ಮರಳು, ವಿಜಯ ಬ್ಯಾಂಕ್, ಫ್ಲೈಓವರ್!
Team Udayavani, Apr 3, 2019, 11:05 AM IST
ಕುಂದಾಪುರ: ಕರಾವಳಿಯ ಚುನಾವಣ ಪ್ರಚಾರದಲ್ಲಿ ಈಗ ಮುಖ್ಯ ಸದ್ದು ಮರಳು, ಫ್ಲೈಓವರ್ ಮತ್ತು ವಿಜಯ ಬ್ಯಾಂಕ್! ಕ್ಷೀಣವಾದ ಧ್ವನಿ ಎತ್ತಿನಹೊಳೆಯದು.
ಫ್ಲೈಓವರ್
ಮಂಗಳೂರಿನ ಪಂಪ್ವೆಲ್, ಕುಂದಾಪುರದ ಶಾಸಿŒ ಸರ್ಕಲ್ ಫ್ಲೈಓವರ್ ಅರ್ಧಕ್ಕೆ ಬಾಕಿ ಯಾಗಿವೆ. ಈ ಕುರಿತು ಕಾಂಗ್ರೆಸ್- ಬಿಜೆಪಿ ಆರೋಪ -ಪ್ರತ್ಯಾರೋಪ ಮಾಡುತ್ತಿವೆ. ನಳಿನ್ ಅಂತೂ ಚುನಾವಣೆಗೆ ಮುನ್ನ ಹೇಗಾದರೂ ಲೋಕಾರ್ಪಣೆ ಮಾಡಬೇಕೆಂಬ ಹಠ ತೊಟ್ಟಿ ದ್ದರು. ಜಾಲತಾಣದಲ್ಲಿ ಫ್ಲೈಓವರ್ ಸಾಕಷ್ಟು ಟ್ರೋಲ್ಗೆ ಒಳಗಾಗಿದೆ. ಕಾಂಗ್ರೆಸ್ ಇದನ್ನೇ ಪದೇಪದೇ ಕೆಣಕಿತ್ತು. ಫ್ಲೈಓವರ್ ಆಗದೇ ಇರಲು ಲೋಬೋ, ಐವನ್, ಮನಪಾ ಆಯುಕ್ತರಾಗಿದ್ದ ಇಬ್ರಾಹಿಂ ಕಾರಣ ಎಂದು ನಳಿನ್ ಪ್ರತ್ಯಸ್ತ್ರ ಹೂಡಿದ್ದರು. ಕುಂದಾಪುರದ ಫ್ಲೈಓವರ್ ಕೂಡ ಸಾಕಷ್ಟು ಟೀಕೆ, ಟ್ರೋಲ್ಗೆ ಆಹಾರವಾಯಿತು. ಶೋಭಾ ತಲೆಕೆಡಿಸಿಕೊಳ್ಳುವ ಗೋಜಿಗೆ ಹೋಗಲಿಲ್ಲ. ಫ್ಲೈಓವರ್ ಕಾಂಗ್ರೆಸ್ ಸಂಸದರ ಕಾಲದ್ದು ಎಂದು ಉತ್ತರ ಕೊಟ್ಟು ನುಣುಚಿಕೊಂಡರು. ಆದರೆ ಜಾಲತಾಣಿಗರು ಟೀಕಿಸುವುದು ಬಿಡಲೇ ಇಲ್ಲ.
ಬ್ಯಾಂಕ್ ವಿಲೀನ
ವಿಜಯ ಬ್ಯಾಂಕ್ ಅವಿಭಜಿತ ದ.ಕ. ಜಿಲ್ಲೆ ಯೊಂದಿಗೆ ಬಂಧ ಹೊಂದಿದ್ದರೂ ಚುನಾವಣ ಅಸ್ತ್ರವಾಗಿಸುತ್ತಿರುವುದು ದ. ಕನ್ನಡದವರು ಮಾತ್ರ. ಸಂಸದ ನಳಿನ್ ಮೌನವೇ ವಿಲೀನಕ್ಕೆ ಕಾರಣ, ಅವರು ವಿಜಯ ಬ್ಯಾಂಕ್ನ್ನು ಗುಜರಾತಿ ಗಳಿಗೆ ಮಾರಾಟ ಮಾಡಿದ್ದಾರೆ ಎಂದು ಕಾಂಗ್ರೆಸ್ ನವರು ಹೇಳುತ್ತಿದ್ದಾರೆ. ಆದರೆ ವಾಸ್ತವ ಹೇಳುವಲ್ಲಿ ಸೋತ ಬಿಜೆಪಿಯವರು ಸುಂದರ ರಾಮ ಶೆಟ್ಟರ ಹೆಸರನ್ನು ರಸ್ತೆಗೆ ಇರಿಸಲು ಲೋಬೋ ಬಿಡಲಿಲ್ಲ, ಐವನ್ ಬಿಡಲಿಲ್ಲ ಎನ್ನುತ್ತಿದ್ದಾರೆ.
ಮರಳು ಮರುಳು
ಮರಳು ದೊರೆಯದ ಕಾರಣ ಕಾಮಗಾರಿ ವಿಳಂಬ, ಉದ್ಯೋಗ ಕಡಿಮೆ, ವಹಿವಾಟಿನ ಮೇಲೆ ಗಂಭೀರ ಪರಿಣಾಮಗಳಾಗಿವೆ. ಮರಳು ಚಿನ್ನದ ಬೆಲೆಯಲ್ಲಿ ಕಾಳಸಂತೆಯಲ್ಲಿ ಮಾರಾಟ ವಾಗುತ್ತಿದೆ. ಉಡುಪಿಯಲ್ಲಿ ಮರಳು ಸಮಸ್ಯೆಗೆ ಸಚಿವರಾಗಿದ್ದ ಪ್ರಮೋದ್ ಕಾರಣ ಎಂದು ಶೋಭಾ ಹೇಳಿಕೆ ಕೊಟ್ಟರೆ, ಶೋಭಾರಿಂದಾಗಿಯೇ ಮರಳು ಹೊರೆಯಾಗಿದೆ ಎಂದು ಪ್ರಮೋದ್ ಹೇಳುತ್ತಾರೆ.
ಎರಡೂ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಕಳೆದ ಚುನಾವಣೆ ಸಂದರ್ಭ ಎತ್ತಿನಹೊಳೆ ಯೋಜನೆ ನಿಲ್ಲಿಸಲು ಪಾದಯಾತ್ರೆ, ರಥಯಾತ್ರೆ, ಕರಸೇವೆ ಮಾಡುತ್ತೇವೆ, ಅಣೆಕಟ್ಟು ಒಡೆಯುತ್ತೇವೆ ಎಂದಿದ್ದವರು ಈ ಬಾರಿ ಅದರ ತಂಟೆಗೆ ಹೋಗಿಲ್ಲ. ಕರಾವಳಿಯ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರದ ಕಾಮಗಾರಿ ಒದಗಿಸುತ್ತೇವೆ ಎಂದ ಕಾಂಗ್ರೆಸಿಗರೂ ತಾವು ಹೇಳಿದ್ದನ್ನು ಮರೆತಿದ್ದಾರೆ.
ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ
Kundapur: ಬೈಕ್ ಢಿಕ್ಕಿ; ಸ್ಕೂಟರ್ ಸವಾರೆಗೆ ಗಾಯ
Congress;ಪ್ರತಾಪ್ಚಂದ್ರ ಶೆಟ್ಟಿ-ಜೆ.ಪಿ.ಹೆಗ್ಡೆ ಭೇಟಿ: ಕಾರ್ಯತಂತ್ರದ ಸಮಾಲೋಚನೆ
ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ
ಕಾಶ್ಮೀರದಲ್ಲಿ ಗುಂಡು ಹಾರಿಸಿ ಬಿಹಾರ ಕಾರ್ಮಿಕನ ಹತ್ಯೆ
MUST WATCH
ಹೊಸ ಸೇರ್ಪಡೆ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್