ಏರುಗತಿಯಲ್ಲಿದೆ ತರಕಾರಿ ದರ: ಈರುಳ್ಳಿ, ಕ್ಯಾಬೇಜ್‌, ಬೀಟ್‌ರೂಟ್‌ ದುಪ್ಪಟ್ಟು ಬೆಲೆ


Team Udayavani, Oct 22, 2020, 10:33 PM IST

ಏರುಗತಿಯಲ್ಲಿದೆ ತರಕಾರಿ ದರ: ಈರುಳ್ಳಿ, ಕ್ಯಾಬೇಜ್‌, ಬೀಟ್‌ರೂಟ್‌ ದುಪ್ಪಟ್ಟು ಬೆಲೆ

ಕುಂದಾಪುರ: ನವರಾತ್ರಿ ಸಂದರ್ಭ ಸಸ್ಯಾಹಾರ ಖಾದ್ಯ ತಯಾರಿಗಾಗಿ ತರಕಾರಿಗೆ ಬೇಡಿಕೆ ಹೆಚ್ಚಾದಂತೆಯೇ ದರವೂ ಏರಿಕೆಯಾಗುತ್ತಿದೆ. ಈರುಳ್ಳಿ, ಕ್ಯಾಬೇಜ್‌, ಬೀಟ್‌ರೂಟ್‌ ದರ ದುಪ್ಪಟ್ಟಾಗುತ್ತಿದೆ. ಇನ್ನೂ ಏರಿಕೆಯಾಗುವ ಸಂಭವ ಇದೆ ಎನ್ನುತ್ತವೆ ವ್ಯಾಪಾರಿ ವಲಯಗಳು.

ಸಗಟು ದರ
ಉಡುಪಿ ಹಾಗೂ ಕುಂದಾಪುರದಲ್ಲಿ ಸಗಟು ಖರೀದಿಯಲ್ಲಿಯೇ ಈರುಳ್ಳಿ ದರ ನೂರರ ಗಡಿ ತಲುಪಿದೆ. ಇದನ್ನು ವ್ಯಾಪಾರಿಗಳು 130ರ ವರೆಗೆ ಮಾರಾಟ ಮಾಡಲಾರಂಭಿಸಿದ್ದಾರೆ. ಕಳೆದ 15 ದಿನಗಳಲ್ಲಿ 40-45 ರೂ.ಗಳಿಂದ 90ರೂ.ವರೆಗೆ ಈರುಳ್ಳಿ ದರ ಬಂದು ನಿಂತಿದೆ. ಮಹಾರಾಷ್ಟ್ರ, ಪೂನಾ ಮೊದಲಾದೆಡೆ ಲಾಕ್‌ಡೌನ್‌ ಮೊದಲಾದ ಕಾರಣಗಳಿಂದ ಈರುಳ್ಳಿ ಎಪಿಎಂಸಿ ಮೂಲಕ ಸರಬರಾಜು ಆಗುತ್ತಿಲ್ಲ. ಮಹಾರಾಷ್ಟ್ರದಲ್ಲೂ ಮಳೆ, ಈರುಳ್ಳಿ ಬೆಳೆಯುವ ಉತ್ತರ ಕರ್ನಾಟಕದಲ್ಲೂ ಮಳೆಯಾದ ಪರಿಣಾಮವಾಗಿ ಈರುಳ್ಳಿ ಪೂರೈಕೆಯಾಗುತ್ತಿಲ್ಲ.  ಹಳೆ ಈರುಳ್ಳಿ ಖಾಲಿಯಾಗಿ ಹೊಸ ಈರುಳ್ಳಿ ಈ ಸಮಯದಲ್ಲಿ ಮಾರುಕಟ್ಟೆಗೆ ಬರಬೇಕಿತ್ತು. ಆದರೆ ಮಳೆ ಕಾರಣದಿಂದ ಹೊಸ ಈರುಳ್ಳಿ ಬೆಳೆಗೆ ಹಾನಿಯಾಗಿದ್ದು ಹೊಸದು ಬರುತ್ತಿಲ್ಲ, ಹಳೆಯದು ಸಾಲುತ್ತಿಲ್ಲ ಎನ್ನುವಂತಾಗಿದೆ.

ಖರೀದಿ ದೂರ
ಒಂದೆಡೆ ಈರುಳ್ಳಿ ಬೆಲೆ ಏರಿದ್ದರೆ ಇನ್ನೊಂದೆಡೆ ಕ್ಯಾಬೇಜ್‌, ಬೀಟ್‌ರೂಟ್‌ ಮೊದಲಾದ ತರಕಾರಿಗಳ ಬೆಲೆಯೂ ದುಪ್ಪಟ್ಟಾಗಿದೆ. ಹೀಗೆ ಬೆಲೆ ಎರಡುಪಟ್ಟಾದ ಉದಾಹರಣೆಯೇ ಕಡಿಮೆ ಎನ್ನುತ್ತಾರೆ ವ್ಯಾಪಾರಿಗಳು. ತರಕಾರಿ ಅಂಗಡಿಗೆ ಆಗಮಿಸುವಾಗಲೇ ದೂರದಲ್ಲೇ ಈರುಳ್ಳಿ ಹಾಗೂ ಟೊಮೆಟೊ ದರ ಕೇಳಿ ಮುಂದಿನ ಖರೀದಿ ಕುರಿತು ತೀರ್ಮಾನಿಸುತ್ತಿದ್ದಾರೆ. ಒಟ್ಟು ತರಕಾರಿ ಖರೀದಿಯಲ್ಲಿ ಅರ್ಧಕ್ಕಿಂತ ಹೆಚ್ಚು ಮೊತ್ತ ಈರುಳ್ಳಿಗೇ ಆಗುವ ಅಪಾಯ ಇದೆ ಎಂದು ಈರುಳ್ಳಿ ಖರೀದಿಸದೆ ಅನೇಕರು ಇತರ ತರಕಾರಿ ಮಾತ್ರ ಖರೀದಿಸುತ್ತಿದ್ದಾರೆ ಎನ್ನುವುದು ಮಾರುಕಟ್ಟೆಯಲ್ಲಿ ಕಂಡು ಬಂತು.

ದುಪ್ಪಟ್ಟು ಬೆಲೆ
ಕ್ಯಾಬೇಜ್‌ ದರ 30 ರೂ. ಇದ್ದುದು 65 ರೂ. ಆಗಿದೆ. ಬೀಟ್‌ರೂಟ್‌ 30-35 ರೂ. ಇದ್ದುದು 60 ರೂ. ಆಗಿದೆ. ಬೀನ್ಸ್‌ ಬೆಲೆ 80ರಿಂದ 70 ರೂ.ಗೆ ಇಳಿದಿದೆ. ನುಗ್ಗೆ 100ರ ದರದಲ್ಲಿದ್ದರೆ ಟೊಮೆಟೊ ಕೂಡ 40ರ ಆಸುಪಾಸಿನಲ್ಲಿಯೇ ಇದೆ. ಬೆಂಡೆಕಾಯಿ ಊರಿನದ್ದು ಇನ್ನೂ ಮಾರುಕಟ್ಟೆಗೆ ಬಂದಿಲ್ಲ. ಊರ ತೊಂಡೆಕಾಯಿ ಇನ್ನು 15 ದಿನಗಳಲ್ಲಿ ಮಾರುಕಟ್ಟೆಗೆ ಆಗಮಿಸುವ ಸಾಧ್ಯತೆಯಿದ್ದು ಆರಂಭದಲ್ಲೇ 100 ರೂ. ದರ ಇರಲಿದೆ. ಅನಂತರದ 15 ದಿನಗಳಲ್ಲಿ ದರ ಕಡಿಮೆಯಾಗಿ 60-50 ರೂ.ಗೆ ನಿಲ್ಲಲಿದೆ. ಕಳೆದ ವರ್ಷದ ಸೀಸನ್‌ ಅನಂತರ ಈಗ ತಾನೆ ಸಾಣೆಕಲ್ಲು ಸಾಂಬ್ರಾಣಿಗಡ್ಡೆ ಮಾರುಕಟ್ಟೆಗೆ ಬರಲಾರಂಭಿಸಿದ್ದು 150-160 ರೂ. ದರ ಇದೆ. ಒಟ್ಟಿನಲ್ಲಿ ತರಕಾರಿ ಮಾರುಕಟ್ಟೆಯಲ್ಲಿ ಖರೀದಿಗೆ ಹೋದಾಗ ಎಚ್ಚರದಿಂದ ಖರೀದಿ ಮಾಡಬೇಕಾದ ಸ್ಥಿತಿ ಬಂದಿದೆ.

ಇನ್ನೂ ಏರಿಕೆ
ಹೊಸ ಬೆಳೆ ಬಂದರೂ ಗದ್ದೆಯಲ್ಲಿ ಸಾಕಷ್ಟು ಬಿಸಿಲು ಬಿದ್ದು ಒಣಗದ ಕಾರಣ ಕೊಳೆಯುತ್ತಿದೆ. ಇದರಿಂದ ಅಂಗಡಿಯವರು ಸಗಟು ಖರೀದಿಸಿ ಸ್ಟಾಕ್‌ ಇಟ್ಟುಕೊಳ್ಳುತ್ತಿಲ್ಲ. ಗ್ರಾಹಕರಿಗೆ ಮನೆಗೆ ಒಯ್ದರೆ 4-5 ದಿನಗಳ ಮಟ್ಟಿಗಷ್ಟೇ ಇಟ್ಟುಕೊಳ್ಳುವಂತೆ ಹೊಸ ಈರುಳ್ಳಿ ಬಾಳಿಕೆ ಬರುತ್ತಿದ್ದು ಕೊಳೆಯದ ಈರುಳ್ಳಿ ದೊರೆಯದೇ ವ್ಯಾಪಾರಿಗಳಿಗೂ ತೆಗೆದಿರಿಸಿಕೊಳ್ಳಲಾಗದೇ ಬೆಲೆ ಸ್ಥಿರತೆ ಕಾಪಾಡಲು ಸಾಧ್ಯವಾಗುತ್ತಿಲ್ಲ. ಕಳೆದ ವರ್ಷ ಇದೇ ವೇಳೆ 180 ರೂ.ವರೆಗೆ ಹೋದ ಈರುಳ್ಳಿ ಈಗಲೇ 130 ಆಗುವ ಸಾಧ್ಯತೆಯಿದ್ದು ಇನ್ನೂ ಬೆಲೆ ಏರಬಹುದು ಎಂಬ ನಿರೀಕ್ಷೆ ಇದೆ.

ದರ ಏರುತ್ತಿದೆ
ಈರುಳ್ಳಿ, ಕ್ಯಾಬೇಜ್‌, ಬೀಟ್‌ ರೂಟ್‌ ಮೊದಲಾದ ತರಕಾರಿಗಳ ದರ ಏರುತ್ತಿದ್ದು ಬೇಡಿಕೆಯಷ್ಟು ಲಭ್ಯವಾಗುತ್ತಿಲ್ಲ. ಸಂಗ್ರಹಕ್ಕೂ ಗುಣಮಟ್ಟದ ಬೆಳೆ ದೊರೆಯುತ್ತಿಲ್ಲ. ಸ್ವಲ್ಪ ಸಮಯದಲ್ಲಿ ಸರಿಹೋಗಬಹುದು, ಬೆಲೆ ಸ್ಥಿರವಾಗಬಹುದು.
-ಗಣೇಶ್‌ ತರಕಾರಿ ವ್ಯಾಪಾರಿ, ಕುಂದಾಪುರ

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

jaಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ

ಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ

raKundapura ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

Kundapura ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆKundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.