ಪ್ಲಾಸ್ಟಿಕ್ ಜಾಗೃತಿ: ಕೋಲ್ಕತಾದಿಂದ ಸೈಕಲ್ ಯಾತ್ರೆ
ದಕ್ಷಿಣ ಭಾರತಕ್ಕೆ ಬಂದು ಲಡಾಕ್ವರೆಗೆ ಒಂಟಿ ಅಭಿಯಾನ
Team Udayavani, Sep 6, 2022, 10:47 AM IST
ಕುಂದಾಪುರ: ಕೋಲ್ಕತಾದ ಹಲ್ದಿ ಎಂಬ ಊರಿನ ಯುವಕ ಪ್ಲಾಸ್ಟಿಕ್ ನಿರ್ಮೂಲನೆಗಾಗಿ ಸೈಕಲ್ನಲ್ಲಿ ಅಭಿಯಾನ ಹೊರಟು ತಿರುಗುತ್ತಿದ್ದಾರೆ.
ಪಶ್ಚಿಮ ಬಂಗಾಲದ ಪುರ್ಬಾ ಮೇದಿನಿ ನಗರದ ಕಾಂಚನನಗರ ಗ್ರಾಮದ ಬಡ ರಿಕ್ಷಾ ಚಾಲಕ ಆಶಿಕ್ ಅವರು ಸ್ವಚ್ಛ ಭಾರತ ಹಾಗೂ ಪ್ಲಾಸ್ಟಿಕ್ ಮುಕ್ತ ಭಾರತಕ್ಕಾಗಿ, ದೇಶದ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡುವ ಸಲುವಾಗಿ ಒಂಟಿಯಾಗಿ ಸೈಕಲ್ ತುಳಿಯುತ್ತಿದ್ದಾರೆ. ಲಡಾಕ್ ಸೇರಿ ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಕರ್ನಾಟಕ ರಾಜ್ಯದ ವಿವಿಧೆಡೆ ಪರ್ಯಟನೆ ಮಾಡಿ ಕುಂದಾಪುರ ಮೂಲಕ ಸಾಗಿದ್ದಾರೆ. ವೃತ್ತಿಯಲ್ಲಿ ಬಟ್ಟೆ ಡಿಸೈನರ್ ಆಗಿದ್ದು ನಮ್ಮ ಊರಿನಲ್ಲಿ ಒಬ್ಬ ವ್ಯಕ್ತಿ ಇದೆ ರೀತಿಯಲ್ಲಿ ಸೈಕಲ್ನಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಅದೇ ನನಗೆ ಪ್ರೇರಣೆ ಎಂದು ಹೇಳಿದರು. ಸಾರ್ವಜನಿಕ ಗಣೇಶೋತ್ಸವ ಪ್ರಸಾದ ಸ್ವೀಕರಿಸಿ, ದೇವರು ಒಬ್ಬರೇ ಎಂಬ ನಂಬಿಕೆ ಇದೆ ಎಂದರು.
ಪ್ಲಾಸ್ಟಿಕ್ ನಿರ್ಮೂಲನೆ ಬಗ್ಗೆ ಸೈಕಲ್ ಸುತ್ತಲೂ ಕಾಗದ ಪ್ರಕಟನೆ ಹಾಕಿದ್ದಾರೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಸೈಕಲ್ಗೆ ರಾಷ್ಟ್ರ ಧ್ವಜ ನೆಟ್ಟಿದ್ದಾರೆ. ದಿನಕ್ಕೆ 30 ಕಿ. ಮೀ. ಹೋಗುತ್ತಾರೆ. ಜನ ಪ್ರೀತಿಯಿಂದ ಏನಾದರೂ ಕೊಟ್ಟರೆ ಸ್ವೀಕರಿಸುತ್ತಾರೆ. ದೇಹ ದಂಡಿಸಿ ಕಠಿನ ಪರಿಶ್ರಮ ಪಟ್ಟು ಅರಿವು ಮೂಡಿಸುವ ಪ್ರಯತ್ನ ಶ್ಲಾಘನೀಯ ಎಂದು ಸಾರ್ವಜನಿಕರು ಅವರನ್ನು ಮಾತನಾಡಿಸುತ್ತಿದ್ದುದು ಕಂಡು ಬಂತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ
DCvsGT; ಪಂತ್ ನಾಯಕತ್ವಕ್ಕೆ ಅಗ್ನಿಪರೀಕ್ಷೆ: ತವರಿನ “ಕೋಟ್ಲಾ’ದಲ್ಲಿ ಗುಜರಾತ್ ಎದುರಾಳಿ
ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?