ದಾನಿಗಳ ನೆರವಿನೊಂದಿಗೆ ಪ್ರತಿದಿನ ನೀರು ಒದಗಿಸುತ್ತಿರುವ ಗ್ರಾ.ಪಂ.
ವಂಡ್ಸೆ ಗ್ರಾ.ಪಂ.ವ್ಯಾಪ್ತಿಯಲ್ಲಿ ಬರಿದಾದ ಬಾವಿ
Team Udayavani, May 22, 2020, 5:19 AM IST
ವಂಡ್ಸೆ: ವಂಡ್ಸೆ ಗ್ರಾ.ಪಂ. ನೇತೃತ್ವದಲ್ಲಿ ದಾನಿಗಳ ನೆರವಿನೊಂದಿಗೆ ಗ್ರಾಮಸ್ಥರಿಗೆ ಕಳೆದ 10 ದಿನಗಳಿಂದ ಉಚಿತವಾಗಿ ಕುಡಿಯುವ ನೀರಿನ ಪೂರೈಕೆ ಮಾಡಲಾಗುತ್ತಿದೆ. 1 ದಿನಕ್ಕೆ 42,000 ಲೀ. ನೀರು ಸರಬರಾಜು ಇಲ್ಲಿನ ತುರ್ತು ಅಗತ್ಯತೆ ಇರುವ ವಂಡ್ಸೆ ಪೇಟೆ, ಮೂಕಾಂಬಿಕಾ ಕಾಲನಿ, ಉದ್ದಿನಬೆಟ್ಟು, ಆತ್ರಾಡಿ, ಕಲ್ಮಾಡಿ, ಬಳಿಗೇರಿ, ತೆಂಕೊಡ್ಗಿ, ಅಬ್ಬಿ, ಹರವರಿ ಮುಂತಾದೆಡೆ ಪ್ರತಿದಿನ ಪ್ರತಿ ಮನೆಗೆ 200 ಲೀ. ನೀರು ಒದಗಿಸಲಾಗುತ್ತಿದೆ.
ಗ್ರಾಮ ಸಭೆಯಲ್ಲಿ ತೀರ್ಮಾನ
ಮೇ 12ರಂದು ನಡೆದ ವಿಶೇಷ ಗ್ರಾಮ ಸಭೆಯಲ್ಲಿ ಜನರ ನೀರಿನ ಸಮಸ್ಯೆಗೆ ಪರಿಹಾರ ಒದಗಿಸಲು ಉಚಿತ ನೀರು ಸರಬರಾಜು ಮಾಡಲು ತೀರ್ಮಾನ ಕೈಗೊಳ್ಳಲಾಯಿತು. ದಾನಿಗಳ ಸಹಕಾರದಿಂದ ಎದುರಾದ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ.
ಇನ್ನು ಒದಗದ ಸರಕಾರದ ಸವಲತ್ತು
ಸರಕಾರದ ಆದೇಶದಂತೆ ತಹಶೀಲ್ದಾರರ ನೇತೃತ್ವದಲ್ಲಿ ಗುತ್ತಿಗೆ ಆಧಾರ ಮೇಲೆ ನೀರು ಸರಬರಾಜು ಸೌಲಭ್ಯಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಲೀಟರ್ ಮೇಲಿನ ಸರಕಾರದ ದರವು ಗುತ್ತಿಗೆದಾರರಿಗೆ ನಿಭಾಯಿಸುವುದು ಕಷ್ಟ ಸಾಧ್ಯವಾಗಿರುವುದರಿಂದ ಈವರೆಗೆ ಯಾರೂ ಟೆಂಡರ್ ಪಡೆಯಲು ಮುಂದೆ ಬಂದಿಲ್ಲಾ ಹಾಗಾಗಿ ಆ ಯೋಜನೆ ಈವರೆಗೆ ಅನುಷ್ಟಾನ ಗೊಂಡಿಲ್ಲ.
ಬತ್ತಿದ ಬಾವಿ
ಇಲ್ಲಿನ 55 ಮನೆಗಳಲ್ಲಿ ಬಾವಿ ನೀರು ಸಂಪೂರ್ಣ ಬತ್ತಿಹೊಗಿದೆ. ನಲ್ಲಿ ನೀರು ಸಂಪರ್ಕ ಒದಗಿಸಿಲ್ಲ ಹಾಗೆಯೇ 145ನಲ್ಲಿ ಸಂಪರ್ಕವಿದ್ದು, ನೀರು ಬತ್ತಿ ಹೋಗಿರುವುದು ಇನ್ನಷ್ಟು ಸಮಸ್ಯೆಗೆ ಎಡೆಮಾಡಿದೆ. ಈ ಎಲ್ಲ ಸಮಸ್ಯೆಗಳ ನಡುವೆ ಗ್ರಾಮಸ್ಥರಿಗೆ ಕುಡಿಯುವ ನೀರಿನ ಅಭಾವವಾಗದಿರಲು ಸರಕಾರದ ಮುಂದಿನ ನೀರಿನ ವ್ಯವಸ್ಥೆ ವರೆಗೆ ನೀರು ಒದಗಿಸಲಾಗುತ್ತಿದೆ.
ಗ್ರಾಮದಲ್ಲಿ ಬತ್ತಿದ ಬಾವಿ
ಈ ಬಾರಿ ವಂಡ್ಸೆ ಗ್ರಾ.ಪಂ.ವ್ಯಾಪ್ತಿಯಲ್ಲಿ ಎಪ್ರಿಲ್ ತಿಂಗಳಲ್ಲಿ ಬಾವಿಗಳು ಬತ್ತಿ ಹೋಗಿದೆ ಸರಕಾರದಿಂದ ನೀರು ಒದಗಿಸುವಲ್ಲಿ ವಿಳಂಬವಾಗುತ್ತಿದೆ . ಈ ದಿಸೆಯಲ್ಲಿ ದಾನಿಗಳ ನೆರವಿನೊಂದಿಗೆ ದಿನಂಪ್ರತಿ ಗ್ರಾಮಸ್ಥರಿಗೆ ಟ್ಯಾಂಕರ್ ಮೂಲಕ ನೀರು ಒದಗಿಸಲಾಗುತ್ತಿದೆ.
– ಉದಯ ಕುಮಾರ್ ಶೆಟ್ಟಿ,ಅಧ್ಯಕ್ಷ ಗ್ರಾ.ಪಂ.ವಂಡ್ಸೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ
Udupiಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು: ಜಯಪ್ರಕಾಶ್ ಹೆಗ್ಡೆ
Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು
Theft; 13 ರಾಜ್ಯಗಳಿಗೆ ಬೇಕಾಗಿದ್ದ ಕಳ್ಳ ಕೋಟದಲ್ಲಿ ಪೊಲೀಸರ ಬಲೆಗೆ!
MUST WATCH
ಹೊಸ ಸೇರ್ಪಡೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ