ಆಮಂತ್ರಣ ಕೊಟ್ಟು ಆಧಾರ್ ಪಡೆಯಿರಿ!
Team Udayavani, Apr 23, 2021, 7:00 AM IST
ಕುಂದಾಪುರ: ವಿವಾಹ ಸಮಾರಂಭಕ್ಕೆ ಆಹ್ವಾನಿಸುವಾಗ ಆಹ್ವಾನಪತ್ರಿಕೆ ನೀಡಿ ಮನೆಯವರ ಆಧಾರ್ ಕಾರ್ಡ್ ಕೇಳಬೇಕಾದ ಪರಿಸ್ಥಿತಿ ಬಂದಿದೆ!
ಕೋವಿಡ್ ನಿರ್ಬಂಧಗಳನ್ವಯ ಮದುವೆ ಕಾರ್ಯಕ್ರಮಗಳಿಗೆ ಸಭಾಂಗಣದ ಒಳಗೆ ಹಾಗೂ ಹೊರಾಂಗಣಕ್ಕೆ ಎಂದು ಪ್ರತ್ಯೇಕ ಜನರ ಮಿತಿಯನ್ನು ಸರಕಾರ ನಿಗದಿಪಡಿಸಿದೆ. ಮದುವೆಗೆ ಆಗಮಿಸುವವರಿಗೆ ಪಾಸ್ ಕಡ್ಡಾಯ ಎಂದೂ ತಿಳಿ ಸಿದೆ. ಇದು ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ. ಮದುವೆಯ ಅನುಮತಿಗಾಗಿ ನಿಯೋಜಿತ ಅಧಿಕಾರಿಯ ಬಳಿಗೆ ಹೋಗಬೇಕು. ಮದುವೆಗೆ ಆಗಮಿಸುವ 50 ಮಂದಿಯ ಆಧಾರ್ ಕಾರ್ಡ್ನ್ನು ನೀಡಬೇಕು. ಅದರ ಆಧಾರದಲ್ಲಿ 50 ಪಾಸ್ಗಳನ್ನು ನೀಡಲಾಗುತ್ತದೆ. ಮದುವೆಗೆ ಆಗಮಿಸುವವರು ಪಾಸ್ ತೋರಿಸಿದರಷ್ಟೇ ಪೊಲೀಸರು ಅವಕಾಶ ನೀಡುತ್ತಾರೆ. ಮದುವೆ ಮನೆಗೆ ನೋಡೆಲ್ ಅಧಿಕಾರಿ ಬಂದಾಗ ಪಾಸ್ ರಹಿತರು ಇದ್ದರೆ, ಮಿತಿಗಿಂತ ಹೆಚ್ಚಿನ ಜನ ಇದ್ದರೆ ಕೇಸು ದಾಖಲಿಸಲಾಗುತ್ತದೆ ಎನ್ನುವುದು ಸದ್ಯದ ನಿಯಮ. ಆಮಂತ್ರಣ ಪತ್ರಿಕೆ ನೀಡುವಾಗ ಆಧಾರ್ ಸಂಗ್ರಹಿಸುವ ಸಂಕಷ್ಟ ಒಂದೆಡೆಯಾದರೆ ಸೀಮಿತ ಪಾಸ್ ಪಡೆದು ಆಮಂತ್ರಿತರಿಗೆ ಬರಲು ಸಾಧ್ಯವಾಗದೇ ಇದ್ದಾಗ ಬದಲಿಗೆ ಬೇರೆಯವರೂ ಬರುವಂತಿಲ್ಲ ಎಂಬ ಸಮಸ್ಯೆಯೂ ಇಲ್ಲಿದೆ.
ಪಾಸ್ಗಾಗಿ ಮುಗಿಬಿದ್ದ ಜನತೆ! :
ಈ ರವಿವಾರ ಹಾಗೂ ಇತರ ದಿನ ಅನೇಕ ಮದುವೆಗಳು ನಿಗದಿಯಾಗಿದೆ. ಕಳೆದ 45 ದಿನಗಳಿಂದ ಮದುವೆ ಮೊದಲಾದ ಶುಭ ಸಮಾರಂಭಗಳು ನಡೆಯದ ಕಾರಣ ಎಲ್ಲ ಕಡೆ ಶುಭ ಸಮಾರಂಭಗಳು ನಿಗದಿಯಾಗಿವೆ. ಆದ್ದರಿಂದ ಗುರುವಾರ ಇಲ್ಲಿನ ತಾಲೂಕು ಕಚೇರಿ ಸೇರಿದಂತೆ ಪಾಸ್ ನೀಡಲು ನಿಗದಿಯಾದ ಕಚೇರಿ ಗಳಲ್ಲಿ ಕೊರೊನಾ ನಿರ್ಬಂಧಗಳನ್ನು ಮೀರಿ ಜನಜಂಗುಳಿಯೇ ಸೇರಿತ್ತು.
ಆಧಾರ್ ಬೇಕಾಗಿಲ್ಲ :
ಅನುಮತಿ ಪಡೆಯಲು ಮದುವೆಗೆ ಆಗಮಿಸುವ 50 ಜನರ ಹೆಸರಿನ ಪಟ್ಟಿಯನ್ನಷ್ಟೇ ಸಂಬಂಧಪಟ್ಟ ಅಧಿಕಾರಿಗೆ ನೀಡಬೇಕು. ಅವರಿಗೆ ಪಾಸ್ ನೀಡಲಾಗುವುದು. ಆಧಾರ್ ಕಡ್ಡಾಯ ಅಲ್ಲ. ಸಂಬಂಧಪಟ್ಟ ಅಧಿಕಾರಿಗಳಿಗೆ “ಆಧಾರ್ ಕಡ್ಡಾಯ ಅಲ್ಲ, ಹೆಸರು ಮಾತ್ರ ನೀಡಿದರೆ ಸಾಕು’ ಎಂದು ಸೂಚಿಸಲಾಗುವುದು. – ಜಿ. ಜಗದೀಶ್, ಉಡುಪಿ ಜಿಲ್ಲಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ
Kundapur: ಬೈಕ್ ಢಿಕ್ಕಿ; ಸ್ಕೂಟರ್ ಸವಾರೆಗೆ ಗಾಯ
Congress;ಪ್ರತಾಪ್ಚಂದ್ರ ಶೆಟ್ಟಿ-ಜೆ.ಪಿ.ಹೆಗ್ಡೆ ಭೇಟಿ: ಕಾರ್ಯತಂತ್ರದ ಸಮಾಲೋಚನೆ
ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ
ಕಾಶ್ಮೀರದಲ್ಲಿ ಗುಂಡು ಹಾರಿಸಿ ಬಿಹಾರ ಕಾರ್ಮಿಕನ ಹತ್ಯೆ