3 ತಿಂಗಳಿಂದ ಸಿಕ್ಕಿಲ್ಲ ವೇತನ! : ಗ್ರಾಮೀಣ ಗ್ರಂಥಪಾಲಕರ ಬದುಕು ಶೋಚನೀಯ
Team Udayavani, Sep 19, 2021, 8:30 AM IST
ಕುಂದಾಪುರ: ಗ್ರಾಮೀಣ ಗ್ರಂಥಾಲಯಗಳ ಗ್ರಂಥಪಾಲಕರು ತಮ್ಮ ಮಾಸಿಕ ವೇತನ ಹೆಚ್ಚಾಯಿತೆಂದು ಸಂಭ್ರಮಿಸಬೇಕಾದ ಹೊತ್ತಿನಲ್ಲೇ ಹಳೇ ಸಂಬಳವೂ ಬಾರದೇ ಸಂಕಷ್ಟ ಎದುರಿಸುತ್ತಿದ್ದಾರೆ.
ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಅಡಿಯಲ್ಲಿದ್ದ ಗ್ರಾ.ಪಂ.ಗಳ ಗ್ರಂಥಾಲಯಗಳನ್ನು 2019ರಲ್ಲಿ ಪಂಚಾಯತ್ ರಾಜ್ ಇಲಾಖೆಗೆ ವರ್ಗಾಯಿಸಲಾಗಿತ್ತು. ಇಲಾಖೆ ಬದಲಾದರೂ ವೇತನ ಮಾತ್ರ ಸಕಾಲದಲ್ಲಿ ಪಾವತಿಯಾಗುತ್ತಿಲ್ಲ. ಮೂರು ತಿಂಗಳಿನಿಂದಂತೂ ಹಿಂದೆ ಸಿಗುತ್ತಿದ್ದ ವೇತನ ಬಂದಿಲ್ಲ.
ಉಡುಪಿ ಹಾಗೂ ದ.ಕ. ಜಿಲ್ಲೆಗಳ 345 ಸೇರಿದಂತೆ ರಾಜ್ಯದಲ್ಲಿರುವ ಗ್ರಾ.ಪಂ.ಗಳ ಅಧೀನದ ಗ್ರಂಥಾಲಯಗಳಲ್ಲಿ ಒಟ್ಟು 5,623 ಮಂದಿ ಗ್ರಂಥಪಾಲಕರಿದ್ದಾರೆ.
ಗ್ರಾಮೀಣ ಗ್ರಂಥಪಾಲಕರಿಗೆ ಮಾಸಿಕ 7 ಸಾವಿರ ರೂ. ನೀಡು ತ್ತಿದ್ದು, ಜೂನ್ನಿಂದ 12 ಸಾವಿರ ರೂ.ಗೆ ಏರಿಕೆಯಾಗಿದೆ. ಇದೇ ವೇಳೆ ಗ್ರಂಥಾಲಯದ ಅವಧಿಯನ್ನೂ ಹೆಚ್ಚಿಸಲಾಗಿದೆ. ಹಿಂದೆ ದಿನಕ್ಕೆ 4 ಗಂಟೆ ಮಾತ್ರವಿದ್ದರೆ ಈಗ ಬೆಳಗ್ಗೆ 9ರಿಂದ 1ರ ವರೆಗೆ ಅಪರಾಹ್ನ 3ರಿಂದ 5ರ ವರೆಗೆ ತೆರೆದಿಡಬೇಕಿದೆ.
345 ಗ್ರಾಮೀಣ ಗ್ರಂಥಾಲಯ:
ಉಡುಪಿಯಲ್ಲಿ ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರಗಳಲ್ಲಿರುವ ಗ್ರಂಥಾಲಯಗಳೆಲ್ಲ ಸೇರಿ ಒಟ್ಟು 155 ಸಾರ್ವಜನಿಕ ಹಾಗೂ 8 ನಗರ ಕೇಂದ್ರಗಳಲ್ಲಿ ಗ್ರಂಥಾಲಯಗಳಿವೆ. ಅವುಗಳಲ್ಲಿ ಗ್ರಾಮೀಣ ಗ್ರಂಥಾಯಲಗಳ ಸಂಖ್ಯೆಯೇ 141. ದ.ಕ.ದಲ್ಲಿ 204 ಗ್ರಾಮೀಣ ಗ್ರಂಥಾಲಯಗಳಿದ್ದು, 7 ಸಾರ್ವಜನಿಕ, 4 ಕೊಳಚೆಗೇರಿ ಪ್ರದೇಶ ಹಾಗೂ 2 ಅಲೆಮಾರಿ ಪ್ರದೇಶದಲ್ಲಿ ಸೇರಿ ಒಟ್ಟು 217 ಗ್ರಂಥಾಲಯಗಳಿವೆ.
ಗ್ರಾಮೀಣ ಗ್ರಂಥಾಲಯ ಮೇಲ್ವಿಚಾರಕರು ಅಥವಾ ಗ್ರಂಥಪಾಲಕರ ಬದುಕು ಸಂಕಷ್ಟದಲ್ಲಿದೆ. ಜೂನ್ನಿಂದ ಮಾಸಿಕ ವೇತನ ಏರಿಕೆಯಾಗಿದ್ದರೂ ಪಾವತಿಯಾಗಿಲ್ಲ. ಇದನ್ನೇ ನಂಬಿಕೊಂಡು ನಾವು ಜೀವನ ಸಾಗಿಸುತ್ತಿರುವುದರಿಂದ ತುಂಬಾ ಕಷ್ಟವಾಗುತ್ತಿದೆ. ಪ್ರತೀ ತಿಂಗಳ ಕೊನೆಗೆ ಈ ಹಣ ಪಾವತಿಯಾದರೇ ತುಂಬಾ ಅನುಕೂಲವಾಗುತ್ತದೆ.– ಸುರೇಶ್, ಅಧ್ಯಕ್ಷರು, ಕುಂದಾಪುರ ತಾ| ಗ್ರಾಮೀಣ ಗ್ರಂಥಾಲಯ ನೌಕರರ ಸಂಘ
ಶೀಘ್ರ ಪಾವತಿಗೆ ಕ್ರಮ:
ಗ್ರಾಮೀಣ ಗ್ರಂಥಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರ ವೇತನವನ್ನು ಹೆಚ್ಚಿಸಲಾಗಿದೆ. 3 ತಿಂಗಳಿನಿಂದ ಪಾವತಿಯಾಗದಿರುವ ಬಗ್ಗೆ ಪರಿಶೀಲಿಸಿ ಆದಷ್ಟು ಬೇಗನೆ ವೇತನ ಪಾವತಿಗೆ ಕ್ರಮ ಕೈಗೊಳ್ಳುವೆ.– ಡಾ| ನವೀನ್ ಭಟ್, ಉಡುಪಿ ಜಿ.ಪಂ. ಸಿಇಒ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್