ಗಂಗೊಳ್ಳಿ : ಯಾಂತ್ರಿಕ ಮೀನುಗಾರಿಕೆ ವಿಳಂಬ ಸಾಧ್ಯತೆ
Team Udayavani, Aug 1, 2021, 3:10 AM IST
ಗಂಗೊಳ್ಳಿ: ಆಳ ಸಮುದ್ರ ಮೀನುಗಾರಿಕೆ ರಜೆ ಜು. 31ಕ್ಕೆ ಕೊನೆ ಗೊಂಡಿದ್ದು, ಆ. 1ರಿಂದ ಕಡಲಿಗಿಳಿ ಯಲು ಅವಕಾಶವಿದ್ದರೂ, ಸಮುದ್ರದಲ್ಲಿ ಪ್ರತಿ ಕೂಲ ಹವಾಮಾನ, ಡೀಸೆಲ್ ಬೆಲೆ ದುಬಾರಿಯಿಂದಾಗಿ ಗಂಗೊಳ್ಳಿಯಲ್ಲಿ ಆಳ ಸಮುದ್ರ ಮೀನುಗಾರಿಕೆ ಇನ್ನು ಕೆಲವು ದಿನ ವಿಳಂಬ ವಾಗಿ ಆರಂಭವಾಗುವ ಸಾಧ್ಯತೆಗಳಿವೆ.
ಗಂಗೊಳ್ಳಿಯಲ್ಲಿ ಆ.3ರ ಬಳಿಕವಷ್ಟೇ ಯಾಂತ್ರಿಕ ಮೀನುಗಾರಿಕೆ ಆರಂಭವಾಗುವ ಸಾಧ್ಯತೆಗಳಿವೆ ಎನ್ನಲಾಗಿದ್ದು, ಈ ಬಗ್ಗೆ ಇನ್ನೂ ಯಾವುದೇ ಅಂತಿಮ ನಿರ್ಧಾರ ಆಗಿಲ್ಲ ಎಂದು ಮೂಲಗಳು ತಿಳಿಸಿವೆ.
ಪ್ರತಿಕೂಲ ಹವಾಮಾನ:
ಭಾರೀ ಮಳೆಯಾಗುತ್ತಿರುವುದರಿಂದ ಸಮುದ್ರದಲ್ಲಿ ಗಾಳಿಯ ವೇಗ ಹಾಗೂ ಅಲೆಗಳ ಅಬ್ಬರ ಬಿರುಸಾಗಿದ್ದು, ಇದು ಮೀನುಗಾರಿಕೆ ಆರಂಭಕ್ಕೆ ತೊಡಕಾಗಿದೆ. ಆ. 3ರ ಬಳಿಕ ಸ್ವಲ್ಪ ಮಟ್ಟಿಗೆ ಕಡಲು ಶಾಂತವಾಗಬಹುದು ಎನ್ನುವ ನಿರೀಕ್ಷೆ ಮೀನುಗಾರರದ್ದಾಗಿದೆ. ಇನ್ನು ಈ ಬಾರಿ ಡೀಸೆಲ್ ದರ ಮತ್ತಷ್ಟು ದುಬಾರಿಯಾಗಿದ್ದು, ಇದು ಮೀನುಗಾರಿಕೆಗೆ ಹೊಡೆತ ಬಿದ್ದಿದೆ.
3ನೇ ಅಲೆ ಭೀತಿ : ಲಸಿಕೆಗೆ ಮನವಿ :
ಆಳ ಸಮುದ್ರ ಮೀನುಗಾರಿಕೆ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಆದರೆ ಮೀನುಗಾರರಿಗೆ ಇನ್ನೂ ಸಹ ಲಸಿಕೆ ನೀಡಿಲ್ಲ. ಮಾಟು ಬಲೆ ದೋಣಿಯೊಂದರಲ್ಲೇ 30 ರಿಂದ 35 ಮೀನುಗಾರರು ಕೆಲಸ ಮಾಡುತ್ತಾರೆ. ಯಾಂತ್ರೀಕೃತ ದೋಣಿ, ಬೋಟು ಸೇರಿದಂತೆ ಸಾವಿರಾರು ಮೀನುಗಾರರು ಬಂದರಿನಲ್ಲಿ ಸೇರುತ್ತಾರೆ. ಕೊರೊನಾ 3ನೇ ಅಲೆಯ ಭೀತಿ ಈಗಲೇ ಆವರಿಸಿದ್ದು, ಈ ಹಿನ್ನೆಲೆಯಲ್ಲಿ ಇನ್ನೇನು ಯಾಂತ್ರಿಕ ಮೀನುಗಾರಿಕಾ ಋತು ಆರಂಭಗೊಳ್ಳಲಿದ್ದು, ಮೀನುಗಾರರಿಗೂ ಆದ್ಯತೆ ನೆಲೆಯಲ್ಲಿ ಲಸಿಕೆಗೆ ಅವಕಾಶ ಕಲ್ಪಿಸಿಕೊಡಬೇಕು. ಈ ಬಗ್ಗೆ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಮೀನುಗಾರಿಕಾ ಇಲಾಖೆ ಗಮನಹರಿಸಬೇಕು ಎನ್ನುವುದಾಗಿ ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿ ಆಗ್ರ ಹಿಸಿದ್ದಾರೆ.
ಗಂಗೊಳ್ಳಿಯಲ್ಲಿ ಬೋಟ್ಗಳು ಕಡಲಿಗಿಳಿಯುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆ.2 ರಂದು ಈ ಬಗ್ಗೆ ಸಭೆ ನಿಗದಿಯಾಗಿದ್ದು, ಅಲ್ಲಿ ಚರ್ಚಿಸಿ ತೀರ್ಮಾನಿಸಲಿದ್ದೇವೆ. ಸಮುದ್ರ ತುಸು ಬಿರು ಸಾಗಿದ್ದು, ಡೀಸೆಲ್ ದರವೂ ದುಬಾರಿಯಾಗಿದೆ. ಹಾಗಾಗಿ ಎಲ್ಲ ಬೋಟ್ಗಳು ಈ ಬಾರಿ ಕಡಲಿಗಿಳಿಯುವುದು ಅನುಮಾನ. – ನಾರಾಯಣ ಖಾರ್ವಿ, ಅಧ್ಯಕ್ಷರು, ಗಂಗೊಳ್ಳಿ ಪರ್ಸಿನ್ ಮೀನುಗಾರರ ಸಹಕಾರಿ ಸಂಘ
ಮೀನುಗಾರರಿಗೂ ಆದ್ಯತೆ ನೆಲೆಯಲ್ಲಿ ಲಸಿಕೆ ನೀಡುವುದು ಅತ್ಯವಶ್ಯಕವಾಗಿದ್ದು, ಈ ಬಗ್ಗೆ ನಾನು ನಮ್ಮ ಇಲಾಖಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಅವರು ಆರೊಗ್ಯ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮಾತನಾಡಿದ್ದಾರೆ. ಆದಷ್ಟು ಬೇಗ ಲಸಿಕೆ ನೀಡುವ ಬಗ್ಗೆ ಕ್ರಮಕೈಗೊಳ್ಳಲಾಗುವುದು. ಆ.2ರಂದು ಮಲ್ಪೆಯಲ್ಲಿ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿದೆ. – ಸುಮಲತಾ, ಸಹಾಯಕ ನಿರ್ದೇಶಕರು, ಮೀನುಗಾರಿಕಾ ಇಲಾಖೆ ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್