ಮಳೆ: ಬೈಂದೂರು ಪರಿಸರದಲ್ಲಿ ಅಪಾರ ಹಾನಿ
4 ದನಗಳು ನೀರುಪಾಲು 5 ಸಾವಿರ ಕೋಳಿಗಳ ಸಾವು
Team Udayavani, Sep 7, 2020, 11:15 PM IST
ಹಾನಿಗೀಡಾಗಿರುವ ತೆನೆಭರಿತ ಭತ್ತದ ಪೈರು.
ಬೈಂದೂರು: ರವಿವಾರ ಸಂಜೆ ಸುರಿದ ಮಳೆಗೆ ಬೈಂದೂರು ಪರಿಸರದಲ್ಲಿ ಅಪಾರ ಹಾನಿ ಸಂಭವಿಸಿದೆ. ಕಾಲೊ¤àಡು ಗ್ರಾಮದ ಪೈನಾಡಿ ನದಿ ತೀರದ ಮನೆಗಳಿಗೆ ನೀರು ನುಗ್ಗಿದೆ. ಅಪಾರ ಕೃಷಿ ಭೂಮಿಗೂ ಹಾನಿ ಸಂಭವಿಸಿದೆ. ನಾಗಯ್ಯ ಪೂಜಾರಿ ಅವರ ಕೊಟ್ಟಿಗೆಗೆ ನೀರು ನುಗ್ಗಿ ನಾಲ್ಕು ದನಗಳು ನೀರುಪಾಲಾಯಾಗಿವೆ. ಯಡ್ತರೆ ಗ್ರಾಮದ ಚತಕಲ್ ಅತ್ಯಾಡಿಯ ಬಿ.ಜೆ. ಬೆನ್ನಿ ಅವರ ಕೋಳಿ ಫಾರ್ಮ್ಗೆ ನೀರು ನುಗ್ಗಿ 5 ಸಾವಿರ ಕೋಳಿಗಳು ಸತ್ತು ಹೋಗಿವೆ. ಅಂದಾಜು 6 ಲಕ್ಷ ರೂ. ನಷ್ಟ ಸಂಭವಿಸಿದೆ.
ಯಳಜಿತ ಗ್ರಾಮದ ತೊಂಡ್ಲೆ ದೇವಪ್ಪ ಪೂಜಾರಿ ಮೊಳಹಿತ್ಲು ಅವರ ಮನೆಗೆ ನೀರು ನುಗ್ಗಿ ಆವರಣಗೋಡೆ, ಅಂಗಳದ ನೀರು ಮನೆಗೆನುಗ್ಗಿ 1 ಲಕ್ಷ ರೂ.ಗಳಿಗೂ ಅಧಿಕ ನಷ್ಟ ಉಂಟಾಗಿದೆ. ಉಪ್ಪುಂದ ಹೊಳ್ಳರಹಿತ್ಲು ಬಳಿ ಸಿಡಿಲು ಬಡಿದು ಗಿರಿಜಾ ಮಡಿವಾಳ ಅವರ ಮನೆಯ
ಗೋಡೆ ಬಿರುಕು ಬಿಟ್ಟಿದೆ. ವಿದ್ಯುತ್ ಸಲಕರಣೆಗಳು ಸುಟ್ಟು ಹೋಗಿವೆ. ಪೈಮಾಡಿಯಲ್ಲಿ ಮೋರಿಯ ಭಾಗ ಕೊಚ್ಚಿ ಹೋಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ