ಮೀನು ಬೇಟೆಯಲ್ಲಿ ತೊಡಗಿದ ಗ್ರಾಮೀಣ ತಂಡ
ಬಲೆಗೆ ಬಿತ್ತು ಭಾರೀ ಪ್ರಮಾಣದ ಮೀನು
Team Udayavani, Jun 20, 2020, 5:30 AM IST
ತೆಕ್ಕಟ್ಟೆ ತಾಲೂಕಿನಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ನಡುವೆ ಮಲ್ಯಾಡಿ ಸುತ್ತಮುತ್ತಲ ಹೊಳೆಸಾಲುಗಳಲ್ಲಿ ನೀರಿನ ಒಳ ಹರಿವು ಹೆಚ್ಚಾಗಿದ್ದು ಹಿಂಡಾಗಿ ಮೀನುಗಳು ಸಾಗಿ ಬಂದ ಹಿನ್ನೆಲೆಯಲ್ಲಿ ಸ್ಥಳೀಯ ಗ್ರಾಮೀಣ ಯುವಕರ ತಂಡವೊಂದು ಕಳೆದ ಮೂರು ದಿನದಿಂದ ಮೀನಿನ ಬೇಟೆಯಲ್ಲಿ ತೊಡಗಿತ್ತು.
ದೊಡ್ಡ ಗಾತ್ರದ ಮೀನುಗಳು
ಧಾರಾಕಾರವಾಗಿ ಸುರಿದ ಮಳೆಯ ಪರಿಣಾಮ ಗ್ರಾಮೀಣ ಭಾಗದ ತಗ್ಗು ಪ್ರದೇಶದಲ್ಲಿ ಹಾದು ಹೋಗುವ ಹೊಳೆ ಸಾಲುಗಳಲ್ಲಿ ಅಪಾರ ಪ್ರಮಾಣದ ಮೀನುಗಳು ಕಾಣಸಿಗುತ್ತಿವೆ.
ಐರ್, ಕಾಟ್ಲಾ , ಕೆಂಬೇರಿ, ಶಾಡಿ, ಮುಯಿಡಾ ಜಾತಿಗೆ ಸೇರಿದ ಭಾರೀ ಬೇಡಿಕೆಯ ಮೀನುಗಳು ಕಳೆದೆರಡು ದಿನಗಳಿಂದ ಅಲಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇದನ್ನೇ ಗುರಿಯಾಗಿಸಿಕೊಂಡು ಇಲ್ಲಿನ ಹರೀಶ್, ಪ್ರಶಾಂತ್, ರಾಘವೇಂದ್ರ, ಶ್ರೀನಿವಾಸ, ಸುಧೀರ್, ಚಂದ್ರ, ನವೀನ್, ದಾಸ್ ಸೇರಿದಂತೆ ಗ್ರಾಮೀಣ ಯುವಕರ ತಂಡ ಮಾಲಾಡಿ, ಮಲ್ಯಾಡಿ ಭಾಗಗಳಲ್ಲಿ ಬಲೆ ಬೀಸಿ ಮೀನು ಹಿಡಿದಿದ್ದಾರೆ.
ಮೀನಿಗೆ ಹೆಚ್ಚಿದ ಬೇಡಿಕೆ
ಸುಮಾರು ಒಂದು ಮೀನು ಮೂರು ಕೆ.ಜಿ.ಗೂ ಅಧಿಕ ತೂಕವಿದ್ದು, ಸುಮಾರು 500 ರೂ.ಯಿಂದ 600 ರೂ.ಗೂ ಅಧಿಕ ಬೆಲೆ ಇದೆ. ಪ್ರಸ್ತುತ ಸಮುದ್ರ ಮೀನುಗಾರಿಕೆ ನಿಷೇಧವಿರುವುದರಿಂದ ಗ್ರಾಮೀಣ ಭಾಗದಲ್ಲಿ ತಾಜಾ ಬಲೆ ಮೀನಿಗೆ ಬೇಡಿಕೆ ಹೆಚ್ಚಿದೆ.
25 ಕೆ.ಜಿ.ಗೂ ಅಧಿಕ ಕಾಟ್ಲಾ ಮೀನು
ಪ್ರತಿ ವರ್ಷದಂತೆ ಈ ಬಾರಿಯೂ ನಾಲ್ಕೈದು ಮಂದಿ ಸ್ನೇಹಿತರು ಒಗ್ಗೂಡಿ ಹವ್ಯಾಸಕ್ಕಾಗಿ ಮೀನು ಹಿಡಿಯುತ್ತಿದ್ದೇವೆ. ಸುಮಾರು 250 ಕೆ.ಜಿ.ಗೂ ಅಧಿಕ ದೊಡ್ಡ ಗಾತ್ರದ ಕಾಟ್ಲಾ ಮೀನುಗಳು ಬಲೆಗೆ ಬಿದ್ದಿವೆ. ಈ ಹೊಳೆ ಮೀನಿಗೆ ಭಾರೀ ಬೇಡಿಕೆ ಇದೆ.
– ಶ್ರೀನಿವಾಸ ಮಲ್ಯಾಡಿ,
ಮೀನು ಹಿಡಿಯುವ ಹವ್ಯಾಸಿ ತಂಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ