು ಸಮಯದಲ್ಲಿ ನೀರು ಖಾಲಿಯಾದರೂ ಅಲ್ಲಿನ ಗಲೀಜು ಹಾಗೆಯೇ ಇರುತ್ತದೆ. ಮಳೆ ನೀರಿ ನೊಂದಿಗೆ ಬಂದ ಕೆಸರು ಸಹಿತ ಯಾವುದನ್ನೂ ಸರಿ ಯಾಗಿ ತೆಗೆದಿರುವುದಿಲ್ಲ. ಆದುದರಿಂದ ಅನಂತರವೂ ಇಲ್ಲಿ ವಾಹನಗಳ ನಿಲುಗಡೆಗೆ ಯಾವ ವಾಹನ ಮಾಲಕರೂ ಮನಸ್ಸು ಮಾಡುವುದಿಲ್ಲ. ಹಾಗಾಗಿ ಬೇಸಗೆ, ಮಳೆಗಾಲ ಎನ್ನದೇ ಇಲ್ಲಿ ವಾಹನಗಳಂತೂ ನಿಲ್ಲುವುದಿಲ್ಲ. ಒಟ್ಟಿನಲ್ಲಿ ಇದು ನಿಷ್ಕಲವಾಗಿದೆ.

ನಕ್ಷೆಯಲ್ಲಿ ಮಾತ್ರ! :

ಇತರ ಹೆಚ್ಚಿನ ಕಡೆಗಳಂತೆ ಇಲ್ಲಿಯದ್ದೂ ಇದೇ ಸ್ಥಿತಿ. ಹೊಸದಾಗಿ ಕಟ್ಟಡ ನಿರ್ಮಿಸುವಾಗ ಅನುಮತಿ ಪಡೆಯುವ ಸಂದರ್ಭ ನಕ್ಷೆಯಲ್ಲಿ ಪಾರ್ಕಿಂಗ್‌ ಜಾಗವನ್ನು ತೋರಿಸಲಾಗುತ್ತದೆ. ದೊಡ್ಡ ಕಟ್ಟಡಗಳಾದರೆ ನೆಲಮಹಡಿಯನ್ನು ಪಾರ್ಕಿಂಗ್‌ಗೆ ಎಂದು ನಮೂದಿಸ ಲಾಗುತ್ತದೆ. ಕಟ್ಟಡ ನಿರ್ಮಾಣ ವೇಳೆಯೂ ಆಕ್ಷೇಪ ಬರದಂತೆ ಈ ನೆಲ ಮಹಡಿ ವಾಹನಗಳ ಪಾರ್ಕಿಂಗ್‌ಗೇ ಇರುತ್ತದೆ. ಆದರೆ ವರ್ಷವಾಗುತ್ತಾ ಬರುತ್ತಿದ್ದಂತೆ ಅದರಲ್ಲಿ ಅಂಗಡಿ ಮಳಿಗೆ ಮಾಡಿ ಬಾಡಿಗೆಗೆ ನೀಡಲಾಗುತ್ತದೆ. ಗ್ರಾಹಕರ ವಾಹನಗಳೆಲ್ಲ ಯಥಾ ಪ್ರಕಾರ ರಸ್ತೆಗೆ ತಾಗಿಕೊಂಡೇ ನಿಲ್ಲಬೇಕಾದ ಸ್ಥಿತಿ.

ಮಾಲಕರೇ ಗ್ರಾಹಕರು! :

ಗ್ರಾಹಕರೇ ಮಾಲಕರು ಎಂಬುದು ವ್ಯಾಪಾರಿ ವಲಯದ ಮಾತು. ಆದರೆ ಪಾರ್ಕಿಂಗ್‌ ವಿಷಯಕ್ಕೆ ಬಂದಾಗ ಮಾತ್ರ ಇದು ಇಲ್ಲಿ ಉಲ್ಟಾ!. ಗ್ರಾಹಕರು ವಾಹನ ಪಾರ್ಕ್‌ ಮಾಡುವ ಸ್ಥಳದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೂ ಮಾಲಕರ ವಾಹನವೇ ನಿಂತಿರುತ್ತದೆ. ಅಂಗಡಿಗೆಂದು ಬರುವ ಗ್ರಾಹಕ ಎಲ್ಲೆಲ್ಲೋ ವಾಹನ ಇಟ್ಟು ಅಂಗಡಿಗೆ ನಡೆದು ಬಂದು, ಸಾಮಗ್ರಿ ಹೊತ್ತು ಸಾಗುವ ಪರಿಸ್ಥಿತಿ ಇದೆ.

ಅವಕಾಶ ಮಾಡಿದರೂ…

ಪಾರ್ಕಿಂಗ್‌ ಸಮಸ್ಯೆ ಆಗದಂತೆ ಪುರಸಭೆ ಕೆಲವು ಉಪಕ್ರಮಗಳನ್ನೂ ಮಾಡಿದೆ. ಇಲ್ಲವೆಂದಲ್ಲ. ಇರುವ ರಸ್ತೆಯನ್ನು ಅಗಲಪಡಿಸಲಾಗದು. ಇದ್ದ ವ್ಯವಸ್ಥೆಯಲ್ಲೇ ಸಣ್ಣಪುಟ್ಟ ಮಾರ್ಪಾಡು ಮಾಡಿ ಪಾರ್ಕಿಂಗ್‌ಗೆ ಅವಕಾಶ ನೀಡಿದೆ. ಶಾಸ್ತ್ರಿ ಸರ್ಕಲ್‌ ಬಳಿ ಇಂಟರ್‌ಲಾಕ್‌ ಹಾಕಿ ರಿಕ್ಷಾ ತಂಗುದಾಣ ಹಾಗೂ ಇಂದಿರಾ ಕ್ಯಾಂಟೀನ್‌ ಬಳಿ ಬೈಕ್‌ ನಿಲ್ಲಿಸಲು ಅನುವು ಮಾಡಲಾಗಿದೆ. ಶಾಸ್ತ್ರಿ ಸರ್ಕಲ್‌ನಿಂದ ಚರ್ಚ್‌ರೋಡ್‌ವರೆಗೆ ಇಂಟರ್‌ಲಾಕ್‌ ಹಾಕಿ ವಾಹನ ನಿಲ್ಲಿಸಲು ವ್ಯವಸ್ಥೆ ಮಾಡಲಾಗಿದೆ. ಕೋರ್ಟ್‌ ಬಳಿ, ಕೋರ್ಟ್‌ ಕ್ಯಾಂಟೀನ್‌ ಬಳಿಯೂ ಇದೇ ಮಾದರಿಯಲ್ಲಿ ಇಂಟರ್‌ಲಾಕ್‌ ಹಾಕಲಾಗಿದೆ. ಚಿಕ್ಕನ್‌ ಸಾಲ್‌ ರಸ್ತೆಯ ಪನ್ನೀರ್‌ ಜುವೆಲರ್‌ ಬಳಿ, ಚರ್ಚ್‌ರೋಡ್‌ ಬಳಿ, ಪಾರಿಜಾತ ಸರ್ಕಲ್‌ ಬಳಿ ವಿದ್ಯುತ್‌ ಕಂಬ, ಟ್ರಾನ್ಸ್‌ಫಾರ್ಮರ್‌ ತೆರವುಗೊಳಿಸಿ ರಸ್ತೆ ವಿಸ್ತ ರಿಸಲಾಗಿದೆ. ಆದರೆ ಈಗಿನ ವಾಹನಗಳ ಸಂಖ್ಯೆಗೆ ಇದು ಸಾಕಾಗುತ್ತಿಲ್ಲ. ಮಾತ್ರವಲ್ಲದೆ ಇಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ನಿಲ್ಲಿಸುವುದರಿಂದ  ಸಮಸ್ಯೆ ಇನ್ನೂ ಸಮಸ್ಯೆಯಾಗಿಯೇ ಉಳಿದಿದೆ.

ವಾಹನದಟ್ಟಣೆ :

ಕುಂದಾಪುರ ಭಾಗಗಳಿಂದ ನೋಂದಣಿಯಾದ ವಾಹನಗಳಿಂದ ಪ್ರತಿ ವರ್ಷ 20 ಕೋ.ರೂ.ಗಿಂತ ಅಧಿಕ ತೆರಿಗೆ (ರಾಜಸ್ವ) ಸಂಗ್ರಹವಾಗುತ್ತದೆ. ಇಲ್ಲಿ ಈವರೆಗೆ 65 ಸಾವಿರಕ್ಕೂ ಅಧಿಕ ವಾಹನ ನೋಂದಣಿಯಾಗಿ ಉಪಯೋಗದಲ್ಲಿದೆ. ಕುಂದಾಪುರ ಭಾಗದ 28 ಸಾವಿರಕ್ಕೂ ಅಧಿಕ ಮಂದಿಗೆ ಚಾಲನೆ ಪರವಾನಿಗೆ ನೀಡಲಾಗಿದೆ. ಇಷ್ಟಲ್ಲದೆ ಇತರೆಡೆಯಿಂದ ಬರುವ ವಾಣಿಜ್ಯ, ಖಾಸಗಿ ಹಾಗೂ ಸಾರ್ವ ಜನಿಕ ವಾಹನಗಳು. ಕೊರೊನಾ ಬಳಿಕ ಖಾಸಗಿ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಸಾರ್ವಜನಿಕ ವಾಹನ ಬಳಸುವವರ ಸಂಖ್ಯೆ ಕಡಿಮೆಯಾಗಿದೆ.

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.