ಮರಳು, ವಿಜಯ ಬ್ಯಾಂಕ್‌, ಫ್ಲೈಓವರ್‌!


Team Udayavani, Apr 3, 2019, 11:05 AM IST

44

ಕುಂದಾಪುರ: ಕರಾವಳಿಯ ಚುನಾವಣ ಪ್ರಚಾರದಲ್ಲಿ ಈಗ ಮುಖ್ಯ ಸದ್ದು ಮರಳು, ಫ್ಲೈಓವರ್‌ ಮತ್ತು ವಿಜಯ ಬ್ಯಾಂಕ್‌! ಕ್ಷೀಣವಾದ ಧ್ವನಿ ಎತ್ತಿನಹೊಳೆಯದು.

ಫ್ಲೈಓವರ್‌
ಮಂಗಳೂರಿನ ಪಂಪ್‌ವೆಲ್‌, ಕುಂದಾಪುರದ ಶಾಸಿŒ ಸರ್ಕಲ್‌ ಫ್ಲೈಓವರ್‌ ಅರ್ಧಕ್ಕೆ ಬಾಕಿ ಯಾಗಿವೆ. ಈ ಕುರಿತು ಕಾಂಗ್ರೆಸ್‌- ಬಿಜೆಪಿ ಆರೋಪ -ಪ್ರತ್ಯಾರೋಪ ಮಾಡುತ್ತಿವೆ. ನಳಿನ್‌ ಅಂತೂ ಚುನಾವಣೆಗೆ ಮುನ್ನ ಹೇಗಾದರೂ ಲೋಕಾರ್ಪಣೆ ಮಾಡಬೇಕೆಂಬ ಹಠ ತೊಟ್ಟಿ ದ್ದರು. ಜಾಲತಾಣದಲ್ಲಿ ಫ್ಲೈಓವರ್‌ ಸಾಕಷ್ಟು ಟ್ರೋಲ್‌ಗೆ ಒಳಗಾಗಿದೆ. ಕಾಂಗ್ರೆಸ್‌ ಇದನ್ನೇ ಪದೇಪದೇ ಕೆಣಕಿತ್ತು. ಫ್ಲೈಓವರ್‌ ಆಗದೇ ಇರಲು ಲೋಬೋ, ಐವನ್‌, ಮನಪಾ ಆಯುಕ್ತರಾಗಿದ್ದ ಇಬ್ರಾಹಿಂ ಕಾರಣ ಎಂದು ನಳಿನ್‌ ಪ್ರತ್ಯಸ್ತ್ರ ಹೂಡಿದ್ದರು. ಕುಂದಾಪುರದ ಫ್ಲೈಓವರ್‌ ಕೂಡ ಸಾಕಷ್ಟು ಟೀಕೆ, ಟ್ರೋಲ್‌ಗೆ ಆಹಾರವಾಯಿತು. ಶೋಭಾ ತಲೆಕೆಡಿಸಿಕೊಳ್ಳುವ ಗೋಜಿಗೆ ಹೋಗಲಿಲ್ಲ. ಫ್ಲೈಓವರ್‌ ಕಾಂಗ್ರೆಸ್‌ ಸಂಸದರ ಕಾಲದ್ದು ಎಂದು ಉತ್ತರ ಕೊಟ್ಟು ನುಣುಚಿಕೊಂಡರು. ಆದರೆ ಜಾಲತಾಣಿಗರು ಟೀಕಿಸುವುದು ಬಿಡಲೇ ಇಲ್ಲ.

ಬ್ಯಾಂಕ್‌ ವಿಲೀನ
ವಿಜಯ ಬ್ಯಾಂಕ್‌ ಅವಿಭಜಿತ ದ.ಕ. ಜಿಲ್ಲೆ ಯೊಂದಿಗೆ ಬಂಧ ಹೊಂದಿದ್ದರೂ ಚುನಾವಣ ಅಸ್ತ್ರವಾಗಿಸುತ್ತಿರುವುದು ದ. ಕನ್ನಡದವರು ಮಾತ್ರ. ಸಂಸದ ನಳಿನ್‌ ಮೌನವೇ ವಿಲೀನಕ್ಕೆ ಕಾರಣ, ಅವರು ವಿಜಯ ಬ್ಯಾಂಕ್‌ನ್ನು ಗುಜರಾತಿ ಗಳಿಗೆ ಮಾರಾಟ ಮಾಡಿದ್ದಾರೆ ಎಂದು ಕಾಂಗ್ರೆಸ್‌ ನವರು ಹೇಳುತ್ತಿದ್ದಾರೆ. ಆದರೆ ವಾಸ್ತವ ಹೇಳುವಲ್ಲಿ ಸೋತ ಬಿಜೆಪಿಯವರು ಸುಂದರ ರಾಮ ಶೆಟ್ಟರ ಹೆಸರನ್ನು ರಸ್ತೆಗೆ ಇರಿಸಲು ಲೋಬೋ ಬಿಡಲಿಲ್ಲ, ಐವನ್‌ ಬಿಡಲಿಲ್ಲ ಎನ್ನುತ್ತಿದ್ದಾರೆ.

ಮರಳು ಮರುಳು
ಮರಳು ದೊರೆಯದ ಕಾರಣ ಕಾಮಗಾರಿ ವಿಳಂಬ, ಉದ್ಯೋಗ ಕಡಿಮೆ, ವಹಿವಾಟಿನ ಮೇಲೆ ಗಂಭೀರ ಪರಿಣಾಮಗಳಾಗಿವೆ. ಮರಳು ಚಿನ್ನದ ಬೆಲೆಯಲ್ಲಿ ಕಾಳಸಂತೆಯಲ್ಲಿ ಮಾರಾಟ ವಾಗುತ್ತಿದೆ. ಉಡುಪಿಯಲ್ಲಿ ಮರಳು ಸಮಸ್ಯೆಗೆ ಸಚಿವರಾಗಿದ್ದ ಪ್ರಮೋದ್‌ ಕಾರಣ ಎಂದು ಶೋಭಾ ಹೇಳಿಕೆ ಕೊಟ್ಟರೆ, ಶೋಭಾರಿಂದಾಗಿಯೇ ಮರಳು ಹೊರೆಯಾಗಿದೆ ಎಂದು ಪ್ರಮೋದ್‌ ಹೇಳುತ್ತಾರೆ.

ಎರಡೂ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಕಳೆದ ಚುನಾವಣೆ ಸಂದರ್ಭ ಎತ್ತಿನಹೊಳೆ ಯೋಜನೆ ನಿಲ್ಲಿಸಲು ಪಾದಯಾತ್ರೆ, ರಥಯಾತ್ರೆ, ಕರಸೇವೆ ಮಾಡುತ್ತೇವೆ, ಅಣೆಕಟ್ಟು ಒಡೆಯುತ್ತೇವೆ ಎಂದಿದ್ದವರು ಈ ಬಾರಿ ಅದರ ತಂಟೆಗೆ ಹೋಗಿಲ್ಲ. ಕರಾವಳಿಯ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರದ ಕಾಮಗಾರಿ ಒದಗಿಸುತ್ತೇವೆ ಎಂದ ಕಾಂಗ್ರೆಸಿಗರೂ ತಾವು ಹೇಳಿದ್ದನ್ನು ಮರೆತಿದ್ದಾರೆ.

 ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-congress

Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್‌ರಾಜ್‌ ಮೌರ್ಯ

7

Kundapur: ಬೈಕ್‌ ಢಿಕ್ಕಿ; ಸ್ಕೂಟರ್‌ ಸವಾರೆಗೆ ಗಾಯ

1-wewewe

Congress;ಪ್ರತಾಪ್‌ಚಂದ್ರ ಶೆಟ್ಟಿ-ಜೆ.ಪಿ.ಹೆಗ್ಡೆ ಭೇಟಿ: ಕಾರ್ಯತಂತ್ರದ ಸಮಾಲೋಚನೆ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

suicide

ಕಾಶ್ಮೀರದಲ್ಲಿ ಗುಂಡು ಹಾರಿಸಿ ಬಿಹಾರ ಕಾರ್ಮಿಕನ ಹತ್ಯೆ  

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

11-

Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ  

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.