ಕಂದಾಯ ಸೇವೆಯಲ್ಲಿ ನಿರಂತರ ನಂ. 1: ಎಸಿ ಕೆ. ರಾಜು
Team Udayavani, Jul 2, 2021, 5:30 AM IST
ಕುಂದಾಪುರ: ಕಂದಾಯ ಸೇವೆ ನೀಡುವಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲಿ ಕಳೆದ 19 ತಿಂಗಳುಗಳಿಂದ ನಿರಂತರ ನಂ.1 ಸ್ಥಾನದಲ್ಲಿದ್ದು ಈ ತಿಂಗಳಲ್ಲೂ ದಾಖಲೆ ಮುಂದುವರಿಸಿದೆ. ಆದ್ದರಿಂದ ಇದಕ್ಕೆ ಕಾರಣರಾದ ಕಂದಾಯ ಸಿಬಂದಿಯನ್ನು ಕಂದಾಯ ದಿನಾಚರಣೆ ಸಂದರ್ಭ ನೆನೆಯಬೇಕಾದುದು ಕರ್ತವ್ಯ ಎಂದು ಉಪವಿಭಾಗ ಸಹಾಯಕ ಕಮಿಷನರ್ ಕೆ. ರಾಜು ಹೇಳಿದರು.
ಅವರು ಗುರುವಾರ ಇಲ್ಲಿನ ಜೆ.ಎಲ್. ಬಿ. ರಸ್ತೆಯ ರುದ್ರಭೂಮಿಯಲ್ಲಿ ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಕೇಂದ್ರ ಸಂಘದ ಸಹಯೋಗದಲ್ಲಿ ತಾ| ಆಡಳಿತದ ಜತೆಗೂಡಿ ಗ್ರಾಮ ಲೆಕ್ಕಾಧಿಕಾರಿಗಳ ಸಂಘ, ಕಂದಾಯ ನೌಕರರ ಸಂಘ, ಗ್ರಾಮ ಸಹಾಯಕರ ಸಂಘದ ವತಿಯಿಂದ ಕಂದಾಯ ದಿನಾಚರಣೆ ಹಾಗೂ ಕಂದಾಯ ಸಚಿವ ಆರ್. ಅಶೋಕ್ ಅವರ ಜನ್ಮದಿನ ಪ್ರಯುಕ್ತ ಹಸುರೋತ್ಸವ ಕಾರ್ಯಕ್ರಮದ ಅಂಗವಾಗಿ ಗಿಡ ನೆಟ್ಟು ಮಾತನಾಡಿದರು.
ತಹಶೀಲ್ದಾರ್ ಆನಂದಪ್ಪ ಕೆ. ನಾಯ್ಕ, ಗ್ರೇಡ್ 2 ತಹಶೀಲ್ದಾರ್ ರಾಮಚಂದ್ರ ಹೆಬ್ಟಾರ್, ಉಪ ತಹಶೀಲ್ದಾರ್ ಶಂಕರ್, ಸಹಾಯಕ ವಲಯ ಅರಣ್ಯಾಧಿಕಾರಿ ಹಸ್ತಾ ಶೆಟ್ಟಿ, ಪುರಸಭೆ ಸದಸ್ಯ ಪ್ರಭಾಕರ ವಿ., ಗ್ರಾಮ ಲೆಕ್ಕಾಧಿಕಾರಿ, ಸಂಘದ ಜಿಲ್ಲಾಧ್ಯಕ್ಷ ಭರತ್ ವಿ. ಶೆಟ್ಟಿ, ತಾ| ಸಂಘದ ಅಧ್ಯಕ್ಷ ಕಾಂತರಾಜ್, ಉಪಾಧ್ಯಕ್ಷ ಶಿವರಾಯ್, ಗ್ರಾಮ ಸಹಾಯಕರ ಸಂಘದ ಅಧ್ಯಕ್ಷ ದಿನೇಶ್, ಕಾರ್ಕಳ ತಾ| ಕಚೇರಿಯ ಪ್ರಥಮ ದರ್ಜೆ ಸಹಾಯಕಿ ಲತಾ, ಪುರಸಭೆ ಆಹಾರ ನಿರೀಕ್ಷಕ ಶರತ್ ಖಾರ್ವಿ, ಗಣೇಶ್ ಜನ್ನಾಡಿ, ಕುಂದಾಪುರ ವಿಎ ಆನಂದ್ ಉಪಸ್ಥಿತರಿದ್ದರು. ಪ್ರಸ್ತಾವಿಸಿದ ವಂಡ್ಸೆ ಹೋಬಳಿ ಕಂದಾಯ ನಿರೀಕ್ಷಕ ರಾಘವೇಂದ್ರ ಡಿ., ಹಸುರೋತ್ಸವ ಪ್ರಯುಕ್ತ 1 ಲಕ್ಷ ಗಿಡ ನೆಡುವ, ವಿತರಿಸುವ ಸಂಕಲ್ಪವನ್ನು ಸಂಘ ಹೊಂದಿದೆ ಎಂದರು.
ಮಾತೃ ಇಲಾಖೆ : ಜಿಲ್ಲಾಮಟ್ಟದಲ್ಲಿ ಮಾತ್ರ ನಡೆಯುತ್ತಿದ್ದ ಕಂದಾಯ ಅಧಿಕಾರಿಗಳ ಸಭೆ ಉಡುಪಿ ಜಿಲ್ಲೆಯಲ್ಲಿ ಈಗಿನ ಜಿಲ್ಲಾಧಿಕಾರಿಗಳಿಂದಾಗಿ ಬೇರೆ ಬೇರೆ ತಾ| ಗಳಲ್ಲಿ ನಡೆಯುತ್ತಿದೆ. ಇದರಿಂದಾಗಿ ಆಡಳಿತಕ್ಕೆ ಚುರುಕು ಮುಟ್ಟಿದಂತಾಗುತ್ತದೆ. ಎಲ್ಲ ಇಲಾಖೆಗಳ ಮಾತೃ ಇಲಾಖೆಯಂತಿರುವ ಕಂದಾಯ ಇಲಾಖೆಯ ಸೇವೆ ನ್ಯೂನತೆ ಇಲ್ಲದೆ ನಡೆಯಬೇಕೆನ್ನುವುದು ಎಲ್ಲರ ಆಶಯ. ಹಸುರು ಕರ್ನಾಟಕ ಪ್ರಯುಕ್ತ ನೆಟ್ಟ ಗಿಡಗಳ ಜತೆಗೆ ಸೆಲ್ಫಿ ತೆಗೆದಿರಿಸಿಕೊಂಡು ಮುಂದಿನ ವರ್ಷ ಅದೇ ಗಿಡದ ಜತೆ ಸೆಲ್ಫಿ ತೆಗೆಯಬೇಕು. ಆಗ ಆ ಗಿಡವನ್ನು ಪೋಷಿಸುವ ಜವಾಬ್ದಾರಿ ಬರುತ್ತದೆ ಎಂದು ಕೆ. ರಾಜು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಮಹಿಳಾ ಮೀಸಲಾತಿ ಕೊಟ್ಟಿದ್ದು ಮೋದಿ, ಕಾಂಗ್ರೆಸ್ನಿಂದ ಸುಳ್ಳಿನ ರಾಜಕಾರಣ: BYR
Theft; 13 ರಾಜ್ಯಗಳಿಗೆ ಬೇಕಾಗಿದ್ದ ಕಳ್ಳ ಕೋಟದಲ್ಲಿ ಪೊಲೀಸರ ಬಲೆಗೆ!
Kota; 1 ಕೋಟಿ ರೂ. ಮೌಲ್ಯದ 1.2 ಕೆಜಿ ಚಿನ್ನ ವಶ: ಚಿತ್ರ ನಿರ್ಮಾಪಕನ ಮನೆಯಿಂದ ಕದ್ದಾತ ಸೆರೆ
Heavy Rain ಸಿದ್ದಾಪುರ: ಮನೆಗೆ ಮರ ಬಿದ್ದು ಮೂವರಿಗೆ ಗಾಯ
Kundapura: ಕಿರುಕುಳ; ಆರೋಪಿಗೆ ನಿರೀಕ್ಷಣ ಜಾಮೀನು
MUST WATCH
ಹೊಸ ಸೇರ್ಪಡೆ
ಕಾಂಗ್ರೆಸ್ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ
Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ
Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ